<p><strong> ಟೋಕಿಯೊ (ಐಎಎನ್ಎಸ್): </strong>ಜಲ ಸಂಪನ್ಮೂಲಗಳ ಸಮರ್ಥ ಬಳಕೆ ಹಾಗೂ ನಿರ್ವಹಣೆಗಾಗಿ ಭಾರತ ಮತ್ತು ಸಿಂಗಪುರ ವಿಶ್ವಸಂಸ್ಥೆಯ 2014ರ ‘ಅತ್ಯುತ್ತಮ ಜೀವಜಲ ನಿರ್ವಹಣೆ’ ಪ್ರಶಸ್ತಿಗೆ ಭಾಜನವಾಗಿವೆ.<br /> <br /> ಮಾರ್ಚ್ 22ರ ವಿಶ್ವ ಜಲ ದಿನಾಚರಣೆ ಸಂದರ್ಭದಲ್ಲಿ ಶುಕ್ರವಾರ ವಿಶ್ವಸಂಸ್ಥೆ ಈ ಪ್ರಶಸ್ತಿಯನ್ನು ಘೋಷಿಸಿದೆ.‘ಈ ಬಾರಿ ಪ್ರಶಸ್ತಿಗೆ ಭಾಜನರಾಗಿರುವ ಈ ಎರಡು ದೇಶಗಳು ಭವಿಷ್ಯದಲ್ಲಿ ನೀರಿನ ಸಂಪನ್ಮೂಲಗಳ ಸಮರ್ಥ ಬಳಕೆಗೆ ಅತ್ಯುತ್ತಮ ಉದಾಹರಣೆಗಳು’ ಎಂದು ವಿಶ್ವಸಂಸ್ಥೆಯ ಜಲ ವಿಭಾಗದ ಮೈಕೆಲ್ ಜರೌದ್ ಪ್ರಶಂಸೆ ಮಾಡಿದ್ದಾರೆ.<br /> <br /> ಪ್ರತಿ ವರ್ಷವೂ ವಿಶ್ವ ಜಲ ದಿನಾಚರಣೆ ಪ್ರಯುಕ್ತ ವಿಶ್ವಸಂಸ್ಥೆ ನೀಡುವ ಜಲ ಪ್ರಶಸ್ತಿಯು ವಿಭಿನ್ನ ಉದ್ದೇಶವನ್ನು ಗುರಿಯಾಗಿರಿಸಿಕೊಂಡಿರುತ್ತದೆ. ಈ ಬಾರಿ ನೀರಿನ ಸಂಪನ್ಮೂಲದ ಸಮರ್ಥ ಹಾಗೂ ಸಮರ್ಪಕ ನಿರ್ವಹಣೆ ಬಗ್ಗೆ ವಿಷಯ ಕೇಂದ್ರಿತವಾಗಿತ್ತು. ಈ ಬಾರಿ ಪ್ರಶಸ್ತಿಗೆ ವಿವಿಧ ದೇಶಗಳಿಂದ ಒಟ್ಟು 34 ಅರ್ಜಿಗಳು ಬಂದಿದ್ದವು. ಅದರಲ್ಲಿ 9 ಅರ್ಜಿಗಳು ಏಷ್ಯಾದಿಂದ ಬಂದಿದ್ದವು ಎಂದು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong> ಟೋಕಿಯೊ (ಐಎಎನ್ಎಸ್): </strong>ಜಲ ಸಂಪನ್ಮೂಲಗಳ ಸಮರ್ಥ ಬಳಕೆ ಹಾಗೂ ನಿರ್ವಹಣೆಗಾಗಿ ಭಾರತ ಮತ್ತು ಸಿಂಗಪುರ ವಿಶ್ವಸಂಸ್ಥೆಯ 2014ರ ‘ಅತ್ಯುತ್ತಮ ಜೀವಜಲ ನಿರ್ವಹಣೆ’ ಪ್ರಶಸ್ತಿಗೆ ಭಾಜನವಾಗಿವೆ.<br /> <br /> ಮಾರ್ಚ್ 22ರ ವಿಶ್ವ ಜಲ ದಿನಾಚರಣೆ ಸಂದರ್ಭದಲ್ಲಿ ಶುಕ್ರವಾರ ವಿಶ್ವಸಂಸ್ಥೆ ಈ ಪ್ರಶಸ್ತಿಯನ್ನು ಘೋಷಿಸಿದೆ.‘ಈ ಬಾರಿ ಪ್ರಶಸ್ತಿಗೆ ಭಾಜನರಾಗಿರುವ ಈ ಎರಡು ದೇಶಗಳು ಭವಿಷ್ಯದಲ್ಲಿ ನೀರಿನ ಸಂಪನ್ಮೂಲಗಳ ಸಮರ್ಥ ಬಳಕೆಗೆ ಅತ್ಯುತ್ತಮ ಉದಾಹರಣೆಗಳು’ ಎಂದು ವಿಶ್ವಸಂಸ್ಥೆಯ ಜಲ ವಿಭಾಗದ ಮೈಕೆಲ್ ಜರೌದ್ ಪ್ರಶಂಸೆ ಮಾಡಿದ್ದಾರೆ.<br /> <br /> ಪ್ರತಿ ವರ್ಷವೂ ವಿಶ್ವ ಜಲ ದಿನಾಚರಣೆ ಪ್ರಯುಕ್ತ ವಿಶ್ವಸಂಸ್ಥೆ ನೀಡುವ ಜಲ ಪ್ರಶಸ್ತಿಯು ವಿಭಿನ್ನ ಉದ್ದೇಶವನ್ನು ಗುರಿಯಾಗಿರಿಸಿಕೊಂಡಿರುತ್ತದೆ. ಈ ಬಾರಿ ನೀರಿನ ಸಂಪನ್ಮೂಲದ ಸಮರ್ಥ ಹಾಗೂ ಸಮರ್ಪಕ ನಿರ್ವಹಣೆ ಬಗ್ಗೆ ವಿಷಯ ಕೇಂದ್ರಿತವಾಗಿತ್ತು. ಈ ಬಾರಿ ಪ್ರಶಸ್ತಿಗೆ ವಿವಿಧ ದೇಶಗಳಿಂದ ಒಟ್ಟು 34 ಅರ್ಜಿಗಳು ಬಂದಿದ್ದವು. ಅದರಲ್ಲಿ 9 ಅರ್ಜಿಗಳು ಏಷ್ಯಾದಿಂದ ಬಂದಿದ್ದವು ಎಂದು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>