ಅಣ್ಣಾ ಡಿಎಂಕೆ ಸದಸ್ಯರವರ್ತನೆಗೆ ಸ್ಪೀಕರ್ ತರಾಟೆ
ನವದೆಹಲಿ, ಆ. 17– ಕಾವೇರಿ ನ್ಯಾಯಮಂಡಲಿಯ ಮಧ್ಯಂತರ ತೀರ್ಪನ್ನು ಜಾರಿಗೊಳಿಸುವ ಸಂಬಂಧ ಸರ್ಕಾರ ಖಚಿತ ಹೇಳಿಕೆ ನೀಡಬೇಕೆಂದು ಒತ್ತಾಯಪಡಿಸಿದ ಎಐಎಡಿಎಂಕೆ ಸದಸ್ಯರು ಲೋಕಸಭೆಯಲ್ಲಿ ಇಂದು ಸಭಾಧ್ಯಕ್ಷರ ಪೀಠದ ಮುಂದೆ ಗದ್ದಲ ಎಬ್ಬಿಸಿದರು. ತಮಿಳುನಾಡಿನ ಸದಸ್ಯರ ಈ ವರ್ತನೆಯನ್ನು ಸಭಾಧ್ಯಕ್ಷ ಶಿವರಾಜ ಪಾಟೀಲ್ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.