<p><strong>ಖಾತೆ ಮೇಲೆ ಸಿಬಿಐ ನಿಗಾ:ಪೈಲಟ್ ಕೋರಿಕೆ</strong></p>.<p><strong>ನವದೆಹಲಿ, ಅ. 15 (ಯುಎನ್ಐ):</strong> ಕೇಂದ್ರೀಯ ತನಿಖಾ ದಳದ (ಸಿಬಿಐ) ಪತ್ತೇದಾರರು ತಮ್ಮ ಖಾತೆಯ ಮೇಲೆ ನಿಗಾ ಇರಿಸಬೇಕು ಎಂದು ಪರಿಸರ ಹಾಗೂ ಅರಣ್ಯ ಸಚಿವ ರಾಜೇಶ್ ಪೈಲಟ್ ಬಯಸಿದ್ದು ಈ ಸಂಬಂಧ ತಮ್ಮ ಲಿಖಿತ ಕೋರಿಕೆಯನ್ನು ಸದ್ಯವೇ ಗೃಹ ಖಾತೆಗೆ ಸಲ್ಲಿಸಲಿದ್ದಾರೆ.</p>.<p>ತಮ್ಮ ಕಚೇರಿಯಿರುವ ಪರ್ಯಾವರಣ ಭವನ ಹಾಗೂ ಖಾತೆಯ ಇತರ ವಿಭಾಗಗಳ ಮೇಲೆ ಸಿಬಿಐ ಕಾವಲು ನಡೆಸಬೇಕು ಎಂದು ಪೈಲಟ್ ಬಯಸಿರುವುದರ ಉದ್ದೇಶ ತಮ್ಮ ಖಾತೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಲಂಚದ ಹಾಗೂಸ್ವಜನಪಕ್ಷಪಾತದ ಆರೋಪಕ್ಕೆ ಒಳಗಾಗಬಾರದು ಎಂಬುದೇ ಆಗಿದೆ.</p>.<p>ಪರಿಸರ ಖಾತೆಯು ಉದ್ಯಮಗಳ ಸ್ಥಾಪನೆಗೆ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಪರವಾನಗಿ ನೀಡುವ ಸಂಸ್ಥೆಯಾದುದರಿಂದ ಇಂತಹ ಆರೋಪ ಬರುವ ಸಾಧ್ಯತೆಯನ್ನು ನಿರೀಕ್ಷಿಸಿ ಈ ಹೆಜ್ಜೆ ಇರಿಸಲಾಗಿದೆ. ‘ದೇಶದ ಸಮೃದ್ಧ ಜೀವವೈವಿಧ್ಯವನ್ನು ಸಂರಕ್ಷಿಸಬೇಕಾದ ನಮ್ಮ ಕೆಲಸ ಹಾಗೂ ಚಟುವಟಿಕೆ ಗಳು ಗೋಪ್ಯವಾಗಿ ನಡೆಯುವುದು ಬೇಡ’ ಎಂದು ಹೇಳಿರುವ ಅವರು ತಮ್ಮ ಖಾತೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಹಲವಾರು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.</p>.<p><strong>ಒಮ್ಮತದ ಅಭ್ಯರ್ಥಿ ಸುರೇಶ್ ಮೆಹ್ತಾ</strong></p>.<p><strong>ನವದೆಹಲಿ, ಅ. 15 (ಯುಎನ್ಐ)– </strong>ಗುಜರಾತ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯದ ಹಣಕಾಸು ಸಚಿವ ಸುರೇಶ್ ಮೆಹ್ತಾ ಅವರು ಒಮ್ಮತದ ಅಭ್ಯರ್ಥಿ ಆಗಿ ಉದಯಿಸಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಮೂಲಗಳು ಇಂದು ರಾತ್ರಿ ತಿಳಿಸಿವೆ.</p>.<p>ಈ ಮಧ್ಯೆ ರಾಜೀನಾಮೆ ನೀಡಿದ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರು ಇಂದು ಬೆಳಿಗ್ಗೆ ಹಠಾತ್ತನೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ನಾಯಕನ ಆಯ್ಕೆಗೆ ಶಾಸಕಾಂಗ ಪಕ್ಷದ ಸಭೆ ಯಾವಾಗ ನಡೆಯಬೇಕು ಎಂಬುದನ್ನು ನಾಳೆ ಕೇಶುಭಾಯಿ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಶರ್ಮಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖಾತೆ ಮೇಲೆ ಸಿಬಿಐ ನಿಗಾ:ಪೈಲಟ್ ಕೋರಿಕೆ</strong></p>.<p><strong>ನವದೆಹಲಿ, ಅ. 15 (ಯುಎನ್ಐ):</strong> ಕೇಂದ್ರೀಯ ತನಿಖಾ ದಳದ (ಸಿಬಿಐ) ಪತ್ತೇದಾರರು ತಮ್ಮ ಖಾತೆಯ ಮೇಲೆ ನಿಗಾ ಇರಿಸಬೇಕು ಎಂದು ಪರಿಸರ ಹಾಗೂ ಅರಣ್ಯ ಸಚಿವ ರಾಜೇಶ್ ಪೈಲಟ್ ಬಯಸಿದ್ದು ಈ ಸಂಬಂಧ ತಮ್ಮ ಲಿಖಿತ ಕೋರಿಕೆಯನ್ನು ಸದ್ಯವೇ ಗೃಹ ಖಾತೆಗೆ ಸಲ್ಲಿಸಲಿದ್ದಾರೆ.</p>.<p>ತಮ್ಮ ಕಚೇರಿಯಿರುವ ಪರ್ಯಾವರಣ ಭವನ ಹಾಗೂ ಖಾತೆಯ ಇತರ ವಿಭಾಗಗಳ ಮೇಲೆ ಸಿಬಿಐ ಕಾವಲು ನಡೆಸಬೇಕು ಎಂದು ಪೈಲಟ್ ಬಯಸಿರುವುದರ ಉದ್ದೇಶ ತಮ್ಮ ಖಾತೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಲಂಚದ ಹಾಗೂಸ್ವಜನಪಕ್ಷಪಾತದ ಆರೋಪಕ್ಕೆ ಒಳಗಾಗಬಾರದು ಎಂಬುದೇ ಆಗಿದೆ.</p>.<p>ಪರಿಸರ ಖಾತೆಯು ಉದ್ಯಮಗಳ ಸ್ಥಾಪನೆಗೆ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಪರವಾನಗಿ ನೀಡುವ ಸಂಸ್ಥೆಯಾದುದರಿಂದ ಇಂತಹ ಆರೋಪ ಬರುವ ಸಾಧ್ಯತೆಯನ್ನು ನಿರೀಕ್ಷಿಸಿ ಈ ಹೆಜ್ಜೆ ಇರಿಸಲಾಗಿದೆ. ‘ದೇಶದ ಸಮೃದ್ಧ ಜೀವವೈವಿಧ್ಯವನ್ನು ಸಂರಕ್ಷಿಸಬೇಕಾದ ನಮ್ಮ ಕೆಲಸ ಹಾಗೂ ಚಟುವಟಿಕೆ ಗಳು ಗೋಪ್ಯವಾಗಿ ನಡೆಯುವುದು ಬೇಡ’ ಎಂದು ಹೇಳಿರುವ ಅವರು ತಮ್ಮ ಖಾತೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಹಲವಾರು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.</p>.<p><strong>ಒಮ್ಮತದ ಅಭ್ಯರ್ಥಿ ಸುರೇಶ್ ಮೆಹ್ತಾ</strong></p>.<p><strong>ನವದೆಹಲಿ, ಅ. 15 (ಯುಎನ್ಐ)– </strong>ಗುಜರಾತ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯದ ಹಣಕಾಸು ಸಚಿವ ಸುರೇಶ್ ಮೆಹ್ತಾ ಅವರು ಒಮ್ಮತದ ಅಭ್ಯರ್ಥಿ ಆಗಿ ಉದಯಿಸಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಮೂಲಗಳು ಇಂದು ರಾತ್ರಿ ತಿಳಿಸಿವೆ.</p>.<p>ಈ ಮಧ್ಯೆ ರಾಜೀನಾಮೆ ನೀಡಿದ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರು ಇಂದು ಬೆಳಿಗ್ಗೆ ಹಠಾತ್ತನೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ನಾಯಕನ ಆಯ್ಕೆಗೆ ಶಾಸಕಾಂಗ ಪಕ್ಷದ ಸಭೆ ಯಾವಾಗ ನಡೆಯಬೇಕು ಎಂಬುದನ್ನು ನಾಳೆ ಕೇಶುಭಾಯಿ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಶರ್ಮಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>