ಬೆಂಗಳೂರು, ಜುಲೈ 16– ‘ನನಗೆ ಗೊತ್ತಿರುವಂತೆ ಹಾಗೂ ಗೊತ್ತಿಲ್ಲದಂತೆಯೂ ಯಾವುದೇ ರಾಜಕಾರಣಿಗಳ ಹಾಗೂ ಸುದ್ದಿಗಾರರ ದೂರವಾಣಿಯನ್ನು ಕದ್ದಾಲಿಸಲು ರಾಜ್ಯ ಸರ್ಕಾರ ಕೋರಿಲ್ಲ. ನಾನು ಈ ಸ್ಥಾನದಲ್ಲಿ ಇರುವವರೆಗೂ ಜನತಂತ್ರ ವ್ಯವಸ್ಥೆಗೆ ಮಾರಕವಾದ ಅಂತಹ ಕೃತ್ಯಕ್ಕೆ ಅವಕಾಶ ಕೊಡಲಾರೆ’ ಎಂದು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಇಂದು ಇಲ್ಲಿ ಹೇಳಿದರು.