ಬೆಂಗಳೂರು, ಸೆ. 1– ಹಿಂದುಳಿದ ವರ್ಗದವರ ಮೀಸಲಾತಿಗೆ ಸಂಬಂಧಿಸಿದ 1986ರ ಆದೇಶಕ್ಕೆ ಅನುಗುಣವಾಗಿಯೇ ವೃತ್ತಿ ಶಿಕ್ಷಣದಲ್ಲಿ ಮೀಸಲು ಒದಗಿಸುವ ನಿಲುವಿಗೆ ಸರ್ಕಾರ ಬದ್ಧವಾಗಿದ್ದು, ಸುಪ್ರೀಂ ಕೋರ್ಟ್ ತಡೆ ನೀಡಿರುವ ಹತ್ತು ದಿನಗಳ ಅವಧಿ ಮುಗಿದ ಮರುದಿನದಿಂದಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಇಂದು ವಿಧಾನಸಭೆಯಲ್ಲಿ ಭರವಸೆ ನೀಡಿದರು.