<p><strong>ಟೋಕಿಯೊ:</strong> ವಿಶ್ವದ ದಕ್ಷಿಣ ಭಾಗದಲ್ಲಿರುವ 125 ರಾಷ್ಟ್ರಗಳು ಭಾರತದ ನಾಯಕತ್ವದ ಮೇಲೆ ಹೆಚ್ಚಿನ ವಿಶ್ವಾಸವನ್ನು ಹೊಂದಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಶುಕ್ರವಾರ ಪ್ರತಿಪಾದಿಸಿದರು.</p>.<p>ಈ ರಾಷ್ಟ್ರಗಳ ಅಭಿಪ್ರಾಯಗಳು, ಅಹವಾಲು ಆಲಿಸಲು ಭಾರತ ಕಳೆದ ವರ್ಷ ಏರ್ಪಡಿಸಿದ್ದ ಎರಡೂ ಸಭೆಗಳಲ್ಲಿ ಚೀನಾ ಗೈರುಹಾಜರಾಗಿತ್ತು. ಜಿ20 ಸಭೆಗೂ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಉಪ ಪ್ರಧಾನಿ ಲಿ ಕಿಯಾಂಗ್ ಅವರನ್ನು ನಿಯೋಜಿಸಿದ್ದರು ಎಂದು ಉಲ್ಲೇಖಿಸಿದರು.</p>.<p>ಭಾರತ ಮತ್ತು ಜಪಾನ್ ಸಹಭಾಗಿತ್ವದ ನಿಕೇಹಿ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಎಸ್.ಜೈಶಂಕರ್ ಅವರು, ‘ದಕ್ಷಿಣದ ರಾಷ್ಟ್ರಗಳು ಹಲವು ವಿಷಯಗಳಲ್ಲಿ ಪರಸ್ಪರ ಸಹಮತ ಹೊಂದಿವೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಪರಸ್ಪರ ಸಹಮತ ಹೊಂದುವ ನಿಲುವಿಗೆ ಕೋವಿಡ್ ಸ್ಥಿತಿ ಬಳಿಕ ಹೆಚ್ಚಿನ ಬಲ ಬಂದಿದೆ. ಭಾರತ ಜಿ20 ಶೃಂಗದ ಅಧ್ಯಕ್ಷತೆ ವಹಿಸಿಕೊಳ್ಳುವ ವರೆಗೆ, ನಮ್ಮ ರಾಷ್ಟ್ರಗಳಿಗೆ ಸಂಬಂಧಿಸಿದ ವಿಷಯಗಳು ಜಿ20 ಕಾರ್ಯಸೂಚಿಯಲ್ಲೂ ಇರುವುದಿಲ್ಲ ಎಂದು ಭಾವಿಸಿದ್ದವು’ ಎಂದರು. </p>.<p>ಈ ರಾಷ್ಟ್ರಗಳ ಭಾವನೆಗಳಿಗೆ ಧ್ವನಿ ನೀಡಲು, ಅಭಿಪ್ರಾಯಗಳನ್ನು ಆಲಿಸಲು ಕಳೆದ ವರ್ಷ ಎರಡು ಸಭೆ ಮಾಡಿದ್ದೆವು. ಬಳಿಕ 125 ರಾಷ್ಟ್ರಗಳ ಅಭಿಪ್ರಾಯ ಆಧರಿಸಿ ಜಿ20 ಶೃಂಗದ ಮುಂದಿಟ್ಟಿದ್ದೆವು ಎಂದು ಜೈಶಂಕರ್ ತಿಳಿಸಿದರು.</p>.<p>ಆಫ್ರಿಕನ್ ಯೂನಿಯನ್ಗೆ ಭಾರತ ಅಧ್ಯಕ್ಷತೆಯಲ್ಲಿಯೇ ಜಿ20 ಸದಸ್ಯತ್ವ ಸಿಕ್ಕಿದ್ದು ಕಾಕತಾಳೀಯವಲ್ಲ ಎಂಬ ನಂಬಿಕೆಯೂ ಇದೆ. ಒಟ್ಟಾರೆ ಭಾರತದ ಮೇಲೆ ವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದರು.</p>.<p>ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ಜೊತೆಗೆ ಭಾರತದ ಸಂಬಂಧ ಕುರಿತು ಮಾತನಾಡಿದ ಅವರು, ಜಾಗತಿಕ ರಾಜಕಾರಣದಲ್ಲಿ ದೇಶಗಳು ಒಂದು ವಿಷಯ, ಒಂದು ನೀತಿಗೆ ಬದ್ಧವಾಗಿರುತ್ತವೆ. ನೀತಿಗಳ ಪಾಲನೆ ಕುರಿತಂತೆ ಭಾರತ ಎಲ್ಲ ರಾಷ್ಟ್ರಗಳಿಗಿಂತ ಮುಂದಿದೆ ಎಂದರು.</p>.<p><strong>ಅಕೀ ಅಬೆ ಭೇಟಿ, ಮೋದಿಯವರ ಪತ್ರ ಹಸ್ತಾಂತರ</strong></p>.<p>ಸಚಿವ ಎಸ್.ಜೈಶಂಕರ್ ಅವರು ಜಪಾನ್ನ ಮಾಜಿ ಪ್ರಧಾನಿ ದಿವಂಗತ ಶಿಂಜೊ ಅಬೆ ಅವರ ಪತ್ನಿ ಅಕೀ ಅಬೆ ಅವರನ್ನು ಭೇಟಿಯಾಗಿದ್ದು, ಪ್ರಧಾನಿಯವರ ಪತ್ರ ಹಸ್ತಾಂತರಿಸಿದರು. ಭಾರತ–ಜಪಾನ್ ಬಾಂಧವ್ಯ ವೃದ್ಧಿಯಲ್ಲಿ ಶಿಂಜೊ ಅವರ ಕೊಡುಗೆ ಸ್ಮರಿಸಿದರು.</p>.<p>ಜಪಾನ್ನ ನಾರಾದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಶಿಂಜೊ ಅಬೆ ಅವರ ಮೇಲೆ ಜುಲೈ 8, 2022ರಂದು ಗುಂಡಿನ ದಾಳಿ ನಡೆದಿದ್ದು, ಅವರು ಮೃತಪಟ್ಟಿದ್ದರು. ಜಪಾನ್ನಲ್ಲಿ ಸುದೀರ್ಘ ಅವಧಿ ಪ್ರಧಾನಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟೋಕಿಯೊ:</strong> ವಿಶ್ವದ ದಕ್ಷಿಣ ಭಾಗದಲ್ಲಿರುವ 125 ರಾಷ್ಟ್ರಗಳು ಭಾರತದ ನಾಯಕತ್ವದ ಮೇಲೆ ಹೆಚ್ಚಿನ ವಿಶ್ವಾಸವನ್ನು ಹೊಂದಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಶುಕ್ರವಾರ ಪ್ರತಿಪಾದಿಸಿದರು.</p>.<p>ಈ ರಾಷ್ಟ್ರಗಳ ಅಭಿಪ್ರಾಯಗಳು, ಅಹವಾಲು ಆಲಿಸಲು ಭಾರತ ಕಳೆದ ವರ್ಷ ಏರ್ಪಡಿಸಿದ್ದ ಎರಡೂ ಸಭೆಗಳಲ್ಲಿ ಚೀನಾ ಗೈರುಹಾಜರಾಗಿತ್ತು. ಜಿ20 ಸಭೆಗೂ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಉಪ ಪ್ರಧಾನಿ ಲಿ ಕಿಯಾಂಗ್ ಅವರನ್ನು ನಿಯೋಜಿಸಿದ್ದರು ಎಂದು ಉಲ್ಲೇಖಿಸಿದರು.</p>.<p>ಭಾರತ ಮತ್ತು ಜಪಾನ್ ಸಹಭಾಗಿತ್ವದ ನಿಕೇಹಿ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಎಸ್.ಜೈಶಂಕರ್ ಅವರು, ‘ದಕ್ಷಿಣದ ರಾಷ್ಟ್ರಗಳು ಹಲವು ವಿಷಯಗಳಲ್ಲಿ ಪರಸ್ಪರ ಸಹಮತ ಹೊಂದಿವೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಪರಸ್ಪರ ಸಹಮತ ಹೊಂದುವ ನಿಲುವಿಗೆ ಕೋವಿಡ್ ಸ್ಥಿತಿ ಬಳಿಕ ಹೆಚ್ಚಿನ ಬಲ ಬಂದಿದೆ. ಭಾರತ ಜಿ20 ಶೃಂಗದ ಅಧ್ಯಕ್ಷತೆ ವಹಿಸಿಕೊಳ್ಳುವ ವರೆಗೆ, ನಮ್ಮ ರಾಷ್ಟ್ರಗಳಿಗೆ ಸಂಬಂಧಿಸಿದ ವಿಷಯಗಳು ಜಿ20 ಕಾರ್ಯಸೂಚಿಯಲ್ಲೂ ಇರುವುದಿಲ್ಲ ಎಂದು ಭಾವಿಸಿದ್ದವು’ ಎಂದರು. </p>.<p>ಈ ರಾಷ್ಟ್ರಗಳ ಭಾವನೆಗಳಿಗೆ ಧ್ವನಿ ನೀಡಲು, ಅಭಿಪ್ರಾಯಗಳನ್ನು ಆಲಿಸಲು ಕಳೆದ ವರ್ಷ ಎರಡು ಸಭೆ ಮಾಡಿದ್ದೆವು. ಬಳಿಕ 125 ರಾಷ್ಟ್ರಗಳ ಅಭಿಪ್ರಾಯ ಆಧರಿಸಿ ಜಿ20 ಶೃಂಗದ ಮುಂದಿಟ್ಟಿದ್ದೆವು ಎಂದು ಜೈಶಂಕರ್ ತಿಳಿಸಿದರು.</p>.<p>ಆಫ್ರಿಕನ್ ಯೂನಿಯನ್ಗೆ ಭಾರತ ಅಧ್ಯಕ್ಷತೆಯಲ್ಲಿಯೇ ಜಿ20 ಸದಸ್ಯತ್ವ ಸಿಕ್ಕಿದ್ದು ಕಾಕತಾಳೀಯವಲ್ಲ ಎಂಬ ನಂಬಿಕೆಯೂ ಇದೆ. ಒಟ್ಟಾರೆ ಭಾರತದ ಮೇಲೆ ವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದರು.</p>.<p>ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ಜೊತೆಗೆ ಭಾರತದ ಸಂಬಂಧ ಕುರಿತು ಮಾತನಾಡಿದ ಅವರು, ಜಾಗತಿಕ ರಾಜಕಾರಣದಲ್ಲಿ ದೇಶಗಳು ಒಂದು ವಿಷಯ, ಒಂದು ನೀತಿಗೆ ಬದ್ಧವಾಗಿರುತ್ತವೆ. ನೀತಿಗಳ ಪಾಲನೆ ಕುರಿತಂತೆ ಭಾರತ ಎಲ್ಲ ರಾಷ್ಟ್ರಗಳಿಗಿಂತ ಮುಂದಿದೆ ಎಂದರು.</p>.<p><strong>ಅಕೀ ಅಬೆ ಭೇಟಿ, ಮೋದಿಯವರ ಪತ್ರ ಹಸ್ತಾಂತರ</strong></p>.<p>ಸಚಿವ ಎಸ್.ಜೈಶಂಕರ್ ಅವರು ಜಪಾನ್ನ ಮಾಜಿ ಪ್ರಧಾನಿ ದಿವಂಗತ ಶಿಂಜೊ ಅಬೆ ಅವರ ಪತ್ನಿ ಅಕೀ ಅಬೆ ಅವರನ್ನು ಭೇಟಿಯಾಗಿದ್ದು, ಪ್ರಧಾನಿಯವರ ಪತ್ರ ಹಸ್ತಾಂತರಿಸಿದರು. ಭಾರತ–ಜಪಾನ್ ಬಾಂಧವ್ಯ ವೃದ್ಧಿಯಲ್ಲಿ ಶಿಂಜೊ ಅವರ ಕೊಡುಗೆ ಸ್ಮರಿಸಿದರು.</p>.<p>ಜಪಾನ್ನ ನಾರಾದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಶಿಂಜೊ ಅಬೆ ಅವರ ಮೇಲೆ ಜುಲೈ 8, 2022ರಂದು ಗುಂಡಿನ ದಾಳಿ ನಡೆದಿದ್ದು, ಅವರು ಮೃತಪಟ್ಟಿದ್ದರು. ಜಪಾನ್ನಲ್ಲಿ ಸುದೀರ್ಘ ಅವಧಿ ಪ್ರಧಾನಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>