<p><strong>ಇಸ್ತಾಂಬುಲ್:</strong> ರಷ್ಯಾ ಮತ್ತು ಉಕ್ರೇನ್ನ ಪ್ರತಿನಿಧಿಗಳು ಮುಖಾಮುಖಿಯಾಗಿ ಸೋಮವಾರ ಎರಡನೇ ಸುತ್ತಿನ ಸಭೆ ನಡೆಸಿದ್ದರು. ಈ ಮಾತುಕತೆಯಿಂದ ಯುದ್ಧವನ್ನು ಅಂತ್ಯಗೊಳಿಸುವ ದಿಕ್ಕಿನತ್ತ ಯಾವುದೇ ಪ್ರಗತಿಯಾಗಿಲ್ಲ. ಆದರೆ, ಸೈನಿಕರ ವಿಚಾರಗಳಲ್ಲಿ ಎರಡೂ ದೇಶಗಳು ಕೆಲವು ಒಪ್ಪಂದಕ್ಕೆ ಬಂದಿವೆ.</p>.<p>ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಹತ್ಯೆಯಾಗಿರುವ ಎರಡೂ ದೇಶಗಳ ಸುಮಾರು 6 ಸಾವಿರ ಸೈನಿಕರ ಮೃತದೇಹಗಳನ್ನು ಆಯಾ ದೇಶಗಳಿಗೆ ರವಾನಿಸುವ ಒಪ್ಪಂದಕ್ಕೆ ಬರಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಸೈನಿಕರನ್ನು ಆಯಾ ದೇಶಗಳಿಗೆ ವಾಪಸು ಕಳುಹಿಸುವ ಬಗ್ಗೆ ಸಮಿತಿಯೊಂದನ್ನು ರಚಿಸುವ ತೀರ್ಮಾನ ಕೈಗೊಳ್ಳಲಾಗಿದೆ.</p>.<p>ಜೊತೆಗೆ, ಆಯಾ ದೇಶಗಳು ವಶದಲ್ಲಿ ಇಟ್ಟುಕೊಂಡಿರುವ ಸೈನಿಕರನ್ನು ವಾಪಸು ಕಳುಹಿಸುವ ಬಗ್ಗೆಯೂ ಎರಡೂ ದೇಶಗಳು ಒಪ್ಪಂದಕ್ಕೆ ಬಂದಿವೆ.</p>.<p>‘ಒಪ್ಪಂದಕ್ಕೆ ಬರುವುದು ಬಹಳ ಸಂಕೀರ್ಣವಾದ ವಿಚಾರ. ಯಾಕೆಂದರೆ, ಎರಡೂ ದೇಶಗಳ ನಡುವ ಅಷ್ಟೊಂದು ಭಿನ್ನಾಭಿಪ್ರಾಯಗಳಿವೆ. ಆದ್ದರಿಂದ, ತತ್ಕ್ಷಣದಲ್ಲಿಯೇ ಎಲ್ಲವಕ್ಕೂ ಪರಿಹಾರ ಸಿಕ್ಕಿಬಿಡುತ್ತದೆ ಎಂದು ಅಂದುಕೊಳ್ಳುವುದು ತಪ್ಪು’ ಎಂದು ರಷ್ಯಾದ ವಕ್ತಾರ ಡಿಮಿತ್ರಿ ಪೆಸ್ಕೊ ಮಂಗಳವಾರ ಪ್ರತಿಕ್ರಿಯಿಸಿದರು.</p>.<p>‘ಯುದ್ಧ ಅಂತ್ಯಗೊಳಿಸಲು ರಷ್ಯಾವು ಕೆಲವು ಷರತ್ತುಗಳನ್ನು ಮುಂದಿಟ್ಟಿದೆ. ಈ ಷರತ್ತುಗಳನ್ನು ಅಧ್ಯಯನ ಮಾಡಿ, ಪ್ರತಿಕ್ರಿಯಿಸಲು ನಮಗೆ ಒಂದು ವಾರ ಕಾಲಾವಕಾಶಬೇಕು. ಆದ್ದರಿಂದ ಜೂನ್ 20ರಿಂದ 30ರ ಒಳಗೆ ಮುಂದಿನ ಸಭೆ ನಡೆಸುವಂತೆ ಹೇಳಿದ್ದೇವೆ’ ಎಂದು ಉಕ್ರೇನ್ನ ರಕ್ಷಣಾ ಸಚಿವ ರಸ್ಟಮ್ ಉಮರಾವ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ತಾಂಬುಲ್:</strong> ರಷ್ಯಾ ಮತ್ತು ಉಕ್ರೇನ್ನ ಪ್ರತಿನಿಧಿಗಳು ಮುಖಾಮುಖಿಯಾಗಿ ಸೋಮವಾರ ಎರಡನೇ ಸುತ್ತಿನ ಸಭೆ ನಡೆಸಿದ್ದರು. ಈ ಮಾತುಕತೆಯಿಂದ ಯುದ್ಧವನ್ನು ಅಂತ್ಯಗೊಳಿಸುವ ದಿಕ್ಕಿನತ್ತ ಯಾವುದೇ ಪ್ರಗತಿಯಾಗಿಲ್ಲ. ಆದರೆ, ಸೈನಿಕರ ವಿಚಾರಗಳಲ್ಲಿ ಎರಡೂ ದೇಶಗಳು ಕೆಲವು ಒಪ್ಪಂದಕ್ಕೆ ಬಂದಿವೆ.</p>.<p>ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಹತ್ಯೆಯಾಗಿರುವ ಎರಡೂ ದೇಶಗಳ ಸುಮಾರು 6 ಸಾವಿರ ಸೈನಿಕರ ಮೃತದೇಹಗಳನ್ನು ಆಯಾ ದೇಶಗಳಿಗೆ ರವಾನಿಸುವ ಒಪ್ಪಂದಕ್ಕೆ ಬರಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಸೈನಿಕರನ್ನು ಆಯಾ ದೇಶಗಳಿಗೆ ವಾಪಸು ಕಳುಹಿಸುವ ಬಗ್ಗೆ ಸಮಿತಿಯೊಂದನ್ನು ರಚಿಸುವ ತೀರ್ಮಾನ ಕೈಗೊಳ್ಳಲಾಗಿದೆ.</p>.<p>ಜೊತೆಗೆ, ಆಯಾ ದೇಶಗಳು ವಶದಲ್ಲಿ ಇಟ್ಟುಕೊಂಡಿರುವ ಸೈನಿಕರನ್ನು ವಾಪಸು ಕಳುಹಿಸುವ ಬಗ್ಗೆಯೂ ಎರಡೂ ದೇಶಗಳು ಒಪ್ಪಂದಕ್ಕೆ ಬಂದಿವೆ.</p>.<p>‘ಒಪ್ಪಂದಕ್ಕೆ ಬರುವುದು ಬಹಳ ಸಂಕೀರ್ಣವಾದ ವಿಚಾರ. ಯಾಕೆಂದರೆ, ಎರಡೂ ದೇಶಗಳ ನಡುವ ಅಷ್ಟೊಂದು ಭಿನ್ನಾಭಿಪ್ರಾಯಗಳಿವೆ. ಆದ್ದರಿಂದ, ತತ್ಕ್ಷಣದಲ್ಲಿಯೇ ಎಲ್ಲವಕ್ಕೂ ಪರಿಹಾರ ಸಿಕ್ಕಿಬಿಡುತ್ತದೆ ಎಂದು ಅಂದುಕೊಳ್ಳುವುದು ತಪ್ಪು’ ಎಂದು ರಷ್ಯಾದ ವಕ್ತಾರ ಡಿಮಿತ್ರಿ ಪೆಸ್ಕೊ ಮಂಗಳವಾರ ಪ್ರತಿಕ್ರಿಯಿಸಿದರು.</p>.<p>‘ಯುದ್ಧ ಅಂತ್ಯಗೊಳಿಸಲು ರಷ್ಯಾವು ಕೆಲವು ಷರತ್ತುಗಳನ್ನು ಮುಂದಿಟ್ಟಿದೆ. ಈ ಷರತ್ತುಗಳನ್ನು ಅಧ್ಯಯನ ಮಾಡಿ, ಪ್ರತಿಕ್ರಿಯಿಸಲು ನಮಗೆ ಒಂದು ವಾರ ಕಾಲಾವಕಾಶಬೇಕು. ಆದ್ದರಿಂದ ಜೂನ್ 20ರಿಂದ 30ರ ಒಳಗೆ ಮುಂದಿನ ಸಭೆ ನಡೆಸುವಂತೆ ಹೇಳಿದ್ದೇವೆ’ ಎಂದು ಉಕ್ರೇನ್ನ ರಕ್ಷಣಾ ಸಚಿವ ರಸ್ಟಮ್ ಉಮರಾವ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>