ವಾಷಿಂಗ್ಟನ್ ಡಿಸಿಯಲ್ಲಿನ ಭಾರತದ ರಾಜತಾಂತ್ರಿಕ ಕಚೇರಿಯ ಹೊರಗೆ ಖಲಿಸ್ತಾನಿ ಹೋರಾಟಗಾರರ ಗುಂಪು ಹಾಗೂ ಇತರರು ಮಂಗಳವಾರ ರೈತರನ್ನು ಬೆಂಬಲಿಸಿದ್ದರು. ಸಿಖ್ ಡಿಎಂವಿ ಯೂಥ್ ಮತ್ತು ಸಂಗತ್ಗೆ ಸೇರಿದ ಹತ್ತಾರು ಮಂದಿ ರಾಜತಾಂತ್ರಿಕ ಕಚೇರಿಯ ಹೊರಗೆ ಸೇರಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾಯ್ದೆಗಳಿಗೆ ವಿರೋಧ ವ್ಯಕ್ತಿಸಿದರು. ಖಲಿಸ್ತಾನ ಹೋರಾಟದ ಧ್ವಜಗಳನ್ನು ಹಿಡಿದಿದ್ದ ಗುಂಪಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿತ್ತು.