ಶ್ರೀನಗರ, ಜುಲೈ 23 (ಪಿಟಿಐ, ಯುಎನ್ಐ)– ಗಾಯಗೊಂಡ ಇಬ್ಬರು ಒತ್ತೆಯಾಳುಗಳಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ಐವರು ವಿದೇಶಿ ಪ್ರವಾಸಿಗರನ್ನು ಒತ್ತೆಸೆರೆ ಇಟ್ಟುಕೊಂಡಿರುವ ಅಲ್ ಫರಾನ್ ಗುಂಪು ಹೇಳಿದ್ದು, ಒತ್ತೆಯಾಳುಗಳಲ್ಲಿ ಯಾರೇ ಆದರೂ ಅಸ್ವಸ್ಥರಾಗಿದ್ದರೆ ಅವರಿಗೆ ತುರ್ತು ಚಿಕಿತ್ಸೆ ಒದಗಿಸುವುದಕ್ಕಾಗಿ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರ ಒತ್ತಾಯಿಸಿದೆ.