<p><strong>ರಾಯಚೂರು: ಇನ್ನೆರಡು ಶಾಖೋತ್ಪನ್ನ ಘಟಕಗಳ ನಿರ್ಮಾಣ</strong><br /><strong>ಬೆಂಗಳೂರು, ಜೂನ್ 2–</strong> ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ 1,650 ಕೋಟಿ ರೂಪಾಯಿಗಳ ವೆಚ್ಚದ ಐದು ಮತ್ತು ಆರನೇ ಘಟಕಗಳ ನಿರ್ಮಾಣ ಕಾರ್ಯವನ್ನು ಕರ್ನಾಟಕ ವಿದ್ಯುತ್ ನಿಗಮ ಕೈಗೊಳ್ಳಲಿದೆ.</p>.<p><strong>ದಾವಣಗೆರೆಯಲ್ಲಿ ಡಕಾಯಿತಿ: ಒಬ್ಬರ ಸಾವು</strong><br /><strong>ಚಿತ್ರದುರ್ಗ, ಜೂನ್ 2–</strong> ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬೈಪಾಸ್ನ ದಾವಣಗೆರೆ ವಿನಾಯಕ ನಗರ ಬಡಾವಣೆಯಲ್ಲಿ ಇಂದು ಬೆಳಗಿನ ಜಾವ 2.30ರಲ್ಲಿ ನಡೆದ ಡಕಾಯಿತಿ ಪ್ರಕರಣದಲ್ಲಿ ಒಬ್ಬ ಸತ್ತು<br />ಎಂಟು ಮಂದಿ ಗಾಯಗೊಂಡಿದ್ದಾರೆ.</p>.<p>ಸುಮಾರು 15ರಿಂದ 20 ಮಂದಿಯಿದ್ದ ಡಕಾಯಿತರ ತಂಡವು ಮಲ್ಲೇಶಪ್ಪ ಎಂಬುವರ ಮನೆಗೆ ಸ್ಟೇರ್ಕೇಸ್<br />ಮೂಲಕ ಪ್ರವೇಶಿಸಿತು ಎನ್ನಲಾಗಿದೆ. ಶಬ್ದದಿಂದ ಮನೆಯಲ್ಲಿದ್ದವರೆಲ್ಲಾ ಎಚ್ಚರಗೊಂಡರು. ಆಗ ಡಕಾಯಿತರು ಅವರನ್ನೆಲ್ಲಾ ತೀವ್ರವಾಗಿ ಥಳಿಸಿದ್ದರಿಂದ 9 ಮಂದಿ ಗಾಯಗೊಂಡರು. ತೀವ್ರವಾಗಿ ಗಾಯಗೊಂಡಿದ್ದ ಸಿದ್ಧೇಶ್ ಹೊಟ್ಟೇನಹಳ್ಳಿ (22) ಆಸ್ಪತ್ರೆಯ ದಾರಿಯಲ್ಲಿ ಅಸುನೀಗಿದರು.</p>.<p><strong>‘ಯುನಿಷೆ ಏಪ್ರಿಲ್’ಗೆ ಸ್ವರ್ಣ ಕಮಲ ನಾನಾ– ದೇಬಶ್ರೀ ಉತ್ತಮ ನಟ,ನಟಿ</strong><br /><strong>ನವದೆಹಲಿ, ಜೂನ್ 2 (ಯುಎನ್ಐ)–</strong> 1994ನೇ ಸಾಲಿನ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗಳಿಸಿದ ರಿತುಪರ್ಣೊ ಘೋಷ್ ಅವರ ‘ಯುನಿಷೆ ಏಪ್ರಿಲ್’ ಬಂಗಾಳಿ ಚಿತ್ರಕ್ಕೆ ಸ್ವರ್ಣ ಕಮಲ ಪ್ರಶಸ್ತಿ ದೊರಕಿದೆ. ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ನಗದು ಬಹುಮಾನ ಲಭಿಸಿದೆ.</p>.<p>‘ಯುನಿಷೆ ಏಪ್ರಿಲ್’ ಚಿತ್ರದ ನಾಯಕಿ ದೇಬಶ್ರೀ ರಾಯ್ ಅವರಿಗೆ ಅತ್ಯುತ್ತಮ ನಟಿ ಹಾಗೂ ‘ಕ್ರಾಂತಿವೀರ್’ ಚಿತ್ರದ ನಟನೆಗಾಗಿ ನಾನಾ ಪಾಟೇಕರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಈ ಇಬ್ಬರಿಗೂ ತಲಾ ರಜತ ಕಮಲ ಪ್ರಶಸ್ತಿ ಹಾಗೂ 10 ಸಾವಿರ ರೂಪಾಯಿ ನಗದು ಬಹುಮಾನ ದೊರೆತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: ಇನ್ನೆರಡು ಶಾಖೋತ್ಪನ್ನ ಘಟಕಗಳ ನಿರ್ಮಾಣ</strong><br /><strong>ಬೆಂಗಳೂರು, ಜೂನ್ 2–</strong> ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ 1,650 ಕೋಟಿ ರೂಪಾಯಿಗಳ ವೆಚ್ಚದ ಐದು ಮತ್ತು ಆರನೇ ಘಟಕಗಳ ನಿರ್ಮಾಣ ಕಾರ್ಯವನ್ನು ಕರ್ನಾಟಕ ವಿದ್ಯುತ್ ನಿಗಮ ಕೈಗೊಳ್ಳಲಿದೆ.</p>.<p><strong>ದಾವಣಗೆರೆಯಲ್ಲಿ ಡಕಾಯಿತಿ: ಒಬ್ಬರ ಸಾವು</strong><br /><strong>ಚಿತ್ರದುರ್ಗ, ಜೂನ್ 2–</strong> ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬೈಪಾಸ್ನ ದಾವಣಗೆರೆ ವಿನಾಯಕ ನಗರ ಬಡಾವಣೆಯಲ್ಲಿ ಇಂದು ಬೆಳಗಿನ ಜಾವ 2.30ರಲ್ಲಿ ನಡೆದ ಡಕಾಯಿತಿ ಪ್ರಕರಣದಲ್ಲಿ ಒಬ್ಬ ಸತ್ತು<br />ಎಂಟು ಮಂದಿ ಗಾಯಗೊಂಡಿದ್ದಾರೆ.</p>.<p>ಸುಮಾರು 15ರಿಂದ 20 ಮಂದಿಯಿದ್ದ ಡಕಾಯಿತರ ತಂಡವು ಮಲ್ಲೇಶಪ್ಪ ಎಂಬುವರ ಮನೆಗೆ ಸ್ಟೇರ್ಕೇಸ್<br />ಮೂಲಕ ಪ್ರವೇಶಿಸಿತು ಎನ್ನಲಾಗಿದೆ. ಶಬ್ದದಿಂದ ಮನೆಯಲ್ಲಿದ್ದವರೆಲ್ಲಾ ಎಚ್ಚರಗೊಂಡರು. ಆಗ ಡಕಾಯಿತರು ಅವರನ್ನೆಲ್ಲಾ ತೀವ್ರವಾಗಿ ಥಳಿಸಿದ್ದರಿಂದ 9 ಮಂದಿ ಗಾಯಗೊಂಡರು. ತೀವ್ರವಾಗಿ ಗಾಯಗೊಂಡಿದ್ದ ಸಿದ್ಧೇಶ್ ಹೊಟ್ಟೇನಹಳ್ಳಿ (22) ಆಸ್ಪತ್ರೆಯ ದಾರಿಯಲ್ಲಿ ಅಸುನೀಗಿದರು.</p>.<p><strong>‘ಯುನಿಷೆ ಏಪ್ರಿಲ್’ಗೆ ಸ್ವರ್ಣ ಕಮಲ ನಾನಾ– ದೇಬಶ್ರೀ ಉತ್ತಮ ನಟ,ನಟಿ</strong><br /><strong>ನವದೆಹಲಿ, ಜೂನ್ 2 (ಯುಎನ್ಐ)–</strong> 1994ನೇ ಸಾಲಿನ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗಳಿಸಿದ ರಿತುಪರ್ಣೊ ಘೋಷ್ ಅವರ ‘ಯುನಿಷೆ ಏಪ್ರಿಲ್’ ಬಂಗಾಳಿ ಚಿತ್ರಕ್ಕೆ ಸ್ವರ್ಣ ಕಮಲ ಪ್ರಶಸ್ತಿ ದೊರಕಿದೆ. ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ನಗದು ಬಹುಮಾನ ಲಭಿಸಿದೆ.</p>.<p>‘ಯುನಿಷೆ ಏಪ್ರಿಲ್’ ಚಿತ್ರದ ನಾಯಕಿ ದೇಬಶ್ರೀ ರಾಯ್ ಅವರಿಗೆ ಅತ್ಯುತ್ತಮ ನಟಿ ಹಾಗೂ ‘ಕ್ರಾಂತಿವೀರ್’ ಚಿತ್ರದ ನಟನೆಗಾಗಿ ನಾನಾ ಪಾಟೇಕರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಈ ಇಬ್ಬರಿಗೂ ತಲಾ ರಜತ ಕಮಲ ಪ್ರಶಸ್ತಿ ಹಾಗೂ 10 ಸಾವಿರ ರೂಪಾಯಿ ನಗದು ಬಹುಮಾನ ದೊರೆತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>