<p><strong>ಕೊಲಂಬೊ</strong>: ಶ್ರೀಲಂಕಾ ರಾಜಕಾರಣದಲ್ಲಿನ ಪ್ರತಿಷ್ಠಿತ ರಾಜಪಕ್ಸ ಕುಟುಂಬದ ಕುಡಿ, ಮಾಜಿ ಸಚಿವ ಶಶೀಂದ್ರ ರಾಜಪಕ್ಸ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬುಧವಾರ ಬಂಧಿಸಲಾಗಿದೆ.</p>.<p>ಆಡಳಿತಾರೂಢ ಎನ್ಪಿಪಿ ಸರ್ಕಾರದ ಭ್ರಷ್ಟಾಚಾರ ವಿರೋಧಿ ಹೋರಾಟದಡಿ ಬಂಧನಕ್ಕೊಳಗಾದ ರಾಜಪಕ್ಸ ಕುಟುಂಬದ ಮೊದಲ ವ್ಯಕ್ತಿ ಶಶೀಂದ್ರ.</p>.<p>ದ್ವೀಪ ರಾಷ್ಟ್ರದ ಆಗ್ನೇಯ ಪ್ರದೇಶದಲ್ಲಿ ಸರ್ಕಾರಿ ಸ್ವಾಮ್ಯದ ಜಮೀನನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಶಶೀಂದ್ರ ವಿರುದ್ಧ ಕೇಳಿಬಂದಿದೆ.</p>.<p>‘ಅಕ್ರಮ ನಿರ್ಮಾಣದಲ್ಲೂ ಭಾಗಿಯಾಗಿರುವ ಆರೋಪ ಹೊತ್ತಿರುವ ಶಶೀಂದ್ರ, 2022ರ ಮೇ ತಿಂಗಳಿನಲ್ಲಿ ಸಾರ್ವಜನಿಕರು ನಡೆಸಿದ ಪ್ರತಿಭಟನೆ ಸಂದರ್ಭ ಬೆಂಕಿಗಾಹುತಿಯಾದ ಸರ್ಕಾರಿ ಸ್ವತ್ತಿಗೂ ತಮ್ಮ ಪ್ರಭಾವ ಬಳಸಿಕೊಂಡು ಪರಿಹಾರ ಪಡೆದಿದ್ದಾರೆ. ಸರ್ಕಾರಿ ಅಧಿಕಾರಿಗಳು ಪರಿಹಾರ ಪಾವತಿಗೆ ಹಿಂಜರಿದರೂ, ಇದು ಸಂಭವಿಸಿದೆ’ ಎಂದು ದೂರಲಾಗಿದೆ.</p>.<p>ರಾಜಪಕ್ಸ ಸಹೋದರರಲ್ಲಿ ಹಿರಿಯರಾದ ಚಮಲ್ ರಾಜಪಕ್ಸ ಅವರ ಪುತ್ರ ಶಶೀಂದ್ರ ಅವರನ್ನು ಭ್ರಷ್ಟಾಚಾರ ನಿಗ್ರಹ ಆಯೋಗ ಬಂಧಿಸಿ ಕೊಲಂಬೊ ಚೀಫ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ನ್ಯಾಯಾಲಯವು ಆಗಸ್ಟ್ 19ರವರೆಗೂ ಕಸ್ಟಡಿಗೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ</strong>: ಶ್ರೀಲಂಕಾ ರಾಜಕಾರಣದಲ್ಲಿನ ಪ್ರತಿಷ್ಠಿತ ರಾಜಪಕ್ಸ ಕುಟುಂಬದ ಕುಡಿ, ಮಾಜಿ ಸಚಿವ ಶಶೀಂದ್ರ ರಾಜಪಕ್ಸ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬುಧವಾರ ಬಂಧಿಸಲಾಗಿದೆ.</p>.<p>ಆಡಳಿತಾರೂಢ ಎನ್ಪಿಪಿ ಸರ್ಕಾರದ ಭ್ರಷ್ಟಾಚಾರ ವಿರೋಧಿ ಹೋರಾಟದಡಿ ಬಂಧನಕ್ಕೊಳಗಾದ ರಾಜಪಕ್ಸ ಕುಟುಂಬದ ಮೊದಲ ವ್ಯಕ್ತಿ ಶಶೀಂದ್ರ.</p>.<p>ದ್ವೀಪ ರಾಷ್ಟ್ರದ ಆಗ್ನೇಯ ಪ್ರದೇಶದಲ್ಲಿ ಸರ್ಕಾರಿ ಸ್ವಾಮ್ಯದ ಜಮೀನನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಶಶೀಂದ್ರ ವಿರುದ್ಧ ಕೇಳಿಬಂದಿದೆ.</p>.<p>‘ಅಕ್ರಮ ನಿರ್ಮಾಣದಲ್ಲೂ ಭಾಗಿಯಾಗಿರುವ ಆರೋಪ ಹೊತ್ತಿರುವ ಶಶೀಂದ್ರ, 2022ರ ಮೇ ತಿಂಗಳಿನಲ್ಲಿ ಸಾರ್ವಜನಿಕರು ನಡೆಸಿದ ಪ್ರತಿಭಟನೆ ಸಂದರ್ಭ ಬೆಂಕಿಗಾಹುತಿಯಾದ ಸರ್ಕಾರಿ ಸ್ವತ್ತಿಗೂ ತಮ್ಮ ಪ್ರಭಾವ ಬಳಸಿಕೊಂಡು ಪರಿಹಾರ ಪಡೆದಿದ್ದಾರೆ. ಸರ್ಕಾರಿ ಅಧಿಕಾರಿಗಳು ಪರಿಹಾರ ಪಾವತಿಗೆ ಹಿಂಜರಿದರೂ, ಇದು ಸಂಭವಿಸಿದೆ’ ಎಂದು ದೂರಲಾಗಿದೆ.</p>.<p>ರಾಜಪಕ್ಸ ಸಹೋದರರಲ್ಲಿ ಹಿರಿಯರಾದ ಚಮಲ್ ರಾಜಪಕ್ಸ ಅವರ ಪುತ್ರ ಶಶೀಂದ್ರ ಅವರನ್ನು ಭ್ರಷ್ಟಾಚಾರ ನಿಗ್ರಹ ಆಯೋಗ ಬಂಧಿಸಿ ಕೊಲಂಬೊ ಚೀಫ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ನ್ಯಾಯಾಲಯವು ಆಗಸ್ಟ್ 19ರವರೆಗೂ ಕಸ್ಟಡಿಗೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>