ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರು ಉತ್ತರ ಆರಂಭಿಸುವ ಹಂತದಲ್ಲಿದ್ದರು. ಆಗ ಶಾಸಕರ ಹಕ್ಕುಗಳ ಬಗೆಗೆ ನಿರ್ಧಾರ ಪ್ರಕಟಿಸಿ ನಂತರ ಉತ್ತರಿಸುವಂತೆ ಬಂದ ಒತ್ತಾಯ ನಿರಾಕರಿಸಿದಾಗ ಬಿಜೆಪಿ, ಕಾಂಗ್ರೆಸ್, ಕನ್ನಡ ಚಳವಳಿ, ಸಿಪಿಎಂ, ಇಂಡಿಯನ್ ನ್ಯಾಷನಲ್ ಮುಸ್ಲಿಂ ಲೀಗ್ ಮತ್ತು ಬಿಎಸ್ಪಿ ಸದಸ್ಯರು ಧರಣಿ ಆರಂಭಿಸಿದರು.