‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂಬುದು ನನ್ನ ಮಹದಾಸೆ. ನನ್ನ ಅಮ್ಮನನ್ನೂ ಮಕ್ಕಳನ್ನೂ ಒಪ್ಪಿಸಿದೆ. ಆದರೆ, ಹೆಂಡತಿಯನ್ನು ಒಪ್ಪಿಸಲು ಸಾಧ್ಯವಾಗಲಿಲ್ಲ. ಸರ್ಕಾರಿ ಶಾಲೆಯ ಮಾತೆತ್ತಿದರೆ ಡೈವೋರ್ಸ್ ಕೊಡುತ್ತೇನೆಂದು ಕಡ್ಡಿಮುರಿದಂತೆ ಹೇಳಿದಳು. ಇದರಿಂದ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ’ ಎಂದಾಗ ಪತ್ರಿಕಾಗೋಷ್ಠಿಯಲ್ಲಿ ನಗೆಯ ಬುಗ್ಗೆ ಉಕ್ಕಿತು.