<p><strong>ಕಾಬೂಲ್:</strong> ಅಫ್ಗಾನಿಸ್ತಾನದ ಕಂದಹಾರ್ ಮತ್ತು ಹೆರಾತ್ನಲ್ಲಿರುವ ಭಾರತೀಯ ದೂತಾವಾಸ ಕಚೇರಿಗಳಲ್ಲಿ ತಾಲಿಬಾನಿಗಳು ಶೋಧ ನಡೆಸಿದ್ದಾರೆ. ಕಚೇರಿಯಲ್ಲಿದ್ದ ಕೆಲವು ದಾಖಲೆಗಳನ್ನು ಕೊಂಡೊಯ್ದಿದ್ದಾರೆ ಎಂದು ಮೂಲಗಳು ಹೇಳಿವೆ.</p>.<p>ನುಸುಳುಕೋರರು ಕಚೇರಿ ಕಟ್ಟಡದೊಳಕ್ಕೆ ನುಗ್ಗಿದ್ದು ಮಾತ್ರವಲ್ಲದೆ, ಹೊರಗಡೆ ನಿಲುಗಡೆ ಮಾಡಲಾಗಿದ್ದ ವಾಹನಗಳನ್ನೂ ವಶಕ್ಕೆ ಪಡೆದಿದ್ದಾರೆ ಎಂದೂ ಮೂಲಗಳು ತಿಳಿಸಿವೆ.</p>.<p><strong>ಓದಿ:</strong><a href="https://www.prajavani.net/world-news/afghanistan-taliban-kabul-female-news-television-anchor-denied-entry-in-office-859379.html" itemprop="url">ನೀನು ಮಹಿಳೆ, ಮನೆಗೆ ತೆರಳು: ಖ್ಯಾತ ಸುದ್ದಿ ನಿರೂಪಕಿಯ ಮೇಲೆ ತಾಲಿಬಾನ್ ನಿರ್ಬಂಧ</a></p>.<p>ಭಾರತವು ಅಫ್ಗಾನಿಸ್ತಾನದಲ್ಲಿ ನಾಲ್ಕು ದೂತಾವಾಸ ಕಚೇರಿಗಳನ್ನು ಹೊಂದಿದೆ. ಕಂದಹಾರ್, ಹೆರಾತ್, ಮಜರ್–ಇ–ಶರೀಫ್ನಲ್ಲಿರುವ ಈ ಕಚೇರಿಗಳನ್ನು ಆಗಸ್ಟ್ 15ರಂದು ಕಾಬೂಲ್ ನಗರವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಮುಚ್ಚಲಾಗಿತ್ತು.</p>.<p>ಅಫ್ಗಾನಿಸ್ತಾನದಲ್ಲಿನ ಬಿಕ್ಕಟ್ಟಿನ ಕಾರಣದಿಂದ ರಾಯಭಾರ ಕಚೇರಿ ಸಿಬ್ಬಂದಿ, ಐಟಿಬಿಪಿ ಸಿಬ್ಬಂದಿಯೂ ಸೇರಿದಂತೆ 120 ಭಾರತೀಯರನ್ನು ಮಂಗಳವಾರ ಭಾರತೀಯ ವಾಯುಪಡೆ ವಿಮಾನದಲ್ಲಿ ಸ್ವದೇಶಕ್ಕೆ ಕರೆದೊಯ್ಯಲಾಗಿತ್ತು.</p>.<p><strong>ಓದಿ:</strong><a href="https://www.prajavani.net/world-news/new-taliban-top-leaders-running-afghanistan-859271.html" itemprop="url">ಆಳ-ಅಗಲ | ತಾಲಿಬಾನ್ ನಾಯಕರು ನೇಪಥ್ಯದಿಂದ ರಂಗಕ್ಕೆ</a></p>.<p>ಉಳಿದ ಭಾರತೀಯರನ್ನೂ ವಾಪಸ್ ಕರೆಸಿಕೊಳ್ಳಲು ಕ್ರಮ ಕೈಗೊಳ್ಳುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ಭದ್ರತಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.</p>.<p>ವೇಗವಾಗಿ ಅಫ್ಗಾನಿಸ್ತಾನದಿಂದ ಭಾರತೀಯರ ತೆರವು ಕಾರ್ಯಾಚರಣೆ ನಡೆಸುವಂತೆಯೂ ಅಫ್ಗಾನಿಸ್ತಾನದ ಅಗತ್ಯ ಇರುವ ನಾಗರಿಕರಿಗೆ ನೆರವು ನೀಡುವಂತೆಯೂ ಪ್ರಧಾನಿಯವರು ಅಧಿಕಾರಿಗಳಿಗೆ ಸೂಚಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಬೂಲ್:</strong> ಅಫ್ಗಾನಿಸ್ತಾನದ ಕಂದಹಾರ್ ಮತ್ತು ಹೆರಾತ್ನಲ್ಲಿರುವ ಭಾರತೀಯ ದೂತಾವಾಸ ಕಚೇರಿಗಳಲ್ಲಿ ತಾಲಿಬಾನಿಗಳು ಶೋಧ ನಡೆಸಿದ್ದಾರೆ. ಕಚೇರಿಯಲ್ಲಿದ್ದ ಕೆಲವು ದಾಖಲೆಗಳನ್ನು ಕೊಂಡೊಯ್ದಿದ್ದಾರೆ ಎಂದು ಮೂಲಗಳು ಹೇಳಿವೆ.</p>.<p>ನುಸುಳುಕೋರರು ಕಚೇರಿ ಕಟ್ಟಡದೊಳಕ್ಕೆ ನುಗ್ಗಿದ್ದು ಮಾತ್ರವಲ್ಲದೆ, ಹೊರಗಡೆ ನಿಲುಗಡೆ ಮಾಡಲಾಗಿದ್ದ ವಾಹನಗಳನ್ನೂ ವಶಕ್ಕೆ ಪಡೆದಿದ್ದಾರೆ ಎಂದೂ ಮೂಲಗಳು ತಿಳಿಸಿವೆ.</p>.<p><strong>ಓದಿ:</strong><a href="https://www.prajavani.net/world-news/afghanistan-taliban-kabul-female-news-television-anchor-denied-entry-in-office-859379.html" itemprop="url">ನೀನು ಮಹಿಳೆ, ಮನೆಗೆ ತೆರಳು: ಖ್ಯಾತ ಸುದ್ದಿ ನಿರೂಪಕಿಯ ಮೇಲೆ ತಾಲಿಬಾನ್ ನಿರ್ಬಂಧ</a></p>.<p>ಭಾರತವು ಅಫ್ಗಾನಿಸ್ತಾನದಲ್ಲಿ ನಾಲ್ಕು ದೂತಾವಾಸ ಕಚೇರಿಗಳನ್ನು ಹೊಂದಿದೆ. ಕಂದಹಾರ್, ಹೆರಾತ್, ಮಜರ್–ಇ–ಶರೀಫ್ನಲ್ಲಿರುವ ಈ ಕಚೇರಿಗಳನ್ನು ಆಗಸ್ಟ್ 15ರಂದು ಕಾಬೂಲ್ ನಗರವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಮುಚ್ಚಲಾಗಿತ್ತು.</p>.<p>ಅಫ್ಗಾನಿಸ್ತಾನದಲ್ಲಿನ ಬಿಕ್ಕಟ್ಟಿನ ಕಾರಣದಿಂದ ರಾಯಭಾರ ಕಚೇರಿ ಸಿಬ್ಬಂದಿ, ಐಟಿಬಿಪಿ ಸಿಬ್ಬಂದಿಯೂ ಸೇರಿದಂತೆ 120 ಭಾರತೀಯರನ್ನು ಮಂಗಳವಾರ ಭಾರತೀಯ ವಾಯುಪಡೆ ವಿಮಾನದಲ್ಲಿ ಸ್ವದೇಶಕ್ಕೆ ಕರೆದೊಯ್ಯಲಾಗಿತ್ತು.</p>.<p><strong>ಓದಿ:</strong><a href="https://www.prajavani.net/world-news/new-taliban-top-leaders-running-afghanistan-859271.html" itemprop="url">ಆಳ-ಅಗಲ | ತಾಲಿಬಾನ್ ನಾಯಕರು ನೇಪಥ್ಯದಿಂದ ರಂಗಕ್ಕೆ</a></p>.<p>ಉಳಿದ ಭಾರತೀಯರನ್ನೂ ವಾಪಸ್ ಕರೆಸಿಕೊಳ್ಳಲು ಕ್ರಮ ಕೈಗೊಳ್ಳುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ಭದ್ರತಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.</p>.<p>ವೇಗವಾಗಿ ಅಫ್ಗಾನಿಸ್ತಾನದಿಂದ ಭಾರತೀಯರ ತೆರವು ಕಾರ್ಯಾಚರಣೆ ನಡೆಸುವಂತೆಯೂ ಅಫ್ಗಾನಿಸ್ತಾನದ ಅಗತ್ಯ ಇರುವ ನಾಗರಿಕರಿಗೆ ನೆರವು ನೀಡುವಂತೆಯೂ ಪ್ರಧಾನಿಯವರು ಅಧಿಕಾರಿಗಳಿಗೆ ಸೂಚಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>