<p><strong>ಇಸ್ಲಾಮಾಬಾದ್</strong>, <strong>ಲಾಹೋರ್</strong>: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಕೇಂದ್ರ ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದ ಪ್ರಧಾನಿ ಶೆಹಬಾಜ್ ಶರೀಫ್ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಬೆಳವಣಿಗೆಗಳ ಮಾಹಿತಿಯನ್ನು ಪಡೆದರು.</p>.<p>ಅನುಕೂಲಕರವಾದ ಸೇನಾ ಕಾರ್ಯಾಚರಣೆ, ಹೈಬ್ರಿಡ್ ಯುದ್ಧದ ಕಾರ್ಯತಂತ್ರ ಕುರಿತು ಅವರು ಮಾಹಿತಿ ಪಡೆದರು. ಉಪ ಪ್ರಧಾನಿ, ವಿದೇಶಾಂಗ ಸಚಿವ ಇಶಾಕ್ ದರ್, ರಕ್ಷಣಾ ಸಚಿವ ಖ್ವಾಜಾ ಅಸೀಫ್, ಸೇನಾ ಪಡೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.</p>.<p>ಭದ್ರತೆ ಸಂಬಂಧಿಸಿದ ಬೆಳವಣಿಗೆ, ಪರಿಸ್ಥಿತಿ ಎದುರಿಸಲು ಆಗಿರುವ ಸಿದ್ಧತೆ ಕುರಿತು ನಾಯಕರಿಗೆ ವಿವರಣೆ ನೀಡಲಾಯಿತು ಎಂದು ಪಾಕಿಸ್ತಾನ್ ರೇಡಿಯೊ ವರದಿ ಮಾಡಿದೆ.</p>.<p><strong>ನದಿ ನೀರಿನಲ್ಲಿ ಏರಿಳಿತ –ಪಾಕ್ ಆಕ್ಷೇಪ: </strong></p>.<p>ಚಿನಾಬ್ ನದಿಯಲ್ಲಿ ನೀರಿನ ಹರಿವಿನಲ್ಲಿ ಭಾರತ ಏರಿಳಿತ ಉಂಟು ಮಾಡುತ್ತಿದೆ ಎಂದು ಪಾಕಿಸ್ತಾನ ಆಕ್ಷೇಪಿಸಿದೆ. ಸಿಂಧೂ ಜಲ ಒಪ್ಪಂದದ ಅನುಸಾರ ಪಾಕಿಸ್ತಾನದ ನಿಯಂತ್ರಣ ವ್ಯಾಪ್ತಿಗೆ ಚಿನಾಬ್ ಸೇರಿ ಮೂರು ನದಿಗಳು ಬರಲಿವೆ.</p>.<p>‘ನದಿ ನೀರಿನ ಹರಿವಿನಲ್ಲಿ ಏರಳಿತ ಆಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಆದರೆ, ಇದು ಪ್ರಕೃತಿ ಸಹಜವಾಗಿ ಆಗುತ್ತಿರುವುದಲ್ಲ. ಪಾಕಿಸ್ತಾನದ ತನ್ನ ಪಾಲಿನ ನೀರನ್ನು ಬಳಸಿಕೊಳ್ಳಬಾರದು ಎಂದೇ ಹೀಗೆ ಮಾಡಲಾಗುತ್ತಿದೆ’ ಎಂದು ಪಂಜಾಬ್ ಪ್ರಾಂತ್ಯದ ನೀರಾವರಿ ಸಚಿವ ಕಾಜೀಮ ಪಿರ್ಜಾದಾ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್</strong>, <strong>ಲಾಹೋರ್</strong>: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಕೇಂದ್ರ ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದ ಪ್ರಧಾನಿ ಶೆಹಬಾಜ್ ಶರೀಫ್ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಬೆಳವಣಿಗೆಗಳ ಮಾಹಿತಿಯನ್ನು ಪಡೆದರು.</p>.<p>ಅನುಕೂಲಕರವಾದ ಸೇನಾ ಕಾರ್ಯಾಚರಣೆ, ಹೈಬ್ರಿಡ್ ಯುದ್ಧದ ಕಾರ್ಯತಂತ್ರ ಕುರಿತು ಅವರು ಮಾಹಿತಿ ಪಡೆದರು. ಉಪ ಪ್ರಧಾನಿ, ವಿದೇಶಾಂಗ ಸಚಿವ ಇಶಾಕ್ ದರ್, ರಕ್ಷಣಾ ಸಚಿವ ಖ್ವಾಜಾ ಅಸೀಫ್, ಸೇನಾ ಪಡೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.</p>.<p>ಭದ್ರತೆ ಸಂಬಂಧಿಸಿದ ಬೆಳವಣಿಗೆ, ಪರಿಸ್ಥಿತಿ ಎದುರಿಸಲು ಆಗಿರುವ ಸಿದ್ಧತೆ ಕುರಿತು ನಾಯಕರಿಗೆ ವಿವರಣೆ ನೀಡಲಾಯಿತು ಎಂದು ಪಾಕಿಸ್ತಾನ್ ರೇಡಿಯೊ ವರದಿ ಮಾಡಿದೆ.</p>.<p><strong>ನದಿ ನೀರಿನಲ್ಲಿ ಏರಿಳಿತ –ಪಾಕ್ ಆಕ್ಷೇಪ: </strong></p>.<p>ಚಿನಾಬ್ ನದಿಯಲ್ಲಿ ನೀರಿನ ಹರಿವಿನಲ್ಲಿ ಭಾರತ ಏರಿಳಿತ ಉಂಟು ಮಾಡುತ್ತಿದೆ ಎಂದು ಪಾಕಿಸ್ತಾನ ಆಕ್ಷೇಪಿಸಿದೆ. ಸಿಂಧೂ ಜಲ ಒಪ್ಪಂದದ ಅನುಸಾರ ಪಾಕಿಸ್ತಾನದ ನಿಯಂತ್ರಣ ವ್ಯಾಪ್ತಿಗೆ ಚಿನಾಬ್ ಸೇರಿ ಮೂರು ನದಿಗಳು ಬರಲಿವೆ.</p>.<p>‘ನದಿ ನೀರಿನ ಹರಿವಿನಲ್ಲಿ ಏರಳಿತ ಆಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಆದರೆ, ಇದು ಪ್ರಕೃತಿ ಸಹಜವಾಗಿ ಆಗುತ್ತಿರುವುದಲ್ಲ. ಪಾಕಿಸ್ತಾನದ ತನ್ನ ಪಾಲಿನ ನೀರನ್ನು ಬಳಸಿಕೊಳ್ಳಬಾರದು ಎಂದೇ ಹೀಗೆ ಮಾಡಲಾಗುತ್ತಿದೆ’ ಎಂದು ಪಂಜಾಬ್ ಪ್ರಾಂತ್ಯದ ನೀರಾವರಿ ಸಚಿವ ಕಾಜೀಮ ಪಿರ್ಜಾದಾ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>