<p><strong>ಕಠ್ಮಂಡು:</strong> ಭಾರತದ ಜಲಶಕ್ತಿ ಸಚಿವಾಲಯದ ಮೂವರು ಸದಸ್ಯರ ನಿಯೋಗ ನೇಪಾಳದ ಮಧೇಶ್ ಪ್ರಾಂತ್ಯದ ಮುಖ್ಯಮಂತ್ರಿ ಸತೀಶ್ ಕುಮಾರ್ ಸಿಂಗ್ ಅವರನ್ನು ಗುರುವಾರ ಭೇಟಿ ಮಾಡಿತು. ಮುಂಗಾರು ವಿಳಂಬದಿಂದ ನೇಪಾಳದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಭೆ ನಡೆಸಿತು. </p>.<p>ಭಾರತದ ನಿಯೋಗವು ಪ್ರಾಂತ್ಯದ ನೀರಿನ ಕೊರತೆಯನ್ನು ನೀಗಿಸಲು ಅಂತರ್ಜಲ ಬಳಕೆಯ ಬಗ್ಗೆ ಅತ್ಯಮೂಲ್ಯ ಮಾಹಿತಿಯನ್ನು ಒದಗಿಸಿದೆ ಎಂದು ಮುಖ್ಯಮಂತ್ರಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.</p>.<p class="title">ಪ್ರಾಂತ್ಯದ ವಿವಿಧ ಭಾಗಗಳ ಅಂತರ್ಜಲ ಲಭ್ಯತೆಯನ್ನು ನಿರ್ಣಯಿಸಲು ಭಾರತೀಯ ತಂತ್ರಜ್ಞರ ತಂಡ ಶೀಘ್ರದಲ್ಲೆ ವಿವರವಾದ ಅಧ್ಯಯನ ನಡೆಸಲಿದೆ ಎಂದು ನಿಯೋಗವು ಮುಖ್ಯಮಂತ್ರಿಗೆ ಭರವಸೆ ನೀಡಿತು.</p>.<p>ಭಾರತದ ಗಡಿ ಬಳಿಯ ಪ್ರಮುಖ ಕೃಷಿ ಪ್ರದೇಶವಾದ ಮಧೇಶ್ ಪ್ರಾಂತ್ಯದಲ್ಲಿ, ಈ ವರ್ಷದ ಮುಂಗಾರು ವೇಳೆ ತಡವಾಗಿ ಮತ್ತು ಅಸಮರ್ಪಕವಾಗಿ ಮಳೆ ಸುರಿದಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ರೈತರ ಜೀವನೋಪಾಯಕ್ಕೆ ಅಪಾಯವನ್ನುಂಟುಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು:</strong> ಭಾರತದ ಜಲಶಕ್ತಿ ಸಚಿವಾಲಯದ ಮೂವರು ಸದಸ್ಯರ ನಿಯೋಗ ನೇಪಾಳದ ಮಧೇಶ್ ಪ್ರಾಂತ್ಯದ ಮುಖ್ಯಮಂತ್ರಿ ಸತೀಶ್ ಕುಮಾರ್ ಸಿಂಗ್ ಅವರನ್ನು ಗುರುವಾರ ಭೇಟಿ ಮಾಡಿತು. ಮುಂಗಾರು ವಿಳಂಬದಿಂದ ನೇಪಾಳದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಭೆ ನಡೆಸಿತು. </p>.<p>ಭಾರತದ ನಿಯೋಗವು ಪ್ರಾಂತ್ಯದ ನೀರಿನ ಕೊರತೆಯನ್ನು ನೀಗಿಸಲು ಅಂತರ್ಜಲ ಬಳಕೆಯ ಬಗ್ಗೆ ಅತ್ಯಮೂಲ್ಯ ಮಾಹಿತಿಯನ್ನು ಒದಗಿಸಿದೆ ಎಂದು ಮುಖ್ಯಮಂತ್ರಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.</p>.<p class="title">ಪ್ರಾಂತ್ಯದ ವಿವಿಧ ಭಾಗಗಳ ಅಂತರ್ಜಲ ಲಭ್ಯತೆಯನ್ನು ನಿರ್ಣಯಿಸಲು ಭಾರತೀಯ ತಂತ್ರಜ್ಞರ ತಂಡ ಶೀಘ್ರದಲ್ಲೆ ವಿವರವಾದ ಅಧ್ಯಯನ ನಡೆಸಲಿದೆ ಎಂದು ನಿಯೋಗವು ಮುಖ್ಯಮಂತ್ರಿಗೆ ಭರವಸೆ ನೀಡಿತು.</p>.<p>ಭಾರತದ ಗಡಿ ಬಳಿಯ ಪ್ರಮುಖ ಕೃಷಿ ಪ್ರದೇಶವಾದ ಮಧೇಶ್ ಪ್ರಾಂತ್ಯದಲ್ಲಿ, ಈ ವರ್ಷದ ಮುಂಗಾರು ವೇಳೆ ತಡವಾಗಿ ಮತ್ತು ಅಸಮರ್ಪಕವಾಗಿ ಮಳೆ ಸುರಿದಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ರೈತರ ಜೀವನೋಪಾಯಕ್ಕೆ ಅಪಾಯವನ್ನುಂಟುಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>