<p><strong>ಟೆಲ್ ಅವಿವ್:</strong> ಜೆರುಸಲೆಂ ಗುಂಡಿನ ದಾಳಿಯನ್ನು ತನ್ನ ರಾಜಧಾನಿಯ ಮೇಲೆ ನಡೆದ ಭಯಾನಕ ಭಯೋತ್ಪಾದಕ ದಾಳಿ ಎಂದು ಇಸ್ರೇಲ್ ಖಂಡಿಸಿದೆ. ಇಂತಹ ಘಟನೆಗಳು ತಮ್ಮ ದೇಶದ ಮೇಲೆ ಈ ಹಿಂದೆ ನಡೆದ ದೌರ್ಜನ್ಯಗಳನ್ನು ನೆನಪಿಸುತ್ತವೆ ಎಂದು ಇಸ್ರೇಲ್ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.</p><p>ಇಸ್ರೇಲ್ ಪೊಲೀಸರು, ತುರ್ತು ರಕ್ಷಣಾ ಸೇವೆಗಳು ಮತ್ತು ಸ್ಥಳೀಯ ಆಸ್ಪತ್ರೆಗಳ ಪ್ರಕಾರ, ಸೋಮವಾರ ಉತ್ತರ ಜೆರುಸಲೆಂನ ಜನನಿಬಿಡ ಬಸ್ ನಿಲ್ದಾಣದಲ್ಲಿ ಪ್ಯಾಲೆಸ್ಟೀನಿಯನ್ ದಾಳಿಕೋರರು ಗುಂಡು ಹಾರಿಸಿ, ಆರು ಜನರನ್ನು ಕೊಂದಿದ್ದಾರೆ. ಇನ್ನೂ 12 ಜನರು ಗಾಯಗೊಂಡಿದ್ದಾರೆ.</p><p>ಘಟನೆ ನಡೆದು ಗಂಟೆಗಳ ನಂತರ, ಪ್ರಸ್ತುತ ಭಾರತಕ್ಕೆ ಭೇಟಿ ನೀಡುತ್ತಿರುವ ಇಸ್ರೇಲ್ನ ಹಣಕಾಸು ಸಚಿವಾಲಯದ ಅಕೌಂಟೆಂಟ್ ಜನರಲ್ ಯಾಲಿ ರೋಥೆನ್ಬರ್ಗ್ ಪಿಟಿಐ ಜೊತೆ ಮಾತನಾಡಿದರು.</p><p>ದಾಳಿ ನಡೆದಿರುವ ಬಸ್ ನಿಲ್ದಾಣ ನನಗೆ ತಿಳಿದಿದೆ. ಆ ದಾಳಿಯಲ್ಲಿ ನನ್ನ ಉದ್ಯೋಗಿಗಳಲ್ಲಿ ಒಬ್ಬರ ತಾಯಿ ಸಹ ಕೊಲ್ಲಲ್ಪಟ್ಟಿದ್ದಾರೆ ಎಂದು ಅವರು ತಿಳಿಸಿದರು.</p><p>‘ಇದೊಂದು ದುರದೃಷ್ಟಕರ ಘಟನೆಯಾಗಿದೆ. ಅಮಾನವೀಯ ಕೃತ್ಯಗಳನ್ನು ಮಾಡುವ ಉಗ್ರಗಾಮಿಗಳನ್ನು ಮಟ್ಟ ಹಾಕಲು ಬಯಸುವ ಎಲ್ಲ ದೇಶಗಳ ಜೊತೆ ನಾವಿದ್ದೇವೆ. ಇಸ್ರೇಲ್ ಮತ್ತು ಭಾರತ ಅಂತಹದ್ದೇ ಒಪ್ಪಂದ ಹೊಂದಿವೆ’ಎಂದಿದ್ದಾರೆ.</p><p>ಇಂತಹ ಘಟನೆಗಳನ್ನು ನೋಡಿದಾಗ, ಇಸ್ರೇಲ್ನಲ್ಲಿ ಎರಡು ವರ್ಷಗಳ ಹಿಂದೆ ನಡೆದ ದೌರ್ಜನ್ಯಗಳು ನೆನಪಿಗೆ ಬರುತ್ತವೆ. ಮಾನವೀಯತೆಯ ಸುಧಾರಣೆಗಾಗಿ ಇದರ ವಿರುದ್ಧ ಹೋರಾಡಲು ನಮಗೆ ಜನರ ಕರೆ ಇದೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.</p><p>ರೋಥೆನ್ಬರ್ಗ್ ಪ್ರಸ್ತುತ ಇಸ್ರೇಲಿ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ನೇತೃತ್ವದ ಉನ್ನತ ಮಟ್ಟದ ನಿಯೋಗದ ಭಾಗವಾಗಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟೆಲ್ ಅವಿವ್:</strong> ಜೆರುಸಲೆಂ ಗುಂಡಿನ ದಾಳಿಯನ್ನು ತನ್ನ ರಾಜಧಾನಿಯ ಮೇಲೆ ನಡೆದ ಭಯಾನಕ ಭಯೋತ್ಪಾದಕ ದಾಳಿ ಎಂದು ಇಸ್ರೇಲ್ ಖಂಡಿಸಿದೆ. ಇಂತಹ ಘಟನೆಗಳು ತಮ್ಮ ದೇಶದ ಮೇಲೆ ಈ ಹಿಂದೆ ನಡೆದ ದೌರ್ಜನ್ಯಗಳನ್ನು ನೆನಪಿಸುತ್ತವೆ ಎಂದು ಇಸ್ರೇಲ್ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.</p><p>ಇಸ್ರೇಲ್ ಪೊಲೀಸರು, ತುರ್ತು ರಕ್ಷಣಾ ಸೇವೆಗಳು ಮತ್ತು ಸ್ಥಳೀಯ ಆಸ್ಪತ್ರೆಗಳ ಪ್ರಕಾರ, ಸೋಮವಾರ ಉತ್ತರ ಜೆರುಸಲೆಂನ ಜನನಿಬಿಡ ಬಸ್ ನಿಲ್ದಾಣದಲ್ಲಿ ಪ್ಯಾಲೆಸ್ಟೀನಿಯನ್ ದಾಳಿಕೋರರು ಗುಂಡು ಹಾರಿಸಿ, ಆರು ಜನರನ್ನು ಕೊಂದಿದ್ದಾರೆ. ಇನ್ನೂ 12 ಜನರು ಗಾಯಗೊಂಡಿದ್ದಾರೆ.</p><p>ಘಟನೆ ನಡೆದು ಗಂಟೆಗಳ ನಂತರ, ಪ್ರಸ್ತುತ ಭಾರತಕ್ಕೆ ಭೇಟಿ ನೀಡುತ್ತಿರುವ ಇಸ್ರೇಲ್ನ ಹಣಕಾಸು ಸಚಿವಾಲಯದ ಅಕೌಂಟೆಂಟ್ ಜನರಲ್ ಯಾಲಿ ರೋಥೆನ್ಬರ್ಗ್ ಪಿಟಿಐ ಜೊತೆ ಮಾತನಾಡಿದರು.</p><p>ದಾಳಿ ನಡೆದಿರುವ ಬಸ್ ನಿಲ್ದಾಣ ನನಗೆ ತಿಳಿದಿದೆ. ಆ ದಾಳಿಯಲ್ಲಿ ನನ್ನ ಉದ್ಯೋಗಿಗಳಲ್ಲಿ ಒಬ್ಬರ ತಾಯಿ ಸಹ ಕೊಲ್ಲಲ್ಪಟ್ಟಿದ್ದಾರೆ ಎಂದು ಅವರು ತಿಳಿಸಿದರು.</p><p>‘ಇದೊಂದು ದುರದೃಷ್ಟಕರ ಘಟನೆಯಾಗಿದೆ. ಅಮಾನವೀಯ ಕೃತ್ಯಗಳನ್ನು ಮಾಡುವ ಉಗ್ರಗಾಮಿಗಳನ್ನು ಮಟ್ಟ ಹಾಕಲು ಬಯಸುವ ಎಲ್ಲ ದೇಶಗಳ ಜೊತೆ ನಾವಿದ್ದೇವೆ. ಇಸ್ರೇಲ್ ಮತ್ತು ಭಾರತ ಅಂತಹದ್ದೇ ಒಪ್ಪಂದ ಹೊಂದಿವೆ’ಎಂದಿದ್ದಾರೆ.</p><p>ಇಂತಹ ಘಟನೆಗಳನ್ನು ನೋಡಿದಾಗ, ಇಸ್ರೇಲ್ನಲ್ಲಿ ಎರಡು ವರ್ಷಗಳ ಹಿಂದೆ ನಡೆದ ದೌರ್ಜನ್ಯಗಳು ನೆನಪಿಗೆ ಬರುತ್ತವೆ. ಮಾನವೀಯತೆಯ ಸುಧಾರಣೆಗಾಗಿ ಇದರ ವಿರುದ್ಧ ಹೋರಾಡಲು ನಮಗೆ ಜನರ ಕರೆ ಇದೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.</p><p>ರೋಥೆನ್ಬರ್ಗ್ ಪ್ರಸ್ತುತ ಇಸ್ರೇಲಿ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ನೇತೃತ್ವದ ಉನ್ನತ ಮಟ್ಟದ ನಿಯೋಗದ ಭಾಗವಾಗಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>