<p><strong>ಕರ್ನಾಟಕ ಕಾಂಗ್ರೆಸ್ ಪಕ್ಷದ ಐವರು ಶಾಸಕರು ದಳಕ್ಕೆ</strong></p>.<p>ಬೆಂಗಳೂರು, ಮೇ 20– ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಪಕ್ಷದ ಐವರು ವಿಧಾನಸಭಾ ಸದಸ್ಯರು ಇಂದು ಇಲ್ಲಿ ಆಡಳಿತ ಪಕ್ಷವಾದ ಜನತಾದಳ ಸೇರಿದರು.</p>.<p>ಜನತಾದಳ ಶಾಸಕಾಂಗ ಪಕ್ಷದ ಕಾರ್ಯದರ್ಶಿ ವಿ.ಸೋಮಣ್ಣ ಈ ವಿಷಯವನ್ನು ಪ್ರಕಟಿಸಿದ್ದಾರೆ.</p>.<p>ಮಾಲೀಕಯ್ಯ ಗುತ್ತೇದಾರ್ (ಅಫ್ಜಲಪುರ), ಸುಭಾಷ್ ಗುತ್ತೇದಾರ್ (ಆಳಂದ್), ಬಸವಯ್ಯ (ಚಿಕ್ಕನಾಯ್ಕನ<br />ಹಳ್ಳಿ), ರಾಜ ವೆಂಕಟಪ್ಪ ನಾಯಕ (ಸುರಪುರ) ಹಾಗೂ ವಸಂತ ಅಸ್ನೋಟಿಕರ (ಕಾರವಾರ) ಕೆಸಿಪಿಯನ್ನು ತೊರೆದು ದಳ ಸೇರಿದ ಶಾಸಕರಾಗಿದ್ದಾರೆ.</p>.<p><strong>ಕನ್ನಡಿಗರು– ಒಂದೆರಡು ದಿನದಲ್ಲಿ ಸ್ಪಷ್ಟನೆ</strong></p>.<p>ಬೆಂಗಳೂರು, ಮೇ 20– ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿ ಶಿಕ್ಷಣ ಕೋರ್ಸ್ಗಳ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕೂರಬಯಸುವ ವಿದ್ಯಾರ್ಥಿಗಳ ಅರ್ಹತೆ ವಿಚಾರದಲ್ಲಿ ಎದ್ದಿರುವ ‘ಕನ್ನಡಿಗರು ಮತ್ತು ಕರ್ನಾಟಕದವರು’ ಎನ್ನುವ ವಿವಾದವನ್ನು ಇನ್ನು ಒಂದೆರಡು ದಿನಗಳಲ್ಲಿಯೇ ಇತ್ಯರ್ಥಗೊಳಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಇಂದು ಆಶ್ವಾಸನೆ ನೀಡಿದರು.</p>.<p>ಹತ್ತು ವರ್ಷದಿಂದ ಕರ್ನಾಟಕದಲ್ಲಿ ನೆಲೆಸಿರುವವರೆಲ್ಲರೂ ಕನ್ನಡಿಗರೇ ಎಂಬ ತತ್ವವನ್ನು ಸರ್ಕಾರ ಒಪ್ಪಿಕೊಂಡಿರುವಾಗ ಗೊಂದಲಕ್ಕೆ ಕಾರಣವೇ ಇಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕರ್ನಾಟಕ ಕಾಂಗ್ರೆಸ್ ಪಕ್ಷದ ಐವರು ಶಾಸಕರು ದಳಕ್ಕೆ</strong></p>.<p>ಬೆಂಗಳೂರು, ಮೇ 20– ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಪಕ್ಷದ ಐವರು ವಿಧಾನಸಭಾ ಸದಸ್ಯರು ಇಂದು ಇಲ್ಲಿ ಆಡಳಿತ ಪಕ್ಷವಾದ ಜನತಾದಳ ಸೇರಿದರು.</p>.<p>ಜನತಾದಳ ಶಾಸಕಾಂಗ ಪಕ್ಷದ ಕಾರ್ಯದರ್ಶಿ ವಿ.ಸೋಮಣ್ಣ ಈ ವಿಷಯವನ್ನು ಪ್ರಕಟಿಸಿದ್ದಾರೆ.</p>.<p>ಮಾಲೀಕಯ್ಯ ಗುತ್ತೇದಾರ್ (ಅಫ್ಜಲಪುರ), ಸುಭಾಷ್ ಗುತ್ತೇದಾರ್ (ಆಳಂದ್), ಬಸವಯ್ಯ (ಚಿಕ್ಕನಾಯ್ಕನ<br />ಹಳ್ಳಿ), ರಾಜ ವೆಂಕಟಪ್ಪ ನಾಯಕ (ಸುರಪುರ) ಹಾಗೂ ವಸಂತ ಅಸ್ನೋಟಿಕರ (ಕಾರವಾರ) ಕೆಸಿಪಿಯನ್ನು ತೊರೆದು ದಳ ಸೇರಿದ ಶಾಸಕರಾಗಿದ್ದಾರೆ.</p>.<p><strong>ಕನ್ನಡಿಗರು– ಒಂದೆರಡು ದಿನದಲ್ಲಿ ಸ್ಪಷ್ಟನೆ</strong></p>.<p>ಬೆಂಗಳೂರು, ಮೇ 20– ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿ ಶಿಕ್ಷಣ ಕೋರ್ಸ್ಗಳ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕೂರಬಯಸುವ ವಿದ್ಯಾರ್ಥಿಗಳ ಅರ್ಹತೆ ವಿಚಾರದಲ್ಲಿ ಎದ್ದಿರುವ ‘ಕನ್ನಡಿಗರು ಮತ್ತು ಕರ್ನಾಟಕದವರು’ ಎನ್ನುವ ವಿವಾದವನ್ನು ಇನ್ನು ಒಂದೆರಡು ದಿನಗಳಲ್ಲಿಯೇ ಇತ್ಯರ್ಥಗೊಳಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಇಂದು ಆಶ್ವಾಸನೆ ನೀಡಿದರು.</p>.<p>ಹತ್ತು ವರ್ಷದಿಂದ ಕರ್ನಾಟಕದಲ್ಲಿ ನೆಲೆಸಿರುವವರೆಲ್ಲರೂ ಕನ್ನಡಿಗರೇ ಎಂಬ ತತ್ವವನ್ನು ಸರ್ಕಾರ ಒಪ್ಪಿಕೊಂಡಿರುವಾಗ ಗೊಂದಲಕ್ಕೆ ಕಾರಣವೇ ಇಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>