<p class="title"><strong>ಬ್ಯಾಂಕಾಕ್:</strong> ಉತ್ತರ ಮ್ಯಾನ್ಮಾರ್ನ ಕಚಿನ್ ರಾಜ್ಯದ ಪಕಂತ್ನ ಗಣಿಯಲ್ಲಿ ಬುಧವಾರ ಭೂಕುಸಿತವಾಗಿದ್ದು, 70 ಮಂದಿ ನಾಪತ್ತೆಯಾಗಿದ್ದಾರೆ. ಇವರಿಗಾಗಿ ಶೋಧಕಾರ್ಯ ನಡೆದಿದೆ.</p>.<p class="title">ಗಯುನಾರ್ ರಕ್ಷಣಾ ತಂಡದ ನ್ಯೊ ಚಾ ಅವರು, ‘ಶೋಧ ಕಾರ್ಯ ನಡೆದಿದೆ. ಅಕ್ಕಪಕ್ಕದ ಗಣಿಗಳ ಮಣ್ಣು, ತ್ಯಾಜ್ಯ 60 ಮೀಟರ್ನಷ್ಟು ಕುಸಿದಿದೆ. ಐವರು ಮಹಿಳೆಯರು ಮಣ್ಣಿನೊಳಗೆ ಸಿಲುಕಿದ್ದರು. ಒಬ್ಬನ ಶವವನ್ನು ತೆಗೆಯಲಾಗಿದೆ' ಎಂದು ತಿಳಿಸಿದ್ದಾರೆ.</p>.<p class="title">ರಕ್ಷಣಾ ಮತ್ತು ಅಗ್ನಿಶಾಮಕ ಸೇವೆಯ150 ಸಿಬ್ಬಂದಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ಬೆಟ್ಟ ಪ್ರದೇಶವಾಗಿರುವ ಇದು ಕಚಿನ್ ರಾಜ್ಯದ ದುರ್ಗಮ ಸ್ಥಳವಾಗಿದೆ. ಮ್ಯಾನ್ಮಾರ್ನ ದೊಡ್ಡ ನಗರ ಯಾಂಗಾನ್ನಿಂದ 950 ಕಿ.ಮೀ. ದೂರದಲ್ಲಿದೆ. ಅಪರೂಪದ, ಮೌಲ್ಯಯುತ ಕಲ್ಲುಗಳ ನಿಕ್ಷೇಪ ಇಲ್ಲಿದೆ.</p>.<p class="title">ಪಕಂತ್ ಪ್ರದೇಶದಲ್ಲಿರುವ ಗಣಿಯು ದುಬಾರಿ ಮೌಲ್ಯದ ಕಲ್ಲುಗಳ ಗಣಿಗಾರಿಕೆ ನಡೆಯುವ ಅತ್ಯಂತ ದೊಡ್ಡ ಗಣಿ. ಇದು, ಮ್ಯಾನ್ಮಾರ್ ಸೇನೆ ಮತ್ತು ಗೊರಿಲ್ಲಾ ಪಡೆಗಳ ನಡುವೆ ತೀವ್ರ ಘರ್ಷಣೆಯು ನಡೆದಿದ್ದ ಸ್ಥಳವೂ ಹೌದು.</p>.<p class="title">ಸುರಕ್ಷತೆ ಕ್ರಮವಹಿಸಿಲ್ಲ ಎಂದು ಸ್ಥಳೀಯ ಆಡಳಿತವು ಅನೇಕ ಗಣಿಗಳ ಲೈಸೆನ್ಸ್ ರದ್ದುಪಡಿಸಿತ್ತು. ಅಸುರಕ್ಷತೆ ನಡುವೆಯೇ ಗಣಿಗಾರಿಕೆ ಮುಂದುವರಿದಿದೆ. ಭೂಕುಸಿತದಿಂದಾಗಿ 2020ರ ಜುಲೈನಲ್ಲಿ 162 ಹಾಗೂ 2015ರ ನವೆಂಬರ್ನಲ್ಲಿ 113 ಮಂದಿ ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಬ್ಯಾಂಕಾಕ್:</strong> ಉತ್ತರ ಮ್ಯಾನ್ಮಾರ್ನ ಕಚಿನ್ ರಾಜ್ಯದ ಪಕಂತ್ನ ಗಣಿಯಲ್ಲಿ ಬುಧವಾರ ಭೂಕುಸಿತವಾಗಿದ್ದು, 70 ಮಂದಿ ನಾಪತ್ತೆಯಾಗಿದ್ದಾರೆ. ಇವರಿಗಾಗಿ ಶೋಧಕಾರ್ಯ ನಡೆದಿದೆ.</p>.<p class="title">ಗಯುನಾರ್ ರಕ್ಷಣಾ ತಂಡದ ನ್ಯೊ ಚಾ ಅವರು, ‘ಶೋಧ ಕಾರ್ಯ ನಡೆದಿದೆ. ಅಕ್ಕಪಕ್ಕದ ಗಣಿಗಳ ಮಣ್ಣು, ತ್ಯಾಜ್ಯ 60 ಮೀಟರ್ನಷ್ಟು ಕುಸಿದಿದೆ. ಐವರು ಮಹಿಳೆಯರು ಮಣ್ಣಿನೊಳಗೆ ಸಿಲುಕಿದ್ದರು. ಒಬ್ಬನ ಶವವನ್ನು ತೆಗೆಯಲಾಗಿದೆ' ಎಂದು ತಿಳಿಸಿದ್ದಾರೆ.</p>.<p class="title">ರಕ್ಷಣಾ ಮತ್ತು ಅಗ್ನಿಶಾಮಕ ಸೇವೆಯ150 ಸಿಬ್ಬಂದಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ಬೆಟ್ಟ ಪ್ರದೇಶವಾಗಿರುವ ಇದು ಕಚಿನ್ ರಾಜ್ಯದ ದುರ್ಗಮ ಸ್ಥಳವಾಗಿದೆ. ಮ್ಯಾನ್ಮಾರ್ನ ದೊಡ್ಡ ನಗರ ಯಾಂಗಾನ್ನಿಂದ 950 ಕಿ.ಮೀ. ದೂರದಲ್ಲಿದೆ. ಅಪರೂಪದ, ಮೌಲ್ಯಯುತ ಕಲ್ಲುಗಳ ನಿಕ್ಷೇಪ ಇಲ್ಲಿದೆ.</p>.<p class="title">ಪಕಂತ್ ಪ್ರದೇಶದಲ್ಲಿರುವ ಗಣಿಯು ದುಬಾರಿ ಮೌಲ್ಯದ ಕಲ್ಲುಗಳ ಗಣಿಗಾರಿಕೆ ನಡೆಯುವ ಅತ್ಯಂತ ದೊಡ್ಡ ಗಣಿ. ಇದು, ಮ್ಯಾನ್ಮಾರ್ ಸೇನೆ ಮತ್ತು ಗೊರಿಲ್ಲಾ ಪಡೆಗಳ ನಡುವೆ ತೀವ್ರ ಘರ್ಷಣೆಯು ನಡೆದಿದ್ದ ಸ್ಥಳವೂ ಹೌದು.</p>.<p class="title">ಸುರಕ್ಷತೆ ಕ್ರಮವಹಿಸಿಲ್ಲ ಎಂದು ಸ್ಥಳೀಯ ಆಡಳಿತವು ಅನೇಕ ಗಣಿಗಳ ಲೈಸೆನ್ಸ್ ರದ್ದುಪಡಿಸಿತ್ತು. ಅಸುರಕ್ಷತೆ ನಡುವೆಯೇ ಗಣಿಗಾರಿಕೆ ಮುಂದುವರಿದಿದೆ. ಭೂಕುಸಿತದಿಂದಾಗಿ 2020ರ ಜುಲೈನಲ್ಲಿ 162 ಹಾಗೂ 2015ರ ನವೆಂಬರ್ನಲ್ಲಿ 113 ಮಂದಿ ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>