ಕ್ಯಾಂಬಿರ ಅವರು ಗರ್ಭಕಂಠ (hysterectomy) ಸರ್ಜರಿಗೆ ಒಳಗಾಗಿದ್ದರು. ಹೀಗಾಗಿ ಅವರಿಗೆ ಮಕ್ಕಳಾಗುವ ಸಾಧ್ಯತೆ ಇರಲಿಲ್ಲ. ಹೀಗಾಗಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಮುಂದಾಗಿದ್ದರು. ಮಗ ಹಾಗೂ ಸೊಸೆಯ ಆಸೆಯನ್ನು ಪೂರೈಸಲು ನ್ಯಾನ್ಸಿ ಮುಂದೆ ಬಂದಿದ್ದರು. ಇದೀಗ ಬಾಡಿಗೆ ತಾಯ್ತನದ ಮೂಲಕ ಮಗ ಹಾಗೂ ಸೊಸೆಗೆ ಮುದ್ದಾದ ಹೆಣ್ಣು ಮಗುವನ್ನು ಹೆತ್ತು ಕೊಟ್ಟಿದ್ದಾರೆ.