<p>ಕೈರೊ (ಐಎಎನ್ಎಸ್): ಈಜಿಪ್ಟ್ನಲ್ಲಿ ಅಧ್ಯಕ್ಷ ಹೊಸ್ನಿ ಮುಬಾರಕ್ ಆಡಳಿತವನ್ನು ವಿರೋಧಿಸಿ ಜನಾಕ್ರೋಶ ತೀವ್ರಗೊಂಡಿದ್ದು, ಭಾನುವಾರ ಪೊಲೀಸರೊಂದಿಗೆ ಘರ್ಷಣೆಗೆ ಇಳಿದ ಜನರನ್ನು ಚದುರಿಸಲು ನಡೆಸಿದ ಗೋಲಿಬಾರ್ಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ.<br /> <br /> ಇಲ್ಲಿನ ಒಳಾಡಳಿತ ಸಚಿವಾಲಯ ಕಟ್ಟಡ ಸಂಕೀರ್ಣದ ಮುಂಭಾಗದಲ್ಲಿ ಈ ಸಾವು ನೋವು ಸಂಭವಿಸಿದೆ. ಸರ್ಕಾರ ವಿರೋಧಿ ಹೋರಾಟ ಇದೀಗ ದರೋಡೆ, ದೊಂಬಿ, ಅರಾಜಕತೆಯತ್ತ ತಿರುಗಿದೆ.<br /> <br /> ಒಟ್ಟು 150 ಬಲಿ: ಸರ್ಕಾರದ ವಿರುದ್ಧ ಜನತೆಯ ಪ್ರತಿಭಟನೆ, ಹಿಂಸಾಚಾರ ಮಂಗಳವಾರದಿಂದ ಭುಗಿಲೆದ್ದ ಬಳಿ ಇದುವರೆಗೆ 150 ಮಂದಿ ಸಾವನ್ನಪ್ಪಿದ್ದಾರೆ. ಗುರುವಾರದವರೆಗೆ 7, ಶುಕ್ರವಾರದಂದು 62, ಶನಿವಾರ 33 ಮಂದಿ ಹಿಂಸಾಚಾರ ಮತ್ತು ಘರ್ಷಣೆಗೆ ಬಲಿಯಾಗಿದ್ದಾರೆ.<br /> <br /> ನಗರ ಮಧ್ಯದಲ್ಲಿ ಇರುವ ಸಚಿವಾಲಯ ಕಟ್ಟಡಕ್ಕೆ ಭಾನುವಾರ ಬೆಳಗ್ಗೆ ಉದ್ವಿಗ್ನ ಜನರ ಗುಂಪು ಮುತ್ತಿಗೆ ಹಾಕಿತ್ತು. ಗುಂಪನ್ನು ಚದುರಿಸಲು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಗುಂಡುಹಾರಿಸಿದ್ದರು. ಇದರಿಂದ 10 ಮಂದಿ ಸತ್ತರು ಎಂದು ‘ಅಲ್ ಜಜೀರಾ’ ಟಿವಿ ವರದಿ ಮಾಡಿದೆ.<br /> <br /> ರಾಜೀನಾಮೆಗೆ ಪಟ್ಟು: ಹೊಸ್ನಿ ಆಳ್ವಿಕೆ ವಿರುದ್ಧ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಜನರ ಪ್ರತಿಭಟನೆ ಮತ್ತಷ್ಟು ತೀವ್ರವಾಗಿದೆ. ಮೂರು ದಶಕಗಳಿಂದ ನಿರಂಕುಶ ಆಡಳಿತ ನಡೆಸುತ್ತಿರುವ ಹೊಸ್ನಿ ರಾಜೀನಾಮೆ ನೀಡಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಒತ್ತಾಯವಾಗಿದೆ. <br /> <br /> ಪೊಲೀಸರಿಂದಲೇ ಲೂಟಿ: ಜನರು ಪ್ರತಿಭಟನೆ, ಹಿಂಸಾಚಾರದಲ್ಲಿ ತೊಡಗಿದ್ದರೆ, ಈ ಸಂದರ್ಭವನ್ನು ಹಣ, ಬೆಲೆಬಾಳುವ ಸಾಮಗ್ರಿಗಳನ್ನು ದೋಚಲು ದುಷ್ಕರ್ಮಿಗಳು ನಿರತರಾಗಿದ್ದಾರೆ. ಈ ಕಾರ್ಯದಲ್ಲಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಯೇ ಹೆಚ್ಚಾಗಿ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ.<br /> <br /> ಐಷಾರಾಮಿ ವಾಣಿಜ್ಯ ಸಂಕೀರ್ಣಗಳು, ಶಾಪಿಂಗ್ ಮಾಲ್ಗಳಲ್ಲಿ ವಸ್ತುಗಳನ್ನು ದೋಚುವ ಕಾರ್ಯ ರಾಜಧಾನಿ ನಗರದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಸಮವಸ್ತ್ರ ತ್ಯಜಿಸಿರುವ ಪೊಲೀಸ್ ಸಿಬ್ಬಂದಿ ಇಂತಹ ಕುಕೃತ್ಯಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ. <br /> <br /> ಸರ್ಕಾರಿ ಭದ್ರತೆಯ ಮೇಲೆ ನಂಬಿಕೆ ಕಳೆದುಕೊಂಡಿರುವ ನಿವಾಸಿಗಳು ತಮ್ಮದೇ ಸಮಿತಿಗಳನ್ನು ರಚಿಸಿಕೊಂಡು, ಕೋವಿ, ದೊಣ್ಣೆ, ಕುಡುಗೋಲು ಹಿಡಿದು ಆಸ್ತಿಪಾಸ್ತಿ ರಕ್ಷಣೆಯ ಕಾರ್ಯದಲ್ಲಿ ತೊಡಗಿದ್ದಾರೆ. <br /> <br /> ಹೊಸ ಪ್ರಧಾನಿ: ಈ ಮಧ್ಯೆ, ಜನರನ್ನು ಶಾಂತಗೊಳಿಸುವುದು ಮತ್ತು ಅಧಿಕಾರದಲ್ಲೇ ಮುಂದುವರಿಯುವ ಪ್ರಯತ್ನದಲ್ಲಿರುವ ಹೊಸ್ನಿ ಶನಿವಾರ ಆಡಳಿತ ಸುಧಾರಣೆಯ ಭರವಸೆ ನೀಡಿದ್ದಾರೆ. <br /> <br /> ಇದಕ್ಕೆ ಮುನ್ಸೂಚನೆ ಎಂಬಂತೆ ಸದ್ಯ ಇರುವ ಸರ್ಕಾರವನ್ನು ಬರ್ಕಾಸ್ತು ಮಾಡಿದ್ದಾರೆ. ಹೊಸ ಪ್ರಧಾನಿಯನ್ನಾಗಿ ಮಾಜಿ ಸಚಿವ ಅಹ್ಮದ್ ಷಫಿ ಅವರನ್ನು ನೇಮಿಸಲಾಗಿದೆ. ಹೊಸ್ನಿ ಅವರ ಸಮರ್ಥ ಉತ್ತರಾಧಿಕಾರಿ ಎಂಬಂತೆ ವಾಯುಪಡೆ ಮಾಜಿ ಅಧಿಕಾರಿ ಶಫೀಕ್ ಅವರಿಗೆ ಪ್ರಚಾರ ನೀಡಲಾಗುತ್ತಿದೆ. <br /> <br /> ಮೂವತ್ತು ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ತನ್ನ ಬಲಗೈಬಂಟ ಉಮರ್ ಸುಲೈಮಾನ್ ಅವರನ್ನು ಉಪ-ಅಧ್ಯಕ್ಷರಾಗಿ ಹೊಸ್ನಿ ನೇಮಕ ಮಾಡಿದ್ದಾರೆ. . ಇತರ ಕೆಲವು ಪ್ರಮುಖ ಹುದ್ದೆಗಗೆ ಹೊಸ ನೇಮಕಾತಿ ಮಾಡಲಾಗಿದೆ.<br /> ಜೈಲು ಅಧಿಕಾರಿ ಹತ್ಯೆ, ಕೈದಿಗಳು ಪರಾರಿ: ಫೈಯೂಮ್ ಗವರ್ನರೆಟ್ ಪ್ರದೇಶದಲ್ಲಿ ಅಪರಿಚಿತ ಶಸ್ತ್ರಾಸ್ತ್ರಧಾರಿಗಳು ಜೈಲಿಗೆ ಮುತ್ತಿಗೆ ಹಾಕಿ, ವರಿಷ್ಠಾಧಿಕಾರಿಯನ್ನು ಹತ್ಯೆಗೈದಿದ್ದಾರೆ. ಫೈಯೂಮ್ ಗವರ್ನರೆಟ್, ಅಲೆಗ್ಸಾಂಡ್ರಿಯಾ, ಆಸ್ವಾನ್ ಸೇರಿದಂತೆ ಇತರ ಹಲವು ಜೈಲುಗಳಿಂದ ಸಾವಿರಾರು ಕೈದಿಗಳು ರಾತೋರಾತ್ರಿ ಪರಾರಿಯಾಗಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೈರೊ (ಐಎಎನ್ಎಸ್): ಈಜಿಪ್ಟ್ನಲ್ಲಿ ಅಧ್ಯಕ್ಷ ಹೊಸ್ನಿ ಮುಬಾರಕ್ ಆಡಳಿತವನ್ನು ವಿರೋಧಿಸಿ ಜನಾಕ್ರೋಶ ತೀವ್ರಗೊಂಡಿದ್ದು, ಭಾನುವಾರ ಪೊಲೀಸರೊಂದಿಗೆ ಘರ್ಷಣೆಗೆ ಇಳಿದ ಜನರನ್ನು ಚದುರಿಸಲು ನಡೆಸಿದ ಗೋಲಿಬಾರ್ಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ.<br /> <br /> ಇಲ್ಲಿನ ಒಳಾಡಳಿತ ಸಚಿವಾಲಯ ಕಟ್ಟಡ ಸಂಕೀರ್ಣದ ಮುಂಭಾಗದಲ್ಲಿ ಈ ಸಾವು ನೋವು ಸಂಭವಿಸಿದೆ. ಸರ್ಕಾರ ವಿರೋಧಿ ಹೋರಾಟ ಇದೀಗ ದರೋಡೆ, ದೊಂಬಿ, ಅರಾಜಕತೆಯತ್ತ ತಿರುಗಿದೆ.<br /> <br /> ಒಟ್ಟು 150 ಬಲಿ: ಸರ್ಕಾರದ ವಿರುದ್ಧ ಜನತೆಯ ಪ್ರತಿಭಟನೆ, ಹಿಂಸಾಚಾರ ಮಂಗಳವಾರದಿಂದ ಭುಗಿಲೆದ್ದ ಬಳಿ ಇದುವರೆಗೆ 150 ಮಂದಿ ಸಾವನ್ನಪ್ಪಿದ್ದಾರೆ. ಗುರುವಾರದವರೆಗೆ 7, ಶುಕ್ರವಾರದಂದು 62, ಶನಿವಾರ 33 ಮಂದಿ ಹಿಂಸಾಚಾರ ಮತ್ತು ಘರ್ಷಣೆಗೆ ಬಲಿಯಾಗಿದ್ದಾರೆ.<br /> <br /> ನಗರ ಮಧ್ಯದಲ್ಲಿ ಇರುವ ಸಚಿವಾಲಯ ಕಟ್ಟಡಕ್ಕೆ ಭಾನುವಾರ ಬೆಳಗ್ಗೆ ಉದ್ವಿಗ್ನ ಜನರ ಗುಂಪು ಮುತ್ತಿಗೆ ಹಾಕಿತ್ತು. ಗುಂಪನ್ನು ಚದುರಿಸಲು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಗುಂಡುಹಾರಿಸಿದ್ದರು. ಇದರಿಂದ 10 ಮಂದಿ ಸತ್ತರು ಎಂದು ‘ಅಲ್ ಜಜೀರಾ’ ಟಿವಿ ವರದಿ ಮಾಡಿದೆ.<br /> <br /> ರಾಜೀನಾಮೆಗೆ ಪಟ್ಟು: ಹೊಸ್ನಿ ಆಳ್ವಿಕೆ ವಿರುದ್ಧ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಜನರ ಪ್ರತಿಭಟನೆ ಮತ್ತಷ್ಟು ತೀವ್ರವಾಗಿದೆ. ಮೂರು ದಶಕಗಳಿಂದ ನಿರಂಕುಶ ಆಡಳಿತ ನಡೆಸುತ್ತಿರುವ ಹೊಸ್ನಿ ರಾಜೀನಾಮೆ ನೀಡಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಒತ್ತಾಯವಾಗಿದೆ. <br /> <br /> ಪೊಲೀಸರಿಂದಲೇ ಲೂಟಿ: ಜನರು ಪ್ರತಿಭಟನೆ, ಹಿಂಸಾಚಾರದಲ್ಲಿ ತೊಡಗಿದ್ದರೆ, ಈ ಸಂದರ್ಭವನ್ನು ಹಣ, ಬೆಲೆಬಾಳುವ ಸಾಮಗ್ರಿಗಳನ್ನು ದೋಚಲು ದುಷ್ಕರ್ಮಿಗಳು ನಿರತರಾಗಿದ್ದಾರೆ. ಈ ಕಾರ್ಯದಲ್ಲಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಯೇ ಹೆಚ್ಚಾಗಿ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ.<br /> <br /> ಐಷಾರಾಮಿ ವಾಣಿಜ್ಯ ಸಂಕೀರ್ಣಗಳು, ಶಾಪಿಂಗ್ ಮಾಲ್ಗಳಲ್ಲಿ ವಸ್ತುಗಳನ್ನು ದೋಚುವ ಕಾರ್ಯ ರಾಜಧಾನಿ ನಗರದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಸಮವಸ್ತ್ರ ತ್ಯಜಿಸಿರುವ ಪೊಲೀಸ್ ಸಿಬ್ಬಂದಿ ಇಂತಹ ಕುಕೃತ್ಯಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ. <br /> <br /> ಸರ್ಕಾರಿ ಭದ್ರತೆಯ ಮೇಲೆ ನಂಬಿಕೆ ಕಳೆದುಕೊಂಡಿರುವ ನಿವಾಸಿಗಳು ತಮ್ಮದೇ ಸಮಿತಿಗಳನ್ನು ರಚಿಸಿಕೊಂಡು, ಕೋವಿ, ದೊಣ್ಣೆ, ಕುಡುಗೋಲು ಹಿಡಿದು ಆಸ್ತಿಪಾಸ್ತಿ ರಕ್ಷಣೆಯ ಕಾರ್ಯದಲ್ಲಿ ತೊಡಗಿದ್ದಾರೆ. <br /> <br /> ಹೊಸ ಪ್ರಧಾನಿ: ಈ ಮಧ್ಯೆ, ಜನರನ್ನು ಶಾಂತಗೊಳಿಸುವುದು ಮತ್ತು ಅಧಿಕಾರದಲ್ಲೇ ಮುಂದುವರಿಯುವ ಪ್ರಯತ್ನದಲ್ಲಿರುವ ಹೊಸ್ನಿ ಶನಿವಾರ ಆಡಳಿತ ಸುಧಾರಣೆಯ ಭರವಸೆ ನೀಡಿದ್ದಾರೆ. <br /> <br /> ಇದಕ್ಕೆ ಮುನ್ಸೂಚನೆ ಎಂಬಂತೆ ಸದ್ಯ ಇರುವ ಸರ್ಕಾರವನ್ನು ಬರ್ಕಾಸ್ತು ಮಾಡಿದ್ದಾರೆ. ಹೊಸ ಪ್ರಧಾನಿಯನ್ನಾಗಿ ಮಾಜಿ ಸಚಿವ ಅಹ್ಮದ್ ಷಫಿ ಅವರನ್ನು ನೇಮಿಸಲಾಗಿದೆ. ಹೊಸ್ನಿ ಅವರ ಸಮರ್ಥ ಉತ್ತರಾಧಿಕಾರಿ ಎಂಬಂತೆ ವಾಯುಪಡೆ ಮಾಜಿ ಅಧಿಕಾರಿ ಶಫೀಕ್ ಅವರಿಗೆ ಪ್ರಚಾರ ನೀಡಲಾಗುತ್ತಿದೆ. <br /> <br /> ಮೂವತ್ತು ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ತನ್ನ ಬಲಗೈಬಂಟ ಉಮರ್ ಸುಲೈಮಾನ್ ಅವರನ್ನು ಉಪ-ಅಧ್ಯಕ್ಷರಾಗಿ ಹೊಸ್ನಿ ನೇಮಕ ಮಾಡಿದ್ದಾರೆ. . ಇತರ ಕೆಲವು ಪ್ರಮುಖ ಹುದ್ದೆಗಗೆ ಹೊಸ ನೇಮಕಾತಿ ಮಾಡಲಾಗಿದೆ.<br /> ಜೈಲು ಅಧಿಕಾರಿ ಹತ್ಯೆ, ಕೈದಿಗಳು ಪರಾರಿ: ಫೈಯೂಮ್ ಗವರ್ನರೆಟ್ ಪ್ರದೇಶದಲ್ಲಿ ಅಪರಿಚಿತ ಶಸ್ತ್ರಾಸ್ತ್ರಧಾರಿಗಳು ಜೈಲಿಗೆ ಮುತ್ತಿಗೆ ಹಾಕಿ, ವರಿಷ್ಠಾಧಿಕಾರಿಯನ್ನು ಹತ್ಯೆಗೈದಿದ್ದಾರೆ. ಫೈಯೂಮ್ ಗವರ್ನರೆಟ್, ಅಲೆಗ್ಸಾಂಡ್ರಿಯಾ, ಆಸ್ವಾನ್ ಸೇರಿದಂತೆ ಇತರ ಹಲವು ಜೈಲುಗಳಿಂದ ಸಾವಿರಾರು ಕೈದಿಗಳು ರಾತೋರಾತ್ರಿ ಪರಾರಿಯಾಗಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>