‘ಬಾಂಗ್ಲಾದೇಶದ ವಾಯುಪಡೆಯ ನಿವೃತ್ತ ಪೈಲಟ್ ಹಾಗೂ ಏರ್ಲೈನ್ನಲ್ಲಿ ತರಬೇತುದಾರರಾಗಿದ್ದ ಸುಲ್ತಾನ್, ಢಾಕಾದಿಂದ ಕಠ್ಮಂಡುವಿಗೆ ಬರುತ್ತಿದ್ದ ವಿಮಾನದಲ್ಲಿ ಕಿರಿಯ ಸಹ ಪೈಲಟ್ ಮೇಲೆ ತನ್ನ ಕೌಶಲ ಮತ್ತು ಸಾಮರ್ಥ್ಯದ ಕುರಿತು ಪ್ರಭಾವ ಬೀರಲು ಯತ್ನಿಸಿದ್ದರು. ಇದರಿಂದ ಸಹ ಪೈಲಟ್ ಪೃಥುಲಾ ರಶೀದ್ ಸಂಪೂರ್ಣ ದಿಗ್ಭ್ರಮೆಗೊಳಗಾಗಿದ್ದರು. ಅಲ್ಲದೆ, ಅವರು ಇದುವರೆಗೆ ವಿಮಾನವನ್ನು ಲ್ಯಾಂಡಿಂಗ್ ಮಾಡಿಸಿದ ಅನುಭವ ಹೊಂದಿರಲಿಲ್ಲ’ ಎಂದು ವರದಿಯಲ್ಲಿ ತಿಳಿಸಲಾಗಿದೆ.