ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೂ ಬಾಣ

ADVERTISEMENT

ನಮೋ... ನಮೋ ಎಂದರೆ ಭಯವಿಲ್ಲ...

ನಮೋ ಯಂಕಟೇಶಾ... ನಮೋ ವಾರಣಾಸಿ ವಾಸಾ... ‘ಏನಯ್ಯಾ ‘ಘಾ’, ಇತ್ತೀಚೆಗೆ ತಿರುಪತಿಗೇನಾದ್ರೂ ಹೋಗಿ ಬಂದ್ಯಾ? ಗೋವಿಂದನ ಭಜನೆ ಶುರುಮಾಡಿಕೊಂಡು ಬಿಟ್ಟಿದ್ದೀಯಲ್ಲಾ...’ -ಪೆಕರ, ನಮೋ ಸುಪ್ರಭಾತ ಪಠಿಸುತ್ತಿದ್ದ ಘಾನನ್ನು ಅಚ್ಚರಿಯಿಂದ ಪ್ರಶ್ನಿಸಿದ.
Last Updated 18 ಮೇ 2014, 19:30 IST
ನಮೋ... ನಮೋ ಎಂದರೆ ಭಯವಿಲ್ಲ...

ಸ್ಟೇಡಿಯಂನತ್ತ ಪೆಕರನ ಸವಾರಿ

ಐಪಿಎಲ್ ಮ್ಯಾಚ್ ನೋಡಬೇಕು ಎಂಬುದು ಪೆಕರನ ಜೀವಮಾನದ ಆಸೆ. ಅದ್ಯಾವ ದೊಡ್ಡಾಟಾರೀ? ಅದ­ನ್ಯಾಕೆ ಆ ಸ್ಟೇಡಿಯಂಗೆ ಹೋಗಿ, ಆ ರಶ್ಶಿನಲ್ಲಿ ಕೂತು ನೋಡಿ ಸುಸ್ತಾ­ಗ್ತೀರಿ? ಕೆಲವೇ ಜನ ಆಡೋ ಆಟವನ್ನು ಸಾವಿ­ರಾರು ಮೂರ್ಖರು ಕೂತು ನೋಡುವ ಆಟ ಅಂಥಾ ಆಡು­ಮಾತು ಕೇಳಿ­ಲ್ಲವಾ? ಅಷ್ಟೂ ಆಸೆ ಇದ್ರೆ ಮನೇಲಿ ಆರಾಮಾಗಿ ಕೂತು ಟಿ.ವಿ.ನಲ್ಲಿ ನೋಡಿ ಎಂಜಾಯ್ ಮಾಡಿ, ಅಷ್ಟಕ್ಕೂ ಎಲ್ಲಿ ನೋಡಿದ್ರೆ ಏನು, ಎಲ್ಲವೂ ಮ್ಯಾಚ್ ಫಿಕ್ಸಿಂಗ್ ಅಲ್ಲವೇ? ಎಂದು ಸ್ನೇಹಿತರು ಪೆಕರನಿಗೆ ಪುಕ್ಕಟೆ ಸಲಹೆ ಕೊಟ್ಟರು.
Last Updated 11 ಮೇ 2014, 19:30 IST
ಸ್ಟೇಡಿಯಂನತ್ತ ಪೆಕರನ ಸವಾರಿ

ಬಂಗ್ಲೆ ನವೀಕರಣ ಎಂಬ ಕಲೆ

‘ಏನಯ್ಯಾ ಪೆಕರ, ಒಂದು ವಾರದಿಂದ ಕಾಣ್ತಾ ಇರಲಿಲ್ಲವಲ್ಲಾ? ಏನ್ ಸಮಾಚಾರ?’ ಎಂದು ಸ್ನೇಹಿತರು ಪ್ರಶ್ನಿಸಿದರು. ‘ಏನಿಲ್ಲಾ, ಮನೆ ನವೀಕರಣ ಮಾಡಿಸ್ತಾ ಇದ್ದೆ’- ಎಂದು ಪೆಕರ ಕೂಲಾಗಿ ಉತ್ತರಿಸಿದ. ಎಲ್ಲರೂ ಒಮ್ಮೆಲೇ ಬೆಚ್ಚಿಬಿದ್ದರು. ‘ಮನೆ ಚೆನ್ನಾ­ಗಿಯೇ ಇತ್ತಲ್ಲಪ್ಪ. ಸುಣ್ಣ ಬಣ್ಣ ಫಸ್ಟ್‌­ಕ್ಲಾಸಾ­­ಗಿತ್ತು. ಹೊಸ ಮನೆ ಬೇರೆ, ನವೀಕರಣ ಏನ್ ಮತ್ ಯಾಕ್ ಮಾಡಿಸ್ದೆ?’ - ಎಲ್ಲರೂ ಒಮ್ಮೆಲೇ ಅಚ್ಚರಿಯಿಂದ ಪ್ರಶ್ನಿಸಿದರು.
Last Updated 4 ಮೇ 2014, 19:30 IST
ಬಂಗ್ಲೆ ನವೀಕರಣ ಎಂಬ ಕಲೆ

ಬೈಗುಳ ಭಾಷಾಕೋಶ!

ಎಬಿಸಿಡಿ, ಆರ್‌ಎಸ್‌ವಿಪಿ, ಎಚ್‌ಎಂ, ಪಿಎಕೆ, ಡಿಇಪಿಎಂ, ಕೆ.ಜಿ, ಜೆ.ಆರ್... ಮೆಸೇಜ್ ನೋಡಿ ಸಂಪಾದಕರು ಬೆಚ್ಚಿ­ಬಿದ್ದರು.
Last Updated 27 ಏಪ್ರಿಲ್ 2014, 19:30 IST
ಬೈಗುಳ ಭಾಷಾಕೋಶ!

ಮತದಾನದ ನಂತರ ಮಠಧ್ಯಾನ

ಪೆಕರನ ವೇಷ ನೋಡಿ ಎಲ್ಲರಿಗೂ ಆಶ್ಚರ್ಯ! ಸಂಪೂರ್ಣ ಕಾವಿಧಾರಿ­ಯಾಗಿ ಬರುತ್ತಿದ್ದ ಪೆಕರನಿಗೆ ಬುದ್ಧಿ ಭ್ರಮಣೆ­ಯಾ­ಗಿ­ರ­ಬಹುದೇ ಎಂಬ ಸಂಶಯವೂ ಕೆಲವರಿಗೆ! ಇಷ್ಟು ದಿನ ಚೆನ್ನಾಗಿಯೇ ಇದ್ದ. ಮತದಾನ ಮುಗಿದ ನಂತರ ಈ ರೀತಿ ಪರಿವರ್ತನೆಯಾಗಿ ಬಿಟ್ಟ. ಅಯ್ಯೋ ಪಾಪ! ಎಂದು ಸ್ನೇಹಿತರೆಲ್ಲಾ ಕನಿಕರಪಟ್ಟರು.
Last Updated 20 ಏಪ್ರಿಲ್ 2014, 19:30 IST
ಮತದಾನದ ನಂತರ ಮಠಧ್ಯಾನ

ಮತದಾರನ ದಶಾವತಾರ

‘ಏನ್ರೀ ಪೆಕರ ಅವರೇ, ಮತದಾನಕ್ಕೆ ಎರಡೇ ದಿನ ಇದೆ. ಇನ್ನೂ ನೀವು ಮೋದಿ ವೈಫು, ರಮ್ಯಾ ಲೈಫು ಬಗ್ಗೆಯೇ ಬರೀತಾ ಇದ್ದೀರಾ. ಬಡಪಾಯಿ ಮತದಾರನ ಬಗ್ಗೆಯೂ ಸ್ವಲ್ಪ ಯೋಚನೆ ಮಾಡಿ’ ಎಂದು ಸಂಪಾದಕರು ಐಡಿಯಾ ಕೊಟ್ಟರು.
Last Updated 14 ಏಪ್ರಿಲ್ 2014, 19:30 IST
ಮತದಾರನ ದಶಾವತಾರ

ವಾಗ್ದೇವಿಯ ಭಂಡಾರದ ಮುದ್ರೆಯನೊಡೆದ ಸಾಹಿತ್ಯರತ್ನಂಗಳ್

‘ರೀ ...ಸ್ವಾಮಿ, ಸಾಹಿತಿಗಳೇ... ಸ್ವಲ್ಪ ನಿಂ­ತ್ಕೊಳ್ರೀ...’ ಎಂದು ಜನ ಕೂಗುತ್ತಿದ್ದುದು ಕಿವಿ­ಗಪ್ಪಳಿಸುತ್ತಲೇ ಪೆಕರ ಒಮ್ಮೆ ತಿರುಗಿ ನೋಡಿದ. ಒಂದಷ್ಟು ಜನ ಅವಸರ­ವಸರವಾಗಿ ಇವನತ್ತಲೇ ಕೂಗುತ್ತಾ ಬರುತ್ತಿದ್ದರು.
Last Updated 6 ಏಪ್ರಿಲ್ 2014, 19:30 IST
fallback
ADVERTISEMENT

ಮೂರು ‘ಎ.ಕೆ’, ಒಬ್ಬ ‘ಪಿ.ಕೆ’

‘ಎಲ್ಲಿದ್ದೀರಾ?’ ಎಂದು ಸಂಪಾದಕರು ಫೋನ್ ಮಾಡಿದಾಗ ವಾರಾಣಸಿ­ಯಲ್ಲಿ ಚುನಾವಣಾ ಯಾತ್ರೆ ಕೈಗೊಂಡಿದ್ದ ಪೆಕರ, ಉರಿ­ಬಿಸಿಲನ್ನೂ ಲೆಕ್ಕಿಸದೆ ಕ್ಷೇತ್ರದ ಗಲ್ಲಿ ಗಲ್ಲಿ ಸುತ್ತು­ತ್ತಿದ್ದ. ಪೊರಕೆ ಹಿಡಿದವರು, ಕಮಲ ಹಿಡಿದ­ವರು, ಸೈಕಲ್ ಹೊಡೆಯುವವರು, ಆನೆ ಮೇಲೆ ಸವಾರಿ ಮಾಡುವವರು, ಕೈ ತೋರಿಸುವವರ ಗದ್ದ­ಲದ ನಡುವೆಯೂ ಫೋನ್ ಎತ್ತಿ ಮಾತನಾಡಿದ.
Last Updated 30 ಮಾರ್ಚ್ 2014, 19:30 IST
ಮೂರು ‘ಎ.ಕೆ’, ಒಬ್ಬ ‘ಪಿ.ಕೆ’

ಪೆಕರನ ಚುನಾವಣಾ ಯಾತ್ರೆ ಶುರು...

‘ಏನ್ರೀ ಪೆಕರ ಅವರೇ, ಇಡೀ ರಾಜ್ಯದಲ್ಲಿ ಚುನಾವಣೆ ಕಾವು ಏರ್‍ತಾ ಇದೆ. ಎಲ್ಲ ಕ್ಷೇತ್ರಗ­ಳಲ್ಲೂ ಭಾರೀ ಭಾರೀ ಬಿಗ್‌ ಫೈಟ್ ನಡೀತಾ ಇದೆ. ನೀವು ಚುನಾವಣಾ ಯಾತ್ರೆ ಮಾಡೋದು ಬಿಟ್ಟು, ಡಿಕುಶಿಮಾರ ಸೇರಿ ಆರು ಜನ ಸಚಿವರ ಸ್ಟಿಂಗ್ ಮಾಡ್ತಾ ಇದೀರಲ್ರಿ? ನನಗೆ ಅದೆಲ್ಲಾ ಗೊತ್ತಿಲ್ಲ, ತಕ್ಷಣ ನೀವು ಚುನಾವಣಾ ಯಾತ್ರೆ ಆರಂಭಿಸಿ ವರದಿ ಕಳುಹಿಸಿ’ -ಎಂದು ಸಂಪಾದಕರು ಕಟ್ಟಪ್ಪಣೆ ಮಾಡಿದರು.
Last Updated 23 ಮಾರ್ಚ್ 2014, 19:30 IST
ಪೆಕರನ ಚುನಾವಣಾ ಯಾತ್ರೆ ಶುರು...

ಸ್ಟಿಂಗ್ ಆಪರೇಷನ್ ಸಕ್ಸಸ್!

ಅಯ್ಯ ಅವರ ಗೃಹಕಚೇರಿಯ ಬಳಿ, ಹೊರಲಾಗದ ಭಾರೀ ತೂಕವಿದ್ದ ಬ್ಯಾಗೊಂದನ್ನು ಹೊತ್ತುಕೊಂಡು, ಹರಟುತ್ತಾ ಬರುತ್ತಿದ್ದ ಪೆಕರನನ್ನು ಕಂಡು ಎಲ್ಲರಿಗೂ ಅಚ್ಚರಿ.
Last Updated 16 ಮಾರ್ಚ್ 2014, 19:30 IST
ಸ್ಟಿಂಗ್ ಆಪರೇಷನ್ ಸಕ್ಸಸ್!
ADVERTISEMENT