ಬೆಂಗಳೂರು, ಮೇ 20– ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿ ಶಿಕ್ಷಣ ಕೋರ್ಸ್ಗಳ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕೂರಬಯಸುವ ವಿದ್ಯಾರ್ಥಿಗಳ ಅರ್ಹತೆ ವಿಚಾರದಲ್ಲಿ ಎದ್ದಿರುವ ‘ಕನ್ನಡಿಗರು ಮತ್ತು ಕರ್ನಾಟಕದವರು’ ಎನ್ನುವ ವಿವಾದವನ್ನು ಇನ್ನು ಒಂದೆರಡು ದಿನಗಳಲ್ಲಿಯೇ ಇತ್ಯರ್ಥಗೊಳಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಇಂದು ಆಶ್ವಾಸನೆ ನೀಡಿದರು.