<p><strong>ಕೈರೊ/ಜೆರುಸಲೇಂ</strong>: ದಕ್ಷಿಣ ಗಾಜಾ ಪಟ್ಟಿಯ ಪರಿಹಾರ ವಿತರಣಾ ಕೇಂದ್ರವೊಂದರ ಮೇಲೆ ಮಂಗಳವಾರ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಕನಿಷ್ಠ 27 ಮಂದಿ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಸತತ ಮೂರು ದಿನಗಳಿಂದ ದಾಳಿ ನಡೆಯುತ್ತಿರುವುದರಿಂದ ಆಹಾರ ವಿತರಣೆ ಸೇರಿದಂತೆ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. </p>.<p>ರಫಾದಲ್ಲಿರುವ ಪರಿಹಾರ ವಿತರಣೆ ಕೇಂದ್ರಕ್ಕೆ ನಿಯೋಜಿತ ಪ್ರವೇಶ ಮಾರ್ಗದ ನಿಯಮ ಉಲ್ಲಂಘಿಸಿ ಗುಂಪೊಂದು ಪ್ರವೇಶಿಸಲು ಮುಂದಾದಾಗ ಗುಂಡಿನ ದಾಳಿ ನಡೆಸಲಾಯಿತು. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.</p>.<p>‘ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಗಾಯಗೊಂಡ 184 ಜನರನ್ನು ರಫಾದ ಆರೋಗ್ಯ ಕೇಂದ್ರಕ್ಕೆ ತರಲಾಗಿದೆ. ಆಸ್ಪತ್ರೆಗೆ ತರುವಷ್ಟರಲ್ಲೇ ಇವರಲ್ಲಿ19 ಮಂದಿ ಮೃತಪಟ್ಟಿದ್ದರು’ ಎಂದು ರೆಡ್ಕ್ರಾಸ್ನ ಅಂತರರಾಷ್ಟ್ರೀಯ ಸಮಿತಿಯ ವಕ್ತಾರರೊಬ್ಬರು ತಿಳಿಸಿದ್ದಾರೆ. </p>.<p>‘ಪರಿಹಾರ ವಿತರಣೆ ಕೇಂದ್ರಕ್ಕೆ ಬಂದ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ ಎನ್ನುವುದನ್ನು ಇಸ್ರೇಲ್ ಸೇನೆ ಅಲ್ಲಗಳೆದಿದೆ. ಸಾವಿನ ಸಂಖ್ಯೆಯು ಹಮಾಸ್ನ ಕಟ್ಟು ಕಥೆ’ ಎಂದು ಹೇಳಿದೆ.</p>.<h2>ಸ್ವತಂತ್ರ ತನಿಖೆ ನಡೆಯಲಿ:</h2>.<p>‘ಪರಿಹಾರ ಪಡೆಯಲು ಸೇರಿದ್ದ ಪ್ಯಾಲೆಸ್ಟೀನಿಯರು ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಮೃತಪಟ್ಟಿರುವ ವಿಚಾರ ಗಾಬರಿ ಮೂಡಿಸಿದೆ. ಘಟನೆ ಬಗ್ಗೆ ಸ್ವಂತಂತ್ರ ತನಿಖೆ ನಡೆಯಬೇಕು’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಆಗ್ರಹಿಸಿದ್ದಾರೆ. </p>.<p>ದಕ್ಷಿಣ ಗಾಜಾ ಪಟ್ಟಿ ವ್ಯಾಪ್ತಿಯ ಜಿಲ್ಲೆಗಳ ನಿವಾಸಿಗಳಿಗೆ ಹೊಸ ಸ್ಥಳಾಂತರ ಆದೇಶವನ್ನು ಇಸ್ರೇಲ್ ಸೇನೆ ಹೊರಡಿಸಿದ್ದು, ಮುಂಬರುವ ದಿನಗಳಲ್ಲಿ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುವ ಸೂಚನೆ ನೀಡಿದೆ. </p>.<p>ನಿವಾಸಿಗಳು ಹೊಸ ಸ್ಥಳಾಂತರ ಆದೇಶದ ಅನ್ವಯ ಮಾವಸಿ ಪರಿಹಾರ ತಾಣದತ್ತ ಸಾಗುವಂತೆ ಇಸ್ರೇಲ್ ಸೇನೆ ಹೇಳಿದೆ. ಆದರೆ, ಈ ಜಾಗವು ಸುರಕ್ಷಿತವಲ್ಲ ಎಂದು ಪ್ಯಾಲೆಸ್ಟೀನ್ನ ಮತ್ತು ವಿಶ್ವಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.</p>.<h2>‘ಯುದ್ಧಾಪರಾಧ’:</h2>.<p>ಜಿನೇವಾ (ಎಎಫ್ಪಿ): ಗಾಜಾ ಪಟ್ಟಿಯ ಪರಿಹಾರ ವಿತರಣೆ ಕೇಂದ್ರದ ಮೇಲೆ ಇಸ್ರೇಲ್ ಸೇನೆ ನಡೆಸಿದ ಮಾರಣಾಂತಿಕ ದಾಳಿಯು ‘ಯುದ್ಧಾಪರಾಧ‘ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಲ್ಕರ್ ಟರ್ಕ್ ಹೇಳಿದ್ದಾರೆ.</p>.<p>‘ಪ್ರತಿ ದಾಳಿಯ ಬಗ್ಗೆಯೂ ನಿಕ್ಷಷ್ಪಪಾತ ತನಿಖೆ ನಡೆಯಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೈರೊ/ಜೆರುಸಲೇಂ</strong>: ದಕ್ಷಿಣ ಗಾಜಾ ಪಟ್ಟಿಯ ಪರಿಹಾರ ವಿತರಣಾ ಕೇಂದ್ರವೊಂದರ ಮೇಲೆ ಮಂಗಳವಾರ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಕನಿಷ್ಠ 27 ಮಂದಿ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಸತತ ಮೂರು ದಿನಗಳಿಂದ ದಾಳಿ ನಡೆಯುತ್ತಿರುವುದರಿಂದ ಆಹಾರ ವಿತರಣೆ ಸೇರಿದಂತೆ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. </p>.<p>ರಫಾದಲ್ಲಿರುವ ಪರಿಹಾರ ವಿತರಣೆ ಕೇಂದ್ರಕ್ಕೆ ನಿಯೋಜಿತ ಪ್ರವೇಶ ಮಾರ್ಗದ ನಿಯಮ ಉಲ್ಲಂಘಿಸಿ ಗುಂಪೊಂದು ಪ್ರವೇಶಿಸಲು ಮುಂದಾದಾಗ ಗುಂಡಿನ ದಾಳಿ ನಡೆಸಲಾಯಿತು. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.</p>.<p>‘ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಗಾಯಗೊಂಡ 184 ಜನರನ್ನು ರಫಾದ ಆರೋಗ್ಯ ಕೇಂದ್ರಕ್ಕೆ ತರಲಾಗಿದೆ. ಆಸ್ಪತ್ರೆಗೆ ತರುವಷ್ಟರಲ್ಲೇ ಇವರಲ್ಲಿ19 ಮಂದಿ ಮೃತಪಟ್ಟಿದ್ದರು’ ಎಂದು ರೆಡ್ಕ್ರಾಸ್ನ ಅಂತರರಾಷ್ಟ್ರೀಯ ಸಮಿತಿಯ ವಕ್ತಾರರೊಬ್ಬರು ತಿಳಿಸಿದ್ದಾರೆ. </p>.<p>‘ಪರಿಹಾರ ವಿತರಣೆ ಕೇಂದ್ರಕ್ಕೆ ಬಂದ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ ಎನ್ನುವುದನ್ನು ಇಸ್ರೇಲ್ ಸೇನೆ ಅಲ್ಲಗಳೆದಿದೆ. ಸಾವಿನ ಸಂಖ್ಯೆಯು ಹಮಾಸ್ನ ಕಟ್ಟು ಕಥೆ’ ಎಂದು ಹೇಳಿದೆ.</p>.<h2>ಸ್ವತಂತ್ರ ತನಿಖೆ ನಡೆಯಲಿ:</h2>.<p>‘ಪರಿಹಾರ ಪಡೆಯಲು ಸೇರಿದ್ದ ಪ್ಯಾಲೆಸ್ಟೀನಿಯರು ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಮೃತಪಟ್ಟಿರುವ ವಿಚಾರ ಗಾಬರಿ ಮೂಡಿಸಿದೆ. ಘಟನೆ ಬಗ್ಗೆ ಸ್ವಂತಂತ್ರ ತನಿಖೆ ನಡೆಯಬೇಕು’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಆಗ್ರಹಿಸಿದ್ದಾರೆ. </p>.<p>ದಕ್ಷಿಣ ಗಾಜಾ ಪಟ್ಟಿ ವ್ಯಾಪ್ತಿಯ ಜಿಲ್ಲೆಗಳ ನಿವಾಸಿಗಳಿಗೆ ಹೊಸ ಸ್ಥಳಾಂತರ ಆದೇಶವನ್ನು ಇಸ್ರೇಲ್ ಸೇನೆ ಹೊರಡಿಸಿದ್ದು, ಮುಂಬರುವ ದಿನಗಳಲ್ಲಿ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುವ ಸೂಚನೆ ನೀಡಿದೆ. </p>.<p>ನಿವಾಸಿಗಳು ಹೊಸ ಸ್ಥಳಾಂತರ ಆದೇಶದ ಅನ್ವಯ ಮಾವಸಿ ಪರಿಹಾರ ತಾಣದತ್ತ ಸಾಗುವಂತೆ ಇಸ್ರೇಲ್ ಸೇನೆ ಹೇಳಿದೆ. ಆದರೆ, ಈ ಜಾಗವು ಸುರಕ್ಷಿತವಲ್ಲ ಎಂದು ಪ್ಯಾಲೆಸ್ಟೀನ್ನ ಮತ್ತು ವಿಶ್ವಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.</p>.<h2>‘ಯುದ್ಧಾಪರಾಧ’:</h2>.<p>ಜಿನೇವಾ (ಎಎಫ್ಪಿ): ಗಾಜಾ ಪಟ್ಟಿಯ ಪರಿಹಾರ ವಿತರಣೆ ಕೇಂದ್ರದ ಮೇಲೆ ಇಸ್ರೇಲ್ ಸೇನೆ ನಡೆಸಿದ ಮಾರಣಾಂತಿಕ ದಾಳಿಯು ‘ಯುದ್ಧಾಪರಾಧ‘ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಲ್ಕರ್ ಟರ್ಕ್ ಹೇಳಿದ್ದಾರೆ.</p>.<p>‘ಪ್ರತಿ ದಾಳಿಯ ಬಗ್ಗೆಯೂ ನಿಕ್ಷಷ್ಪಪಾತ ತನಿಖೆ ನಡೆಯಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>