<p><strong>ವಾರ್ಸಾವ್(ಪೊಲೆಂಡ್):</strong> ಪೊಲೀಸ್, ಗಡಿ ಭದ್ರತಾ ಪಡೆ ಮತ್ತು ಅಗ್ನಿಶಾಮಕ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ನಾಯಿ ಮತ್ತು ಕುದುರೆಗಳ ಭವಿಷ್ಯದ ಕಲ್ಯಾಣಕ್ಕಾಗಿ ಹಾಗೂ ರಕ್ಷಣೆಗಾಗಿ ಅವುಗಳಿಗೆ ಪಿಂಚಣಿ ಸೌಲಭ್ಯ ಕಲ್ಪಿಸಲು ಪೊಲೆಂಡ್ ಸರ್ಕಾರ ಮುಂದಾಗಿದೆ.</p>.<p>ಅವಶೇಷಗಳಡಿ ಬದುಕುಳಿದವರನ್ನು ಪತ್ತೆ ಹಚ್ಚುವ, ಕಳ್ಳರು, ಕೊಲೆಗಾರರನ್ನು ಹುಡುಕಿಕೊಡುವ, ಪ್ರತಿಭಟನೆಗಳನ್ನು ನಿಯಂತ್ರಿಸಲು ಪೊಲೀಸ್ ಮತ್ತು ಇಲಾಖೆಯ ಅಧಿಕಾರಿಗಳಿಗೆ ನೆರವಾಗುವ ನಾಯಿ ಮತ್ತು ಕುದುರೆಗಳಿಗೆ, ನಿವೃತ್ತಿಯ ನಂತರ ರಕ್ಷಣೆ ಇರುವುದಿಲ್ಲ. ಇವುಗಳಿಗೆ ಭವಿಷ್ಯದಲ್ಲಿ ರಕ್ಷಣೆ ನೀಡುವ ಹಾಗೂ ಆರೈಕೆ ಮಾಡುವುದಕ್ಕಾಗಿ ಸರ್ಕಾರ ಈ ಪಿಂಚಣಿ ಯೋಜನೆ ಜಾರಿಗೆ ತರುವ ಪ್ರಸ್ತಾವವನ್ನು ಸಿದ್ಧಪಡಿಸಿದೆ.</p>.<p>ಈ ಪ್ರಾಣಿಗಳ ರಕ್ಷಣೆ ಕಾರ್ಯದಲ್ಲಿ ತೊಡಗಿರುವವರು ನೀಡಿದ ಮನವಿ ಪರಿಗಣಿಸಿ, ಗೃಹ ಸಚಿವಾಲಯ, ಈ ಪ್ರಾಣಿಗಳಿಗೆ ಅಧಿಕೃತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಹೊಸ ಮಸೂದೆಯ ಪ್ರಸ್ತಾವವನ್ನು ಸಿದ್ಧಪಡಿಸಿದೆ. ಇದರಲ್ಲಿ ನಿವೃತ್ತಿಯ ನಂತರ ಈ ಪ್ರಾಣಿಗಳ ವಾರಸುದಾರರಿಗೆ ಪಿಂಚಣಿ ನೀಡುವುದನ್ನು ಉಲ್ಲೇಖಿಸಲಾಗಿದೆ.</p>.<p>ಗೃಹ ಸಚಿವ ಮಾರಿಯಸ್ಜ್ ಕಾಮಿನ್ಸ್ಕಿ ‘ಈ ಕರಡು ಮಸೂದೆ ರೂಪಿಸುವುದು ನೈತಿಕ ಜವಾಬ್ದಾರಿ ಎಂದು ಬಣ್ಣಿಸಿದ್ದು, ಇದನ್ನು ವರ್ಷದ ಕೊನೆಯಲ್ಲಿ ಅನುಮೋದನೆಗಾಗಿ ಸಂಸತ್ತಿನಲ್ಲಿ ಮಂಡಿಸಲಾಗುತ್ತಿದ್ದು, ಇದಕ್ಕೆ ಸರ್ವಾನುಮತದ ಬೆಂಬಲ ದೊರೆಯುವ ವಿಶ್ವಾಸವಿದೆ‘ ಎಂದು ಹೇಳಿದ್ದಾರೆ.</p>.<p>ಈ ಹೊಸ ಕಾನೂನು ಜಾರಿಯಾದರೆ ಪ್ರಸ್ತುತ ಸೇವೆಯಲ್ಲಿರುವ ಸುಮಾರು 1200 ನಾಯಿಗಳು ಮತ್ತು 60 ಕುದುರೆಗಳು, ಪಿಂಚಿಣಿ ಸೌಲಭ್ಯದ ಅನುಕೂಲ ಪಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾರ್ಸಾವ್(ಪೊಲೆಂಡ್):</strong> ಪೊಲೀಸ್, ಗಡಿ ಭದ್ರತಾ ಪಡೆ ಮತ್ತು ಅಗ್ನಿಶಾಮಕ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ನಾಯಿ ಮತ್ತು ಕುದುರೆಗಳ ಭವಿಷ್ಯದ ಕಲ್ಯಾಣಕ್ಕಾಗಿ ಹಾಗೂ ರಕ್ಷಣೆಗಾಗಿ ಅವುಗಳಿಗೆ ಪಿಂಚಣಿ ಸೌಲಭ್ಯ ಕಲ್ಪಿಸಲು ಪೊಲೆಂಡ್ ಸರ್ಕಾರ ಮುಂದಾಗಿದೆ.</p>.<p>ಅವಶೇಷಗಳಡಿ ಬದುಕುಳಿದವರನ್ನು ಪತ್ತೆ ಹಚ್ಚುವ, ಕಳ್ಳರು, ಕೊಲೆಗಾರರನ್ನು ಹುಡುಕಿಕೊಡುವ, ಪ್ರತಿಭಟನೆಗಳನ್ನು ನಿಯಂತ್ರಿಸಲು ಪೊಲೀಸ್ ಮತ್ತು ಇಲಾಖೆಯ ಅಧಿಕಾರಿಗಳಿಗೆ ನೆರವಾಗುವ ನಾಯಿ ಮತ್ತು ಕುದುರೆಗಳಿಗೆ, ನಿವೃತ್ತಿಯ ನಂತರ ರಕ್ಷಣೆ ಇರುವುದಿಲ್ಲ. ಇವುಗಳಿಗೆ ಭವಿಷ್ಯದಲ್ಲಿ ರಕ್ಷಣೆ ನೀಡುವ ಹಾಗೂ ಆರೈಕೆ ಮಾಡುವುದಕ್ಕಾಗಿ ಸರ್ಕಾರ ಈ ಪಿಂಚಣಿ ಯೋಜನೆ ಜಾರಿಗೆ ತರುವ ಪ್ರಸ್ತಾವವನ್ನು ಸಿದ್ಧಪಡಿಸಿದೆ.</p>.<p>ಈ ಪ್ರಾಣಿಗಳ ರಕ್ಷಣೆ ಕಾರ್ಯದಲ್ಲಿ ತೊಡಗಿರುವವರು ನೀಡಿದ ಮನವಿ ಪರಿಗಣಿಸಿ, ಗೃಹ ಸಚಿವಾಲಯ, ಈ ಪ್ರಾಣಿಗಳಿಗೆ ಅಧಿಕೃತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಹೊಸ ಮಸೂದೆಯ ಪ್ರಸ್ತಾವವನ್ನು ಸಿದ್ಧಪಡಿಸಿದೆ. ಇದರಲ್ಲಿ ನಿವೃತ್ತಿಯ ನಂತರ ಈ ಪ್ರಾಣಿಗಳ ವಾರಸುದಾರರಿಗೆ ಪಿಂಚಣಿ ನೀಡುವುದನ್ನು ಉಲ್ಲೇಖಿಸಲಾಗಿದೆ.</p>.<p>ಗೃಹ ಸಚಿವ ಮಾರಿಯಸ್ಜ್ ಕಾಮಿನ್ಸ್ಕಿ ‘ಈ ಕರಡು ಮಸೂದೆ ರೂಪಿಸುವುದು ನೈತಿಕ ಜವಾಬ್ದಾರಿ ಎಂದು ಬಣ್ಣಿಸಿದ್ದು, ಇದನ್ನು ವರ್ಷದ ಕೊನೆಯಲ್ಲಿ ಅನುಮೋದನೆಗಾಗಿ ಸಂಸತ್ತಿನಲ್ಲಿ ಮಂಡಿಸಲಾಗುತ್ತಿದ್ದು, ಇದಕ್ಕೆ ಸರ್ವಾನುಮತದ ಬೆಂಬಲ ದೊರೆಯುವ ವಿಶ್ವಾಸವಿದೆ‘ ಎಂದು ಹೇಳಿದ್ದಾರೆ.</p>.<p>ಈ ಹೊಸ ಕಾನೂನು ಜಾರಿಯಾದರೆ ಪ್ರಸ್ತುತ ಸೇವೆಯಲ್ಲಿರುವ ಸುಮಾರು 1200 ನಾಯಿಗಳು ಮತ್ತು 60 ಕುದುರೆಗಳು, ಪಿಂಚಿಣಿ ಸೌಲಭ್ಯದ ಅನುಕೂಲ ಪಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>