<p><strong>ಇಸ್ಲಾಮಾಬಾದ್, (ಪಿಟಿಐ):</strong> ‘ಕಾಶ್ಮೀರ ಸಮಸ್ಯೆ’ಯನ್ನು ಇತ್ಯರ್ಥಗೊಳಿಸುವ ಪೂರ್ವ ಷರತ್ತಿನ ಮೇಲೆ ಭಾರತಕ್ಕೆ ‘ಪರಮಾಪ್ತ ರಾಷ್ಟ್ರ’ದ ಸ್ಥಾನಮಾನ ನೀಡಬೇಕು ಎಂದು ಪಾಕಿಸ್ತಾನದ ಪ್ರತಿಪಕ್ಷ ಸಂಸದರ ಗುಂಪು ನಿರ್ಣಯ ಅಂಗೀಕರಿಸಿದೆ.</p>.<p>ಪ್ರತಿಪಕ್ಷಗಳಾದ ಪಿಎಂಎಲ್ಕ್ಯೂ ಮತ್ತು ಪಿಎಂಎಲ್-ಎನ್ ಹತ್ತು ಸಂಸದರು ಸಹಿ ಮಾಡಿದ ನಿರ್ಣಯವನ್ನು ಶನಿವಾರ ಸಂಸತ್ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ. ಭಾರತದ ಕಟು ಟೀಕಾಕಾರರಾದ ಪಿಎಂಎಲ್ಕ್ಯೂನ ಮಾರ್ವಿ ಮೆಮನ್ ನಿರ್ಣಯದ ಪ್ರತಿಯನ್ನು ಸಲ್ಲಿಸಿದರು.</p>.<p>‘ಭಾರತಕ್ಕೆ ಪರಮಾಪ್ತ ಸ್ಥಾನಮಾನ ನೀಡುವುದಕ್ಕೂ ಮೊದಲು ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಷರತ್ತು ವಿಧಿಸಬೇಕು. ಇಲ್ಲದಿದ್ದರೆ ಕಾಶ್ಮೀರ ವಿಷಯಕ್ಕೆ ಮಾರಣಾಂತಿಕ ಪೆಟ್ಟು ನೀಡಿದಂತೆ’ ಎಂದು ಎಚ್ಚರಿಸಲಾಗಿದೆ.</p>.<p>ವಾಣಿಜ್ಯ ಕಾರ್ಯದರ್ಶಿಗಳ ಮಾತುಕತೆ ಮುಗಿದ ನಂತರ ಮಾಧ್ಯಮದ ಜತೆ ಮಾತನಾಡಿದ ಪಾಕ್ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಜಾಫರ್ ಮಹಮ್ಮೂದ್, ‘ಕಾಶ್ಮೀರ ಸಮಸ್ಯೆ ಅಥವಾ ರಾಜಕೀಯ ವಿಷಯಗಳ ಮೇಲಿನ ಇಂತಹ ಠರಾವು ಭಾರತಕ್ಕೆ ಪರಮಾಪ್ತ ರಾಷ್ಟ್ರ ಸ್ಥಾನ ನೀಡಲು ಅಡ್ಡಿಯಾಗಲಾರದು. ಈ ಎರಡೂ ವಿಷಯಗಳಿಗೆ ಯಾವುದೇ ರೀತಿಯ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.</p>.<p>ಮುಂಬಯಿ ಮೇಲಿನ ದಾಳಿಯ ನಂತರ ಸಂಪೂರ್ಣ ಹದಗೆಟ್ಟಿದ್ದ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗೆ ಚಾಲನೆ ನೀಡಲಾಗಿದೆ.</p>.<p>ಪರಸ್ಪರ ವ್ಯಾಪಾರ, ವಹಿವಾಟು ಪುನರಾರಂಭಿಸುವ ಉದ್ದೇಶದಿಂದ ಪಾಕ್ ಈ ಹೆಜ್ಜೆ ಇಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್, (ಪಿಟಿಐ):</strong> ‘ಕಾಶ್ಮೀರ ಸಮಸ್ಯೆ’ಯನ್ನು ಇತ್ಯರ್ಥಗೊಳಿಸುವ ಪೂರ್ವ ಷರತ್ತಿನ ಮೇಲೆ ಭಾರತಕ್ಕೆ ‘ಪರಮಾಪ್ತ ರಾಷ್ಟ್ರ’ದ ಸ್ಥಾನಮಾನ ನೀಡಬೇಕು ಎಂದು ಪಾಕಿಸ್ತಾನದ ಪ್ರತಿಪಕ್ಷ ಸಂಸದರ ಗುಂಪು ನಿರ್ಣಯ ಅಂಗೀಕರಿಸಿದೆ.</p>.<p>ಪ್ರತಿಪಕ್ಷಗಳಾದ ಪಿಎಂಎಲ್ಕ್ಯೂ ಮತ್ತು ಪಿಎಂಎಲ್-ಎನ್ ಹತ್ತು ಸಂಸದರು ಸಹಿ ಮಾಡಿದ ನಿರ್ಣಯವನ್ನು ಶನಿವಾರ ಸಂಸತ್ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ. ಭಾರತದ ಕಟು ಟೀಕಾಕಾರರಾದ ಪಿಎಂಎಲ್ಕ್ಯೂನ ಮಾರ್ವಿ ಮೆಮನ್ ನಿರ್ಣಯದ ಪ್ರತಿಯನ್ನು ಸಲ್ಲಿಸಿದರು.</p>.<p>‘ಭಾರತಕ್ಕೆ ಪರಮಾಪ್ತ ಸ್ಥಾನಮಾನ ನೀಡುವುದಕ್ಕೂ ಮೊದಲು ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಷರತ್ತು ವಿಧಿಸಬೇಕು. ಇಲ್ಲದಿದ್ದರೆ ಕಾಶ್ಮೀರ ವಿಷಯಕ್ಕೆ ಮಾರಣಾಂತಿಕ ಪೆಟ್ಟು ನೀಡಿದಂತೆ’ ಎಂದು ಎಚ್ಚರಿಸಲಾಗಿದೆ.</p>.<p>ವಾಣಿಜ್ಯ ಕಾರ್ಯದರ್ಶಿಗಳ ಮಾತುಕತೆ ಮುಗಿದ ನಂತರ ಮಾಧ್ಯಮದ ಜತೆ ಮಾತನಾಡಿದ ಪಾಕ್ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಜಾಫರ್ ಮಹಮ್ಮೂದ್, ‘ಕಾಶ್ಮೀರ ಸಮಸ್ಯೆ ಅಥವಾ ರಾಜಕೀಯ ವಿಷಯಗಳ ಮೇಲಿನ ಇಂತಹ ಠರಾವು ಭಾರತಕ್ಕೆ ಪರಮಾಪ್ತ ರಾಷ್ಟ್ರ ಸ್ಥಾನ ನೀಡಲು ಅಡ್ಡಿಯಾಗಲಾರದು. ಈ ಎರಡೂ ವಿಷಯಗಳಿಗೆ ಯಾವುದೇ ರೀತಿಯ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.</p>.<p>ಮುಂಬಯಿ ಮೇಲಿನ ದಾಳಿಯ ನಂತರ ಸಂಪೂರ್ಣ ಹದಗೆಟ್ಟಿದ್ದ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗೆ ಚಾಲನೆ ನೀಡಲಾಗಿದೆ.</p>.<p>ಪರಸ್ಪರ ವ್ಯಾಪಾರ, ವಹಿವಾಟು ಪುನರಾರಂಭಿಸುವ ಉದ್ದೇಶದಿಂದ ಪಾಕ್ ಈ ಹೆಜ್ಜೆ ಇಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>