‘ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಅಕ್ರಮ ಗಣಿಗಾರಿಕೆಯ ಪರಿಶೀಲನೆಗೆ ನಾನು ಸಂಡೂರಿನರಾಮಗಡಕ್ಕೆ ಬಂದಾಗ, ಬಿಜೆಪಿಯವರು ಗೂಂಡಾಗಳನ್ನು ಕಳಿಸಿದ್ದರು. ಆ ವ್ಯವಸ್ಥೆಯನ್ನು ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ರಿಪಬ್ಲಿಕ್ ಆಫ್ ಬಳ್ಳಾರಿ ಎಂದುಕರೆದಿದ್ದರು...’ ಹೀಗೆ ಸಿದ್ದರಾಮಯ್ಯ ತಮ್ಮದೇ ಲಹರಿಯಲ್ಲಿ ಮಾತನ್ನು ಮಥಿಸುತ್ತಿದ್ದರು. ಅವರ ಮಾತಿನ ನಡುವೆಯೇ ಸಂಡೂರು ಶಾಸಕ ಈ. ತುಕಾರಾಂ ಅವರ ಬೆಂಬಲಿಗರು, ‘ನಮ್ಮ ಶಾಸಕರಿಗೆ ಸಚಿವ ಸ್ಥಾನ ಕೊಡಿ. ಜಿಲ್ಲಾ ಉಸ್ತುವಾರಿಯ ಹೊಣೆ ಕೊಡಿ’ ಎಂದು ಕೂಗಿದರು.