<p>ಒಬ್ಬ ಮನುಷ್ಯ ನಿರಾಸೆಯ ಮಡುವಿನಲ್ಲಿ ಸಿಕ್ಕಿಬಿದ್ದಿದ್ದ. ತಾನು ಏನು ಮಾಡಿದರೂ ಸರಿಯಾಗುತ್ತಿಲ್ಲ ಎಂದುಕೊಳ್ಳುತ್ತಿದ್ದ. ಆತನ ಸ್ನೇಹಿತನೊಬ್ಬ ಹೇಳಿದ, `ನನಗೂ ಹೀಗೆಯೇ ಆಗುತ್ತಿತ್ತು. ನಾನು ನಮ್ಮ ಊರಿನ ಮಠಕ್ಕೆ ಹೋಗಿ ಗುರುಗಳನ್ನು ಕೇಳಿದೆ. <br /> <br /> ಅವರು ನನಗೆ ಕೆಲವು ಸಲಹೆಗಳನ್ನು ನೀಡಿದರು. ಅವುಗಳನ್ನು ಪಾಲಿಸಿದ ನಂತರ ನನಗೆ ತುಂಬ ಅನುಕೂಲವಾಗಿದೆ.ಈತನೂ ಹೊರಟ ಗುರುಗಳನ್ನು ನೋಡಲು. ದಾರಿಯಲ್ಲಿ ಒಂದು ದೊಡ್ಡ ಮರವನ್ನು ಕಂಡ. ಅದರ ಎಲೆಗಳೆಲ್ಲ ಉದುರಿ ಬೋಳಾಗಿ ನಿಂತಿದೆ. ಈ ಕಾಲದಲ್ಲಿ ಎಲ್ಲ ಮರಗಳು ಹಸಿರು ತುಂಬಿರುವಾಗ ಇದೊಂದೇ ಮರ ಬೋಳಾಗಿರುವುದು ಆಶ್ಚರ್ಯವೆನ್ನಿಸಿತು. <br /> <br /> ಅದಕ್ಕಿಂತ ಆಶ್ಚರ್ಯವೆಂದರೆ ಮರ ಮನುಷ್ಯರ ಮಾತನಾಡಿತು, `ಗೆಳೆಯಾ, ನನ್ನ ಬೇರಿಗೆ ಮಾತ್ರ ನೀರು ದೊರಕುತ್ತಿಲ್ಲ, ದಯಮಾಡಿ ಸಹಾಯ ಮಾಡು~ ಎಂದಿತು. ಗುರುಗಳ ಮಾರ್ಗದರ್ಶನದ ಅವಸರದಲ್ಲಿದ್ದ ಮನುಷ್ಯ ಅದರ ಕರೆ ಕೇಳದೆ ಮುಂದೆ ನಡೆದ. <br /> <br /> ಮುಂದೆ ದಾರಿ ಸಾಗಿದಾಗ ಅಲ್ಲೊಂದು ರೈತ ಕುಟುಂಬವನ್ನು ಕಂಡ. ಅವರೆಲ್ಲ ಮರದ ಕೆಳಗೆ ತಲೆಯ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದರು. ಹಿರಿಯ ರೈತ ತನ್ನ ಗೋಳು ಹೇಳಿಕೊಂಡ, `ನನ್ನ ಹೊಲದಲ್ಲಿ ಏನೇನೂ ಬೆಳೆಯುವುದಿಲ್ಲ. ಬರೀ ಕಲ್ಲು ತುಂಬಿದೆ. ನಮ್ಮ ತಂದೆ ಬಿಟ್ಟು ಹೋದ ಜಮೀನಿದು. ಇದನ್ನು ಬಿಟ್ಟರೆ ನಮಗೆ ಬೇರೆ ಗತಿ ಇಲ್ಲ. <br /> <br /> ಹೇಗೆ ಜೀವನ ನಡೆಸುವುದೋ ತೋಚುತ್ತಿಲ್ಲ.~ ಈ ಮನುಷ್ಯನಿಗೆ ತನ್ನ ಚಿಂತೆಯೇ ಬಹಳ ದೊಡ್ಡದಾದ್ದರಿಂದ ಅವರ ತೊಂದರೆಯನ್ನು ಮನಸ್ಸಿನೊಳಗೆ ತರುವ ವಿಚಾರವನ್ನು ಮಾಡದೇ ಗುರುವಿದ್ದ ಊರಿನಡೆಗೆ ನಡೆದ.<br /> <br /> ಕೊನೆಗೂ ಗುರುವನ್ನು ಕಂಡ. ತನ್ನ ಸಮಸ್ಯೆಯನ್ನು ವಿಸ್ತಾರವಾಗಿ ಹೇಳಿಕೊಂಡು ಅತ್ತ. ಪರಿಹಾರವನ್ನೂ ಕೇಳಿದ. ಗುರು ಹೇಳಿದ, `ನಿನ್ನ ಸಮಸ್ಯೆ ವಿಶೇಷವಾದದ್ದೇನಲ್ಲ. ಬಹಳಷ್ಟು ಜನರಲ್ಲಿ ಇರುವುದೇ. ನಿನ್ನ ದೋಷವೆಂದರೆ ಅವಕಾಶಗಳು ಬಾಗಿಲುತಟ್ಟಿದಾಗ ನೀನು ಅವುಗಳಿಗೆ ಸ್ಪಂದಿಸಲಿಲ್ಲ. ಆಮೇಲೆ ಅವಕಾಶಗಳೇ ದೊರೆಯಲಿಲ್ಲ ಎಂದು ಕೊರಗುತ್ತೀ. ಇನ್ನು ಮೇಲೆ ಅವಕಾಶಗಳು ಎಲ್ಲಿಂದಲೋ, ಯಾವ ರೂಪದಿಂದಲೋ ಬಂದರೂ ಅವುಗಳನ್ನು ಛಲದಿಂದ ಸ್ವೀಕರಿಸು, ನಿನಗೆ ಒಳ್ಳೆಯದಾಗುತ್ತದೆ.~ <br /> <br /> ಈ ಮನುಷ್ಯ ದಾರಿಯಲ್ಲಿ ತಾನು ಕಂಡ ಮರ ಮತ್ತು ರೈತನ ಬಗ್ಗೆ ಹೇಳಿದ. ಆಗ ಗುರು ನಕ್ಕು ಹೇಳಿದ, `ರೈತನಿಗೆ ಇರುವುದೂ ನಿನ್ನ ಸಮಸ್ಯೆಯೇ. ಅವನ ಹೊಲ ಇರುವುದೇ ವಜ್ರದ ಗಣಿಗಳ ಮೇಲೆ. ಅವನು ಅಲ್ಲಿ ಧಾನ್ಯವನ್ನು ಬೆಳೆಯುವ ಬದಲು ಗಣಿಗಾರಿಕೆ ಮಾಡಿದರೆ ಶ್ರಿಮಂತನಾಗುತ್ತಾನೆ. <br /> <br /> ಇನ್ನು ಮರದ ವಿಷಯ. ಅದರ ಬೇರುಗಳಿಗೆ ನೀರು ಹರಿದು ಬರುವ ದಾರಿಯಲ್ಲಿ ಹಿಂದೆಂದೋ ದರೋಡೆಕೋರರು ಲೂಟಿ ಮಾಡಿದ ಕಬ್ಬಿಣದ ತಿಜೋರಿಯೊಂದನ್ನು ಹೂತುಬಿಟ್ಟಿದ್ದಾರೆ. ಹೀಗಾಗಿ ಮರದ ಬೇರಿಗೆ ನೀರು ದೊರೆಯುವಂತಿಲ್ಲ. <br /> <br /> ಯಾರಾದರೂ ಅದನ್ನು ಅಗೆದು ತೆಗೆದರೆ ಮರದ ಬೇರಿಗೆ ನೀರು ಸಿಗುವುದರ ಜೊತೆಗೆ ಅವನಿಗೂ ಅಪಾರವಾದ ಐಶ್ವರ್ಯ ದೊರಕುತ್ತದೆ.~<br /> ಮನುಷ್ಯ ಮರಳಿ ಮನೆಗೆ ನಡೆದ. ಅವನಿಗೆ ಅವಸರ. ಅದೃಷ್ಟ ಬಾಗಿಲು ತಟ್ಟಿದಾಗ ತಾನು ಮನೆಯಲ್ಲಿ ಇರಬೇಡವೇ? ದಾರಿಯಲ್ಲಿ ರೈತನಿಗೆ ಹೇಳಿದ, `ನೀನು ಗಣಿಗಾರಿಕೆ ಮಾಡು. ಶ್ರಿಮಂತನಾಗುತ್ತೀ.~ ರೈತ, `ನೀನೇ ಬಂದು ಮಾಡಪ್ಪ, ಎಲ್ಲವನ್ನು ನೀನೇ ತೆಗೆದುಕೊ. ನನಗೆ ವಯಸ್ಸಾಯಿತು. ಹೊಲವನ್ನು ನಿನಗೇ ಬರೆದುಕೊಡುತ್ತೇನೆ~ ಎಂದ. ಇವನಿಗೋ ಮನೆಗೆ ಮರಳಿ ಬರುವ ಅವಸರ.<br /> <br /> ಮರಕ್ಕೂ ಗುರುಗಳು ಹೇಳಿದ ಸಮಾಧಾನ ತಿಳಿಸಿದ. `ನೀನೇ ತಿಜೋರಿ ತೆಗೆದುಬಿಟ್ಟು ಹಣ ತೆಗೆದುಕೊಂಡು ಬಿಡು, ನನಗೂ ಮುಕ್ತಿ ಕೊಡು~ ಎಂದಿತು ಮರ. `ಅಯ್ಯೋ ಅದನ್ನೆಲ್ಲ ಮಾಡುತ್ತ ಕೂಡ್ರುವುದಕ್ಕೆ ಸಮಯವೆಲ್ಲಿದೆ?~ ಮನುಷ್ಯ ಮನೆಗೆ ಓಡಿ ಬಂದ. ಬಾಗಿಲು ಹಾಕಿಕೊಂಡು ಕುಳಿತ, ಅದೃಷ್ಟ ಬಾಗಿಲು ತಟ್ಟಲೆಂದು. ಅದೆಂದೂ ತಟ್ಟಲೇ ಇಲ್ಲ. ಇವನು ಹೀಗೆಯೇ ಕೊರಗುತ್ತ ಉಳಿದ. <br /> <br /> ಎರಡು ಅವಕಾಶಗಳು ತಾನಾಗಿಯೇ ಹುಡುಕುತ್ತ ಬಂದರೂ ಅವುಗಳನ್ನು ಗಮನಿಸದೇ ಬಂದಿರುವ, ಕಾಣದ ಅವಕಾಶಕ್ಕಾಗಿ ಕಾಯುತ್ತ ಕುಳಿತ ಮನುಷ್ಯನ ಕಥೆಯೇ ನಮ್ಮಲ್ಲಿ ಬಹಳಷ್ಟು ಜನರ ಕಥೆಯೂ ಆಗಿದೆ.<br /> <br /> ನಮಗೆ ಅವಕಾಶಗಳು ಬಂದಾಗ ಅವುಗಳನ್ನು ಗಮನಿಸದೇ ಹೋಗುತ್ತೇವೆ, ಅವುಗಳ ಪ್ರಯೋಜನವನ್ನು ಪಡೆಯುವುದಿಲ್ಲ. ಅವಕಾಶಗಳು ಯಾವ ರೂಪದಲ್ಲಿ ಬರುತ್ತವೋ ತಿಳಿಯದು. ಅದಕ್ಕೆ ಮೈಯೆಲ್ಲ ಕಣ್ಣಾಗಿರಬೇಕು. ಬಂದ ಅವಕಾಶಗಳು ಸರಿದು ಹೋದ ಮೇಲೆ ಗೊಣಗಿದರೆ ಪ್ರಯೋಜನವಿಲ್ಲ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಒಬ್ಬ ಮನುಷ್ಯ ನಿರಾಸೆಯ ಮಡುವಿನಲ್ಲಿ ಸಿಕ್ಕಿಬಿದ್ದಿದ್ದ. ತಾನು ಏನು ಮಾಡಿದರೂ ಸರಿಯಾಗುತ್ತಿಲ್ಲ ಎಂದುಕೊಳ್ಳುತ್ತಿದ್ದ. ಆತನ ಸ್ನೇಹಿತನೊಬ್ಬ ಹೇಳಿದ, `ನನಗೂ ಹೀಗೆಯೇ ಆಗುತ್ತಿತ್ತು. ನಾನು ನಮ್ಮ ಊರಿನ ಮಠಕ್ಕೆ ಹೋಗಿ ಗುರುಗಳನ್ನು ಕೇಳಿದೆ. <br /> <br /> ಅವರು ನನಗೆ ಕೆಲವು ಸಲಹೆಗಳನ್ನು ನೀಡಿದರು. ಅವುಗಳನ್ನು ಪಾಲಿಸಿದ ನಂತರ ನನಗೆ ತುಂಬ ಅನುಕೂಲವಾಗಿದೆ.ಈತನೂ ಹೊರಟ ಗುರುಗಳನ್ನು ನೋಡಲು. ದಾರಿಯಲ್ಲಿ ಒಂದು ದೊಡ್ಡ ಮರವನ್ನು ಕಂಡ. ಅದರ ಎಲೆಗಳೆಲ್ಲ ಉದುರಿ ಬೋಳಾಗಿ ನಿಂತಿದೆ. ಈ ಕಾಲದಲ್ಲಿ ಎಲ್ಲ ಮರಗಳು ಹಸಿರು ತುಂಬಿರುವಾಗ ಇದೊಂದೇ ಮರ ಬೋಳಾಗಿರುವುದು ಆಶ್ಚರ್ಯವೆನ್ನಿಸಿತು. <br /> <br /> ಅದಕ್ಕಿಂತ ಆಶ್ಚರ್ಯವೆಂದರೆ ಮರ ಮನುಷ್ಯರ ಮಾತನಾಡಿತು, `ಗೆಳೆಯಾ, ನನ್ನ ಬೇರಿಗೆ ಮಾತ್ರ ನೀರು ದೊರಕುತ್ತಿಲ್ಲ, ದಯಮಾಡಿ ಸಹಾಯ ಮಾಡು~ ಎಂದಿತು. ಗುರುಗಳ ಮಾರ್ಗದರ್ಶನದ ಅವಸರದಲ್ಲಿದ್ದ ಮನುಷ್ಯ ಅದರ ಕರೆ ಕೇಳದೆ ಮುಂದೆ ನಡೆದ. <br /> <br /> ಮುಂದೆ ದಾರಿ ಸಾಗಿದಾಗ ಅಲ್ಲೊಂದು ರೈತ ಕುಟುಂಬವನ್ನು ಕಂಡ. ಅವರೆಲ್ಲ ಮರದ ಕೆಳಗೆ ತಲೆಯ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದರು. ಹಿರಿಯ ರೈತ ತನ್ನ ಗೋಳು ಹೇಳಿಕೊಂಡ, `ನನ್ನ ಹೊಲದಲ್ಲಿ ಏನೇನೂ ಬೆಳೆಯುವುದಿಲ್ಲ. ಬರೀ ಕಲ್ಲು ತುಂಬಿದೆ. ನಮ್ಮ ತಂದೆ ಬಿಟ್ಟು ಹೋದ ಜಮೀನಿದು. ಇದನ್ನು ಬಿಟ್ಟರೆ ನಮಗೆ ಬೇರೆ ಗತಿ ಇಲ್ಲ. <br /> <br /> ಹೇಗೆ ಜೀವನ ನಡೆಸುವುದೋ ತೋಚುತ್ತಿಲ್ಲ.~ ಈ ಮನುಷ್ಯನಿಗೆ ತನ್ನ ಚಿಂತೆಯೇ ಬಹಳ ದೊಡ್ಡದಾದ್ದರಿಂದ ಅವರ ತೊಂದರೆಯನ್ನು ಮನಸ್ಸಿನೊಳಗೆ ತರುವ ವಿಚಾರವನ್ನು ಮಾಡದೇ ಗುರುವಿದ್ದ ಊರಿನಡೆಗೆ ನಡೆದ.<br /> <br /> ಕೊನೆಗೂ ಗುರುವನ್ನು ಕಂಡ. ತನ್ನ ಸಮಸ್ಯೆಯನ್ನು ವಿಸ್ತಾರವಾಗಿ ಹೇಳಿಕೊಂಡು ಅತ್ತ. ಪರಿಹಾರವನ್ನೂ ಕೇಳಿದ. ಗುರು ಹೇಳಿದ, `ನಿನ್ನ ಸಮಸ್ಯೆ ವಿಶೇಷವಾದದ್ದೇನಲ್ಲ. ಬಹಳಷ್ಟು ಜನರಲ್ಲಿ ಇರುವುದೇ. ನಿನ್ನ ದೋಷವೆಂದರೆ ಅವಕಾಶಗಳು ಬಾಗಿಲುತಟ್ಟಿದಾಗ ನೀನು ಅವುಗಳಿಗೆ ಸ್ಪಂದಿಸಲಿಲ್ಲ. ಆಮೇಲೆ ಅವಕಾಶಗಳೇ ದೊರೆಯಲಿಲ್ಲ ಎಂದು ಕೊರಗುತ್ತೀ. ಇನ್ನು ಮೇಲೆ ಅವಕಾಶಗಳು ಎಲ್ಲಿಂದಲೋ, ಯಾವ ರೂಪದಿಂದಲೋ ಬಂದರೂ ಅವುಗಳನ್ನು ಛಲದಿಂದ ಸ್ವೀಕರಿಸು, ನಿನಗೆ ಒಳ್ಳೆಯದಾಗುತ್ತದೆ.~ <br /> <br /> ಈ ಮನುಷ್ಯ ದಾರಿಯಲ್ಲಿ ತಾನು ಕಂಡ ಮರ ಮತ್ತು ರೈತನ ಬಗ್ಗೆ ಹೇಳಿದ. ಆಗ ಗುರು ನಕ್ಕು ಹೇಳಿದ, `ರೈತನಿಗೆ ಇರುವುದೂ ನಿನ್ನ ಸಮಸ್ಯೆಯೇ. ಅವನ ಹೊಲ ಇರುವುದೇ ವಜ್ರದ ಗಣಿಗಳ ಮೇಲೆ. ಅವನು ಅಲ್ಲಿ ಧಾನ್ಯವನ್ನು ಬೆಳೆಯುವ ಬದಲು ಗಣಿಗಾರಿಕೆ ಮಾಡಿದರೆ ಶ್ರಿಮಂತನಾಗುತ್ತಾನೆ. <br /> <br /> ಇನ್ನು ಮರದ ವಿಷಯ. ಅದರ ಬೇರುಗಳಿಗೆ ನೀರು ಹರಿದು ಬರುವ ದಾರಿಯಲ್ಲಿ ಹಿಂದೆಂದೋ ದರೋಡೆಕೋರರು ಲೂಟಿ ಮಾಡಿದ ಕಬ್ಬಿಣದ ತಿಜೋರಿಯೊಂದನ್ನು ಹೂತುಬಿಟ್ಟಿದ್ದಾರೆ. ಹೀಗಾಗಿ ಮರದ ಬೇರಿಗೆ ನೀರು ದೊರೆಯುವಂತಿಲ್ಲ. <br /> <br /> ಯಾರಾದರೂ ಅದನ್ನು ಅಗೆದು ತೆಗೆದರೆ ಮರದ ಬೇರಿಗೆ ನೀರು ಸಿಗುವುದರ ಜೊತೆಗೆ ಅವನಿಗೂ ಅಪಾರವಾದ ಐಶ್ವರ್ಯ ದೊರಕುತ್ತದೆ.~<br /> ಮನುಷ್ಯ ಮರಳಿ ಮನೆಗೆ ನಡೆದ. ಅವನಿಗೆ ಅವಸರ. ಅದೃಷ್ಟ ಬಾಗಿಲು ತಟ್ಟಿದಾಗ ತಾನು ಮನೆಯಲ್ಲಿ ಇರಬೇಡವೇ? ದಾರಿಯಲ್ಲಿ ರೈತನಿಗೆ ಹೇಳಿದ, `ನೀನು ಗಣಿಗಾರಿಕೆ ಮಾಡು. ಶ್ರಿಮಂತನಾಗುತ್ತೀ.~ ರೈತ, `ನೀನೇ ಬಂದು ಮಾಡಪ್ಪ, ಎಲ್ಲವನ್ನು ನೀನೇ ತೆಗೆದುಕೊ. ನನಗೆ ವಯಸ್ಸಾಯಿತು. ಹೊಲವನ್ನು ನಿನಗೇ ಬರೆದುಕೊಡುತ್ತೇನೆ~ ಎಂದ. ಇವನಿಗೋ ಮನೆಗೆ ಮರಳಿ ಬರುವ ಅವಸರ.<br /> <br /> ಮರಕ್ಕೂ ಗುರುಗಳು ಹೇಳಿದ ಸಮಾಧಾನ ತಿಳಿಸಿದ. `ನೀನೇ ತಿಜೋರಿ ತೆಗೆದುಬಿಟ್ಟು ಹಣ ತೆಗೆದುಕೊಂಡು ಬಿಡು, ನನಗೂ ಮುಕ್ತಿ ಕೊಡು~ ಎಂದಿತು ಮರ. `ಅಯ್ಯೋ ಅದನ್ನೆಲ್ಲ ಮಾಡುತ್ತ ಕೂಡ್ರುವುದಕ್ಕೆ ಸಮಯವೆಲ್ಲಿದೆ?~ ಮನುಷ್ಯ ಮನೆಗೆ ಓಡಿ ಬಂದ. ಬಾಗಿಲು ಹಾಕಿಕೊಂಡು ಕುಳಿತ, ಅದೃಷ್ಟ ಬಾಗಿಲು ತಟ್ಟಲೆಂದು. ಅದೆಂದೂ ತಟ್ಟಲೇ ಇಲ್ಲ. ಇವನು ಹೀಗೆಯೇ ಕೊರಗುತ್ತ ಉಳಿದ. <br /> <br /> ಎರಡು ಅವಕಾಶಗಳು ತಾನಾಗಿಯೇ ಹುಡುಕುತ್ತ ಬಂದರೂ ಅವುಗಳನ್ನು ಗಮನಿಸದೇ ಬಂದಿರುವ, ಕಾಣದ ಅವಕಾಶಕ್ಕಾಗಿ ಕಾಯುತ್ತ ಕುಳಿತ ಮನುಷ್ಯನ ಕಥೆಯೇ ನಮ್ಮಲ್ಲಿ ಬಹಳಷ್ಟು ಜನರ ಕಥೆಯೂ ಆಗಿದೆ.<br /> <br /> ನಮಗೆ ಅವಕಾಶಗಳು ಬಂದಾಗ ಅವುಗಳನ್ನು ಗಮನಿಸದೇ ಹೋಗುತ್ತೇವೆ, ಅವುಗಳ ಪ್ರಯೋಜನವನ್ನು ಪಡೆಯುವುದಿಲ್ಲ. ಅವಕಾಶಗಳು ಯಾವ ರೂಪದಲ್ಲಿ ಬರುತ್ತವೋ ತಿಳಿಯದು. ಅದಕ್ಕೆ ಮೈಯೆಲ್ಲ ಕಣ್ಣಾಗಿರಬೇಕು. ಬಂದ ಅವಕಾಶಗಳು ಸರಿದು ಹೋದ ಮೇಲೆ ಗೊಣಗಿದರೆ ಪ್ರಯೋಜನವಿಲ್ಲ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>