ಅಡಿಗರು ರಚಿಸಿದ ‘ಸುವರ್ಣ ಪುತ್ಥಳಿ’ ಕಾವ್ಯಕ್ಕೆ ನಾಡಿದ ಅತ್ಯುಚ್ಚ ಸಾಹಿತ್ಯ ಪ್ರಶಸ್ತಿಯಾದ ‘ಪಂಪ’ ಪ್ರಶಸ್ತಿ ನೀಡಲಾಗಿದ್ದು, ಆ ಪದ್ಯಕ್ಕೆ ವಸ್ತುವಾದ ಲಲಿತಾ ಅಡಿಗ ಅವರು ಈ ಪ್ರಶಸ್ತಿಯಾದ ‘ಸುವರ್ಣ ಲೇಪಿತ ವಾಗ್ದೇವಿ’ ಪುತ್ಥಳಿಯನ್ನು ಸ್ವೀಕರಿಸಬೇಕಾಗಿ ಬಂದದ್ದು ಯೋಗಾಯೋಗ. ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರು ಶಾಲು ಹೊದಿಸಿ, ಬಹುಮಾನದ ಮೊತ್ತವಾದ ಒಂದು ಲಕ್ಷ ರೂ. ಹಾಗೂ ಫಲಕ ನೀಡಿ ಸನ್ಮಾನಿಸಿದರು. ಎಂಬತ್ತರ ಹರೆಯದ ಕೇಶವಮೂರ್ತಿ ಅವರಿಗೆ ಸುವರ್ಣಲೇಪಿತ ಚೌಕಟ್ಟಿನಲ್ಲಿ ಕೀಲಿಸಿದ ತಂಬೂರಿಯುಳ್ಳ ಫಲಕ ನೀಡಿ, ಶಾಲು ಹೊದಿಸಿ, ಮುಖ್ಯಮಂತ್ರಿ ಪ್ರಶಸ್ತಿ ಪ್ರದಾನ ಮಾಡಿದರು.