ಲಂಡನ್: ಉತ್ತರ ಪ್ರದೇಶದ ಹಿಂದೂ ದೇವಾಲಯವೊಂದರಲ್ಲಿ ಕಳವಾಗಿದ್ದ ಕಲ್ಲಿನ ಬಾಗಿಲ ಚೌಕಟ್ಟು ಸೇರಿದಂತೆ ಏಳು ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸುವ ಒಪ್ಪಂದಕ್ಕೆ ಸ್ಕಾಟ್ಲೆಂಡ್ನ ‘ಗ್ಲಾಸ್ಗೊಲೈಫ್’ ಮ್ಯೂಸಿಯಂ ಸಹಿ ಹಾಕಿದೆ.
ಈ ಕಲಾಕೃತಿಗಳ ಮಾಲೀಕತ್ವ ವರ್ಗಾವಣೆಗೆ ಸಂಬಂಧಿಸಿದಂತೆ ಬ್ರಿಟನ್ನಲ್ಲಿರುವ ಭಾರತದ ಹೈ ಕಮಿಷನರ್ ಸುಜಿತ್ ಘೋಷ್ ಅವರ ಸಮ್ಮುಖದಲ್ಲಿ ಇಲ್ಲಿನ ಕೆಲ್ವಿಂಗ್ರೋವ್ ಆರ್ಟ್ ಗ್ಯಾಲರಿ ಮತ್ತು ಮ್ಯೂಸಿಯಂನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
14ನೇ ಶತಮಾನಕ್ಕೂ ಹಿಂದಿ ನದು ಎಂದು ನಂಬಲಾಗಿರುವ ಕಲಾ ಕೃತಿಗಳು, ಇಂಡೊ– ಪರ್ಷಿಯನ್ ತಲ್ವಾರ್ (ಕತ್ತಿ) ಮತ್ತು ಕಾನ್ವುಪುರದ ದೇವಾಲಯದಲ್ಲಿ ಕಳುವಾಗಿದ್ದ 11ನೇ ಶತಮಾನದ ಕಲ್ಲಿನಲ್ಲಿ ಕೆತ್ತಿದ್ದ ಬಾಗಿಲಿನ ಚೌಕಟ್ಟು ಒಳಗೊಂಡಂತೆ ಏಳು ಪುರಾತನ ಕಲಾಕೃತಿಗಳು ಹಿಂದಿರುಗಲಿವೆ.