<p><strong>ರೋಮ್, (ಪಿಟಿಐ):</strong> ಗಿಗ್ಲಿಯೊ ದ್ವೀಪದ ಬಳಿ ಮೆಡಿಟರೇನಿಯನ್ ಸಮುದ್ರದಲ್ಲಿ ದುರಂತಕ್ಕೀಡಾದ `ಕೋಸ್ಟಾ ಕಾನ್ಕಾರ್ಡಿಯಾ~ ಹಡಗಿನಿಂದ 201 ಭಾರತೀಯ ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು,ಇನ್ನೊಬ್ಬ ಭಾರತೀಯನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.<br /> <br /> ಕಾಣೆಯಾದ ಭಾರತೀಯ ರೆಬೆಲ್ಲೊ ರಸೆಲ್ ಟೆರೆನ್ಗಾಗಿ ತೀವ್ರ ಶೋಧ ಮುಂದುವರಿಯುತ್ತಿದೆಯಲ್ಲದೆ ಭಾರತೀಯ ಸಿಬ್ಬಂದಿ ಕುರಿತು ಮಾಹಿತಿಗಾಗಿ ನವದೆಹಲಿ ಮತ್ತು ರೋಮ್ಗಳಲ್ಲಿ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರ ಸಚಿವಾಲಯ ತಿಳಿಸಿದೆ. ದುರಂತದಲ್ಲಿ ಇದುವರೆಗೆ ಭಾರತೀಯರು ಸಾವಿಗೀಡಾದ ವರದಿಯಾಗಿಲ್ಲ. <br /> <br /> ರಸೆಲ್ ಅವರು `ಕೋಸ್ಟಾ ಕಾನ್ಕಾರ್ಡಿಯಾ~ ಹಡಗಿನಲ್ಲಿ ವೆಯಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. <br /> ಹಡಗಿನಲ್ಲಿ ಒಟ್ಟು 203 ಭಾರತೀಯ ಸಿಬ್ಬಂದಿ ಇದ್ದು, ಅವರಲ್ಲಿ 202 ಹಡಗಿನ ಸಿಬ್ಬಂದಿಯಾಗಿದ್ದು, ಇನ್ನೊಬ್ಬರು ಪ್ರಯಾಣಿಕರಾಗಿದ್ದರು ಎಂದು ಭಾರತೀಯ ರಾಯಭಾರ ಕಚೇರಿಯ ವಕ್ತಾರ ವಿಶ್ವೇಶ್ ನೇಗಿ ತಿಳಿಸಿದ್ದಾರೆ.<br /> ಗಿಗ್ಲಿಯೊ ದ್ವೀಪ ಬಳಿ ಶನಿವಾರ ಹಡಗು ಬಂಡೆಗೆ ಅಪ್ಪಳಿಸಿದ್ದರಿಂದ ದುರಂತ ಸಂಭವಿಸಿತ್ತು. ದುರಂತದಲ್ಲಿ ಇದುವರೆಗೆ ಆರು ಮಂದಿ ಸಾವನ್ನಪ್ಪಿದ್ದಾರೆ. <br /> <br /> `ಹಡಗಿನ ಕ್ಯಾಪ್ಟನ್ ಫ್ರಾನ್ಸೆಸ್ಕೊ ಶೆಟ್ಟಿನೋ ನೀಡಿದ ತಪ್ಪು ಮಾಹಿತಿಯಿಂದಾಗಿ ರಕ್ಷಣಾ ಕಾರ್ಯದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಯಿತು~ ಎಂದು ಹಡಗಿನ ಮಾಲೀಕ ದೂರಿದ್ದಾರೆ. <br /> <br /> ತುರ್ತು ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಗಳನ್ನು ಅವರು ಬಳಸಲಿಲ್ಲ ಮಾತ್ರವಲ್ಲ, ಹಡಗು ಸಂಚಾರಕ್ಕೆ ಬಳಸಿದ ಮಾರ್ಗವೂ ಸರಿಯಾಗಿರಲಿಲ್ಲ ಎಂದೂ ಅವರು ಇದೇ ವೇಳೆ ಆರೋಪಿಸಿದರು. ಇಟಲಿ, ಅಮೆರಿಕ ಮತ್ತು ಫ್ರಾನ್ಸ್ಗೆ ಸೇರಿದ ಸಿಬ್ಬಂದಿ ಕೂಡ ದುರಂತದಲ್ಲಿ ಕಾಣೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರೋಮ್, (ಪಿಟಿಐ):</strong> ಗಿಗ್ಲಿಯೊ ದ್ವೀಪದ ಬಳಿ ಮೆಡಿಟರೇನಿಯನ್ ಸಮುದ್ರದಲ್ಲಿ ದುರಂತಕ್ಕೀಡಾದ `ಕೋಸ್ಟಾ ಕಾನ್ಕಾರ್ಡಿಯಾ~ ಹಡಗಿನಿಂದ 201 ಭಾರತೀಯ ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು,ಇನ್ನೊಬ್ಬ ಭಾರತೀಯನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.<br /> <br /> ಕಾಣೆಯಾದ ಭಾರತೀಯ ರೆಬೆಲ್ಲೊ ರಸೆಲ್ ಟೆರೆನ್ಗಾಗಿ ತೀವ್ರ ಶೋಧ ಮುಂದುವರಿಯುತ್ತಿದೆಯಲ್ಲದೆ ಭಾರತೀಯ ಸಿಬ್ಬಂದಿ ಕುರಿತು ಮಾಹಿತಿಗಾಗಿ ನವದೆಹಲಿ ಮತ್ತು ರೋಮ್ಗಳಲ್ಲಿ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರ ಸಚಿವಾಲಯ ತಿಳಿಸಿದೆ. ದುರಂತದಲ್ಲಿ ಇದುವರೆಗೆ ಭಾರತೀಯರು ಸಾವಿಗೀಡಾದ ವರದಿಯಾಗಿಲ್ಲ. <br /> <br /> ರಸೆಲ್ ಅವರು `ಕೋಸ್ಟಾ ಕಾನ್ಕಾರ್ಡಿಯಾ~ ಹಡಗಿನಲ್ಲಿ ವೆಯಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. <br /> ಹಡಗಿನಲ್ಲಿ ಒಟ್ಟು 203 ಭಾರತೀಯ ಸಿಬ್ಬಂದಿ ಇದ್ದು, ಅವರಲ್ಲಿ 202 ಹಡಗಿನ ಸಿಬ್ಬಂದಿಯಾಗಿದ್ದು, ಇನ್ನೊಬ್ಬರು ಪ್ರಯಾಣಿಕರಾಗಿದ್ದರು ಎಂದು ಭಾರತೀಯ ರಾಯಭಾರ ಕಚೇರಿಯ ವಕ್ತಾರ ವಿಶ್ವೇಶ್ ನೇಗಿ ತಿಳಿಸಿದ್ದಾರೆ.<br /> ಗಿಗ್ಲಿಯೊ ದ್ವೀಪ ಬಳಿ ಶನಿವಾರ ಹಡಗು ಬಂಡೆಗೆ ಅಪ್ಪಳಿಸಿದ್ದರಿಂದ ದುರಂತ ಸಂಭವಿಸಿತ್ತು. ದುರಂತದಲ್ಲಿ ಇದುವರೆಗೆ ಆರು ಮಂದಿ ಸಾವನ್ನಪ್ಪಿದ್ದಾರೆ. <br /> <br /> `ಹಡಗಿನ ಕ್ಯಾಪ್ಟನ್ ಫ್ರಾನ್ಸೆಸ್ಕೊ ಶೆಟ್ಟಿನೋ ನೀಡಿದ ತಪ್ಪು ಮಾಹಿತಿಯಿಂದಾಗಿ ರಕ್ಷಣಾ ಕಾರ್ಯದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಯಿತು~ ಎಂದು ಹಡಗಿನ ಮಾಲೀಕ ದೂರಿದ್ದಾರೆ. <br /> <br /> ತುರ್ತು ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಗಳನ್ನು ಅವರು ಬಳಸಲಿಲ್ಲ ಮಾತ್ರವಲ್ಲ, ಹಡಗು ಸಂಚಾರಕ್ಕೆ ಬಳಸಿದ ಮಾರ್ಗವೂ ಸರಿಯಾಗಿರಲಿಲ್ಲ ಎಂದೂ ಅವರು ಇದೇ ವೇಳೆ ಆರೋಪಿಸಿದರು. ಇಟಲಿ, ಅಮೆರಿಕ ಮತ್ತು ಫ್ರಾನ್ಸ್ಗೆ ಸೇರಿದ ಸಿಬ್ಬಂದಿ ಕೂಡ ದುರಂತದಲ್ಲಿ ಕಾಣೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>