<p><strong>ವಿಶ್ವ ಹಿಂದೂ ಪರಿಷತ್ ಮೇಲೆ ಮತ್ತೆ ನಿಷೇಧ</strong></p>.<p>ನವದೆಹಲಿ, ಜ. 14 (ಯುಎನ್ಐ, ಪಿಟಿಐ)– ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಅನ್ನು ಇನ್ನೂ ಎರಡು ವರ್ಷಗಳ ಕಾಲ ನಿಷೇಧಿಸಿ ಕೇಂದ್ರ ಸರ್ಕಾರವು ಇಂದು ಆಜ್ಞೆ ಹೊರಡಿಸಿತು. ನಿಷೇಧ ತಕ್ಷಣದಿಂದ ಜಾರಿಗೆ ಬಂದಿದೆ.</p>.<p>1967ರ ಕಾನೂನು ಬಾಹಿರ ಕಾಯ್ದೆ ಅನ್ವಯ ವಿಎಚ್ಪಿ ಮೇಲೆ ಈ ನಿಷೇಧ ಹೇರಲಾಗಿದೆ. 1992ರಲ್ಲಿ ಅಯೋಧ್ಯೆಯ ವಿವಾದಾತ್ಮಕ ಬಾಬರಿ ಮಸೀದಿ ನೆಲಸಮಗೊಂಡ ಹಿನ್ನೆಲೆಯಲ್ಲಿ ಕಾನೂನುಬಾಹಿರ ಸಂಘಟನೆ ಎಂದು ವಿಎಚ್ಪಿ ಮೇಲೆ ಹೇರಿದ್ದ ನಿಷೇಧದ ಅವಧಿ 1994ರ ಡಿ. 9ರಂದು ಮುಗಿದಿತ್ತು.</p>.<p>ವಿಶ್ವ ಹಿಂದೂ ಪರಿಷತ್ತಿನ ಚಟುವಟಿಕೆಯನ್ನು ತಕ್ಷಣವೇ ಹತ್ತಿಕ್ಕದಿದ್ದರೆ ಕೋಮು ವಿದ್ವೇಷ ಹಾಗೂ ಉದ್ವಿಗ್ನತೆ ಉಂಟಾಗಬಹುದು ಎಂಬ ಕಾರಣಕ್ಕಾಗಿ ನಿಷೇಧವನ್ನು ಮತ್ತೆ ಹೇರಲಾಯಿತು ಎಂದು ಅಧಿಸೂಚನೆ ತಿಳಿಸಿದೆ.</p>.<p><strong>ಅಕ್ರಮ ಕಟ್ಟಡಗಳ ಸಕ್ರಮ</strong></p>.<p>ಬೆಂಗಳೂರು, ಜ. 14– ಬೆಂಗಳೂರಿನ ನಾಗರಿಕರಿಗೆ ಹೊಸ ವರ್ಷದ ಕೊಡುಗೆಯಾಗಿ ನಗರದ ಹತ್ತು ಅಧಿಸೂಚಿತ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೆವಿನ್ಯೂ ನಿವೇಶನ<br />ಗಳಲ್ಲಿ ಕಟ್ಟಿದ ಎಲ್ಲ ಅನಧಿಕೃತ ಕಟ್ಟಡ ಗಳನ್ನು ಬರುವ ಡಿಸೆಂಬರ್ ಒಳಗೆ ಸಕ್ರಮ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಇಂದು ಇಲ್ಲಿ ಪ್ರಕಟಿಸಿದರು.</p>.<p>ಆಡಳಿತಕ್ಕೆ ಚುರುಕು ನೀಡಿ, ಜನಪರಗೊಳಿಸುವ ತಮ್ಮ ವಾಗ್ದಾನದಂತೆ ಇಂದು ಬೆಳಿಗ್ಗೆ ಬೆಂಗಳೂರಿನ ಕೆಲವು ಪ್ರದೇಶಗಳಿಗೆ ಹಠಾತ್ ಭೇಟಿ ನೀಡಿ ಕುಡಿಯುವ ನೀರು, ನೈರ್ಮಲ್ಯ ಪಾಲನೆ ಸ್ಥಿತಿಯನ್ನು ಸ್ವತಃ ವೀಕ್ಷಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.</p>.<p><strong>ಕಾರ್ಯಪ್ಪ ಸ್ಮಾರಕ ಅಂಚೆ ಚೀಟಿ</strong></p>.<p>ನವದೆಹಲಿ, ಜ. 14 (ಪಿಟಿಐ)– ಅಂಚೆ ಇಲಾಖೆಯು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಸ್ಮರಣಾರ್ಥ ಎರಡು ರೂಪಾಯಿ ಮುಖಬೆಲೆಯ ವಿಶೇಷ ಅಂಚೆ ಚೀಟಿಯನ್ನು ನಾಳೆ ಬಿಡುಗಡೆ ಮಾಡುವುದು.</p>.<p><strong>ಫೂಲನ್ ದೇವಿಯಿಂದ‘ಏಕಲವ್ಯ ಸೇನೆ’ ರಚನೆ</strong></p>.<p>ನವದೆಹಲಿ, ಜ. 14 (ಪಿಟಿಐ)– ಮಾಜಿ ಡಕಾಯಿತ ರಾಣಿ ಫೂಲನ್ ದೇವಿ ಹಾಗೂ ಸಂಸತ್ತಿನ ಮಾಜಿ ಸದಸ್ಯರೊಬ್ಬರು ಜಂಟಿಯಾಗಿ ‘ಏಕಲವ್ಯ ಸೇನೆ’ ಎಂಬ ಸಂಘಟನೆಯನ್ನು ರಚಿಸಿದ್ದಾರೆ.</p>.<p>‘ಶೋಷಣೆಯ ವಿರುದ್ಧ ಹೋರಾಡಲು ಸೇನೆಯ ಸದಸ್ಯರಿಗೆ ಬಿಲ್ಲು–ಬಾಣ<br />ಪ್ರಯೋಗ ಕಲಿಸಲಾಗುವುದು. ಮಹಾಭಾರತದ ಬಿಲ್ಲು ಪ್ರವೀಣ ಏಕಲವ್ಯನ ಯಶೋಗಾಥೆಯೇ ನಮಗೆ ನೀತಿಪಾಠ’ ಎಂದು ಮಾಜಿ ಸಂಸದ ಗಂಗಾಚರಣ್ ರಜಪೂತ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವ ಹಿಂದೂ ಪರಿಷತ್ ಮೇಲೆ ಮತ್ತೆ ನಿಷೇಧ</strong></p>.<p>ನವದೆಹಲಿ, ಜ. 14 (ಯುಎನ್ಐ, ಪಿಟಿಐ)– ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಅನ್ನು ಇನ್ನೂ ಎರಡು ವರ್ಷಗಳ ಕಾಲ ನಿಷೇಧಿಸಿ ಕೇಂದ್ರ ಸರ್ಕಾರವು ಇಂದು ಆಜ್ಞೆ ಹೊರಡಿಸಿತು. ನಿಷೇಧ ತಕ್ಷಣದಿಂದ ಜಾರಿಗೆ ಬಂದಿದೆ.</p>.<p>1967ರ ಕಾನೂನು ಬಾಹಿರ ಕಾಯ್ದೆ ಅನ್ವಯ ವಿಎಚ್ಪಿ ಮೇಲೆ ಈ ನಿಷೇಧ ಹೇರಲಾಗಿದೆ. 1992ರಲ್ಲಿ ಅಯೋಧ್ಯೆಯ ವಿವಾದಾತ್ಮಕ ಬಾಬರಿ ಮಸೀದಿ ನೆಲಸಮಗೊಂಡ ಹಿನ್ನೆಲೆಯಲ್ಲಿ ಕಾನೂನುಬಾಹಿರ ಸಂಘಟನೆ ಎಂದು ವಿಎಚ್ಪಿ ಮೇಲೆ ಹೇರಿದ್ದ ನಿಷೇಧದ ಅವಧಿ 1994ರ ಡಿ. 9ರಂದು ಮುಗಿದಿತ್ತು.</p>.<p>ವಿಶ್ವ ಹಿಂದೂ ಪರಿಷತ್ತಿನ ಚಟುವಟಿಕೆಯನ್ನು ತಕ್ಷಣವೇ ಹತ್ತಿಕ್ಕದಿದ್ದರೆ ಕೋಮು ವಿದ್ವೇಷ ಹಾಗೂ ಉದ್ವಿಗ್ನತೆ ಉಂಟಾಗಬಹುದು ಎಂಬ ಕಾರಣಕ್ಕಾಗಿ ನಿಷೇಧವನ್ನು ಮತ್ತೆ ಹೇರಲಾಯಿತು ಎಂದು ಅಧಿಸೂಚನೆ ತಿಳಿಸಿದೆ.</p>.<p><strong>ಅಕ್ರಮ ಕಟ್ಟಡಗಳ ಸಕ್ರಮ</strong></p>.<p>ಬೆಂಗಳೂರು, ಜ. 14– ಬೆಂಗಳೂರಿನ ನಾಗರಿಕರಿಗೆ ಹೊಸ ವರ್ಷದ ಕೊಡುಗೆಯಾಗಿ ನಗರದ ಹತ್ತು ಅಧಿಸೂಚಿತ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೆವಿನ್ಯೂ ನಿವೇಶನ<br />ಗಳಲ್ಲಿ ಕಟ್ಟಿದ ಎಲ್ಲ ಅನಧಿಕೃತ ಕಟ್ಟಡ ಗಳನ್ನು ಬರುವ ಡಿಸೆಂಬರ್ ಒಳಗೆ ಸಕ್ರಮ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಇಂದು ಇಲ್ಲಿ ಪ್ರಕಟಿಸಿದರು.</p>.<p>ಆಡಳಿತಕ್ಕೆ ಚುರುಕು ನೀಡಿ, ಜನಪರಗೊಳಿಸುವ ತಮ್ಮ ವಾಗ್ದಾನದಂತೆ ಇಂದು ಬೆಳಿಗ್ಗೆ ಬೆಂಗಳೂರಿನ ಕೆಲವು ಪ್ರದೇಶಗಳಿಗೆ ಹಠಾತ್ ಭೇಟಿ ನೀಡಿ ಕುಡಿಯುವ ನೀರು, ನೈರ್ಮಲ್ಯ ಪಾಲನೆ ಸ್ಥಿತಿಯನ್ನು ಸ್ವತಃ ವೀಕ್ಷಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.</p>.<p><strong>ಕಾರ್ಯಪ್ಪ ಸ್ಮಾರಕ ಅಂಚೆ ಚೀಟಿ</strong></p>.<p>ನವದೆಹಲಿ, ಜ. 14 (ಪಿಟಿಐ)– ಅಂಚೆ ಇಲಾಖೆಯು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಸ್ಮರಣಾರ್ಥ ಎರಡು ರೂಪಾಯಿ ಮುಖಬೆಲೆಯ ವಿಶೇಷ ಅಂಚೆ ಚೀಟಿಯನ್ನು ನಾಳೆ ಬಿಡುಗಡೆ ಮಾಡುವುದು.</p>.<p><strong>ಫೂಲನ್ ದೇವಿಯಿಂದ‘ಏಕಲವ್ಯ ಸೇನೆ’ ರಚನೆ</strong></p>.<p>ನವದೆಹಲಿ, ಜ. 14 (ಪಿಟಿಐ)– ಮಾಜಿ ಡಕಾಯಿತ ರಾಣಿ ಫೂಲನ್ ದೇವಿ ಹಾಗೂ ಸಂಸತ್ತಿನ ಮಾಜಿ ಸದಸ್ಯರೊಬ್ಬರು ಜಂಟಿಯಾಗಿ ‘ಏಕಲವ್ಯ ಸೇನೆ’ ಎಂಬ ಸಂಘಟನೆಯನ್ನು ರಚಿಸಿದ್ದಾರೆ.</p>.<p>‘ಶೋಷಣೆಯ ವಿರುದ್ಧ ಹೋರಾಡಲು ಸೇನೆಯ ಸದಸ್ಯರಿಗೆ ಬಿಲ್ಲು–ಬಾಣ<br />ಪ್ರಯೋಗ ಕಲಿಸಲಾಗುವುದು. ಮಹಾಭಾರತದ ಬಿಲ್ಲು ಪ್ರವೀಣ ಏಕಲವ್ಯನ ಯಶೋಗಾಥೆಯೇ ನಮಗೆ ನೀತಿಪಾಠ’ ಎಂದು ಮಾಜಿ ಸಂಸದ ಗಂಗಾಚರಣ್ ರಜಪೂತ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>