ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀ ಶ್ರೀ ರವಿಶಂಕರ್‌ ಗುರೂಜಿಗೆ ‘ದಿ ಎಮಿಸರಿ ಆಫ್‌ ಪೀಸ್‌’ ಪ್ರಶಸ್ತಿ ಪ್ರದಾನ

Last Updated 1 ಡಿಸೆಂಬರ್ 2022, 13:26 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಮೆಂಫಿಸ್‌ ನಗರದ ನ್ಯಾಷನಲ್‌ ಸಿವಿಲ್‌ ರೈಟ್ಸ್‌ ಮೂಸಿಯಂ, ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್‌ ಅವರಿಗೆ ‘ದಿ ಎಮಿಸರಿ ಆಫ್‌ ಪೀಸ್‌‘ (ಶಾಂತಿಯ ರಾಯಭಾರಿ) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

‘ಜಾಗತಿಕ ಮಾನವತಾವಾದಿಯಾಗಿರುವ ನೀವು ಜಗತ್ತಿನ 180 ದೇಶಗಳ ಕೋಟಿ ಕೋಟಿ ಜನರನ್ನು ತಲು‍ಪಿದ್ದೀರಿ. ಹಾಗೂ ಯುದ್ಧವನ್ನು ತಡೆಯಲು ನೀವು ಪ್ರತಿಪಾದಿಸುವ ಉಪಕ್ರಮಗಳಿಗಾಗಿ ನಾವು ಈ ಪ್ರಶಸ್ತಿಯನ್ನು ನೀಡುತ್ತಿದ್ದೇವೆ’ ಎಂದು ಮ್ಯೂಸಿಯಂನ ನಿರ್ದೇಶಕಿ ಶೈಲಾ ಕರ್ಕೇರ ಅವರು ಹೇಳಿದರು.

ಶ್ರೀ ಶ್ರೀ ರವಿಶಂಕರ್‌ ಅವರು‘ಐ ಸ್ಟ್ಯಾಂಡ್‌ ಫಾರ್‌ ಪೀಸ್‌’ ಎನ್ನುವ ಜಾಗತಿಕ ಪ್ರಯಾಣವನ್ನು ಕೈಗೊಂಡಿದ್ದಾರೆ. ಈ ಪ್ರಯಾಣದ ಭಾಗವಾಗಿ ಅವರು ಸೋಮವಾರ ಮೆಂಫಿಸ್‌ ನಗರವನ್ನು ತಲುಪಿದ್ದರು.

ನವೆಂಬರ್‌ ಮೊದಲ ವಾರ ಅಟ್ಲಾಂಟಾದಲ್ಲಿ ಗುರೂಜಿ ಅವರಿಗೆ ’‌‌‌‌‌ಗಾಂಧಿ ಪೀಸ್‌ ಪಿಲಿಗ್ರಿಮ್‌’ ಪ್ರಶಸ್ತಿ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT