ಸನ್ನಿವೇಶ ತುಸು ಗಂಭೀರವಾಗುತ್ತಿರುವುದನ್ನು ವಿಜಯಪುರ ಜಿಲ್ಲಾಧಿಕಾರಿ ಸಂಜಯ ಬಿ. ಶೆಟ್ಟೆಣ್ಣವರ ಬಹು ಬೇಗನೆ ಗ್ರಹಿಸಿದರು. ಕೃಷಿ ಇಲಾಖೆ ಅಧಿಕಾರಿಗಳನ್ನು ಮಧ್ಯದಲ್ಲೇ ತಡೆದು, ‘ನಂಗೂ ನಿಮ್ ಇಂಗ್ಲಿಷ್ ಗೊತ್ತಾಗಲಿಲ್ರೀ. ಕನ್ನಡದಲ್ಲೇ ಮಾತನಾಡಿ’ ಎಂದು ನಗೆ ಚಟಾಕಿಯೊಂದನ್ನು ಹಾರಿಸಿದರು. ಈ ಮಾತನ್ನು ಕೇಳಿ ನೆರೆದಿದ್ದ ರೈತರು ಮಾತ್ರವಲ್ಲ ಕೇಂದ್ರದ ಅಧಿಕಾರಿಗಳು ಸಹ ನಗೆಗಡಲ್ಲಿ ತೇಲಿದರು. ರೈತರ ಸಿಟ್ಟೂ ತಣ್ಣಗಾಯಿತು.