<p><strong>ಜಟಿಲ ಸಂದರ್ಭದಲ್ಲಿ ‘ಜನಮುಖಿ’ ಕಾವ್ಯ: ಕಂಬಾರ</strong></p>.<p><strong>ಬೆಂಗಳೂರು, ಮೇ 3</strong>– ಕಾವ್ಯ ಪ್ರಯೋಜನದ ಬಗೆಗಿನ ಸಮಸ್ಯೆಗಳು ಜಟಿಲವಾಗತೊಡಗಿರುವ ಈ ಸಂದರ್ಭದಲ್ಲಿ ಕಾವ್ಯ ‘ಜನಮುಖಿ’ಯಾಗದೆ ಬೇರೆ ದಾರಿಯಿಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹಾಗೂ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಇಂದು ಇಲ್ಲಿ ಅಭಿಪ್ರಾಯಪಟ್ಟರು.</p>.<p>ಕಾವ್ಯ ಪ್ರಯೋಜನವಾಗಬೇಕಾದದ್ದು ಜನರಿಗೆ. ಕವಿ ತನ್ನ ಆತ್ಮಚರಿತ್ರೆಯನ್ನೇ ಮೂಡಿಸಲಿ, ಲೋಕದ ಚರಿತ್ರೆಯನ್ನೇ ಕುರಿತು ಬರೆಯಲಿ, ಜನರಿಗೆ ಅದರಲ್ಲಿ ಆಸಕ್ತಿ ಮೂಡುವುದು ಅಗತ್ಯವಾಗಿದೆ. ಕವಿಯ ಪ್ರತಿಭೆಗೆ ಇದೊಂದು ದೊಡ್ಡ ಸವಾಲಾಗಿದೆ ಎಂದರು.</p>.<p>ಕನ್ನಡ ಸಾಹಿತ್ಯ ಪರಿಷತ್ತಿಗೆ 80 ವರ್ಷ ತುಂಬುತ್ತಿರುವುದರ ಸ್ಮರಣಾರ್ಥ ಹಮ್ಮಿಕೊಂಡಿರುವ ‘ಇಪ್ಪತ್ತನೆಯ ಶತಮಾನದ ಕನ್ನಡ ಕಾವ್ಯ: ಒಂದು ಸಮೀಕ್ಷೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.</p>.<p><strong>ನಿಶ್ಶಸ್ತ್ರೀಕರಣ: ದೆಹಲಿ ಘೋಷಣೆ ಕರೆ ಸಂಭವ</strong></p>.<p><strong>ನವದೆಹಲಿ, ಮೇ 3 (ಪಿಟಿಐ, ಯುಎನ್ಐ)</strong>– ಎಂಟನೇ ಸಾರ್ಕ್ ಶೃಂಗಮೇಳ ನಾಳೆ ಮುಕ್ತಾಯಗೊಳ್ಳಲಿದ್ದು,<br />ಅಂತರರಾಷ್ಟ್ರೀಯ ಒಡಂಬಡಿಕೆಯ ಅಡಿಯಲ್ಲಿ ಸಂಪೂರ್ಣ ನಿಶ್ಶಸ್ತ್ರೀಕರಣ ಏರ್ಪಡಬೇಕು ಎಂಬ ಘೋಷಣೆಯನ್ನು ಅದು ಅಂಗೀಕರಿಸಲಿದೆ. ವಾಣಿಜ್ಯೇತರ ವಿಷಯಗಳಿಗೆ ಸಂಬಂಧಿಸಿ ಹೊಸ ಆರ್ಥಿಕ ಷರತ್ತುಗಳನ್ನು ಹೇರಬಾರದು ಎಂದೂ ಅದು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಗೆ ಕರೆ ನೀಡಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಟಿಲ ಸಂದರ್ಭದಲ್ಲಿ ‘ಜನಮುಖಿ’ ಕಾವ್ಯ: ಕಂಬಾರ</strong></p>.<p><strong>ಬೆಂಗಳೂರು, ಮೇ 3</strong>– ಕಾವ್ಯ ಪ್ರಯೋಜನದ ಬಗೆಗಿನ ಸಮಸ್ಯೆಗಳು ಜಟಿಲವಾಗತೊಡಗಿರುವ ಈ ಸಂದರ್ಭದಲ್ಲಿ ಕಾವ್ಯ ‘ಜನಮುಖಿ’ಯಾಗದೆ ಬೇರೆ ದಾರಿಯಿಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹಾಗೂ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಇಂದು ಇಲ್ಲಿ ಅಭಿಪ್ರಾಯಪಟ್ಟರು.</p>.<p>ಕಾವ್ಯ ಪ್ರಯೋಜನವಾಗಬೇಕಾದದ್ದು ಜನರಿಗೆ. ಕವಿ ತನ್ನ ಆತ್ಮಚರಿತ್ರೆಯನ್ನೇ ಮೂಡಿಸಲಿ, ಲೋಕದ ಚರಿತ್ರೆಯನ್ನೇ ಕುರಿತು ಬರೆಯಲಿ, ಜನರಿಗೆ ಅದರಲ್ಲಿ ಆಸಕ್ತಿ ಮೂಡುವುದು ಅಗತ್ಯವಾಗಿದೆ. ಕವಿಯ ಪ್ರತಿಭೆಗೆ ಇದೊಂದು ದೊಡ್ಡ ಸವಾಲಾಗಿದೆ ಎಂದರು.</p>.<p>ಕನ್ನಡ ಸಾಹಿತ್ಯ ಪರಿಷತ್ತಿಗೆ 80 ವರ್ಷ ತುಂಬುತ್ತಿರುವುದರ ಸ್ಮರಣಾರ್ಥ ಹಮ್ಮಿಕೊಂಡಿರುವ ‘ಇಪ್ಪತ್ತನೆಯ ಶತಮಾನದ ಕನ್ನಡ ಕಾವ್ಯ: ಒಂದು ಸಮೀಕ್ಷೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.</p>.<p><strong>ನಿಶ್ಶಸ್ತ್ರೀಕರಣ: ದೆಹಲಿ ಘೋಷಣೆ ಕರೆ ಸಂಭವ</strong></p>.<p><strong>ನವದೆಹಲಿ, ಮೇ 3 (ಪಿಟಿಐ, ಯುಎನ್ಐ)</strong>– ಎಂಟನೇ ಸಾರ್ಕ್ ಶೃಂಗಮೇಳ ನಾಳೆ ಮುಕ್ತಾಯಗೊಳ್ಳಲಿದ್ದು,<br />ಅಂತರರಾಷ್ಟ್ರೀಯ ಒಡಂಬಡಿಕೆಯ ಅಡಿಯಲ್ಲಿ ಸಂಪೂರ್ಣ ನಿಶ್ಶಸ್ತ್ರೀಕರಣ ಏರ್ಪಡಬೇಕು ಎಂಬ ಘೋಷಣೆಯನ್ನು ಅದು ಅಂಗೀಕರಿಸಲಿದೆ. ವಾಣಿಜ್ಯೇತರ ವಿಷಯಗಳಿಗೆ ಸಂಬಂಧಿಸಿ ಹೊಸ ಆರ್ಥಿಕ ಷರತ್ತುಗಳನ್ನು ಹೇರಬಾರದು ಎಂದೂ ಅದು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಗೆ ಕರೆ ನೀಡಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>