‘ನನ್ನ ಮೇಲೆ ಸುಳ್ಳು ಆರೋಪ ಹೊರಿಸಲು ತೆರಿಗೆ ವಂಚನೆ ಪ್ರಕರಣದಲ್ಲಿ ವಿದೇಶದಿಂದ ತರಿಸಿಕೊಂಡಿದ್ದ ನನ್ನ ವಾಹನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕ್ರಿಕೆಟ್ನಲ್ಲಿ ಭ್ರಷ್ಟಾಚಾರವನ್ನು ಎತ್ತಿ ತೋರಿಸಿದ್ದಕ್ಕಾಗಿ ಇದು ನನಗೆ ಸಿಕ್ಕ ಬಹುಮಾನವೇ? ಲೆಕ್ಕಪರಿಶೋಧನೆ ವರದಿ ಆಧಾರದ ಮೇಲೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿ, ಮಧ್ಯಂತರ ಸಮಿತಿ ರಚನೆ ಮಾಡಿದ್ದೆ. ನನ್ನ ಮೇಲೆ ಅಧ್ಯಕ್ಷರು ರಾಜಕೀಯ ಹಗೆತನ ಸಾಧಿಸುತ್ತಿರುವುದು ಏಕೆ?‘ ಎಂದು ಅವರು ಪ್ರಶ್ನಿಸಿದರು.