<p><strong>ಅನಂತಮೂರ್ತಿಗೆ ಜ್ಞಾನಪೀಠ ಪ್ರಶಸ್ತಿ</strong></p>.<p><strong>ನವದೆಹಲಿ, ಡಿ. 7 (ಯುಎನ್ಐ)–</strong> ಕನ್ನಡದ ಖ್ಯಾತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಅವರಿಗೆ 1994ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇವರು ಜ್ಞಾನಪೀಠ ಪ್ರಶಸ್ತಿ ಪಡೆಯುತ್ತಿರುವ ಕನ್ನಡದ ಆರನೇ ಸಾಹಿತಿ.</p>.<p>ಸೃಜನಶೀಲ ಬರಹಕ್ಕಾಗಿ ನೀಡಲಾಗುವ ಈ ಪ್ರಶಸ್ತಿಯ ಜತೆ ಪ್ರಶಂಸಾ ಫಲಕ, ವಾಗ್ದೇವಿಯ ಕಂಚಿನ ಮೂರ್ತಿ ಹಾಗೂ 25 ಲಕ್ಷ ರೂಪಾಯಿ ನಗದು ನೀಡಲಾಗುವುದು.</p>.<p>‘ತುಂಬ ಹಿರಿಯರಿಗೆ ಸಿಕ್ಕಿದ ಗೌರವ ಇದು. ನನಗೆ ಬಹಳ ಸಂತೋಷವಾಗಿದೆ. ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಆದರೆ, ಓದುಗರಿಗೂ, ಬರಹಗಾರರಿಗೂ ಒಂದು ಸರಳವಾದ ಸಂಬಂಧ ಇರುತ್ತದೆ. ಇಂಥ ದೊಡ್ಡ ಗೌರವಗಳು ಆ ಸಂಬಂಧವನ್ನು ಕ್ಲಿಷ್ಟಗೊಳಿಸುವುದೇನೊ.....’ ಎಂದು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅನಂತಮೂರ್ತಿ ಪ್ರತಿಕ್ರಿಯಿಸಿದರು.</p>.<p><strong>‘ಕನ್ನಡಿಗರಿಗೆ ಮತ್ತೊಂದು ಕೋಡು’</strong></p>.<p><strong>ಬೆಂಗಳೂರು, ಡಿ. 7–</strong> ‘ಸೂಕ್ಷ್ಮ ಸಂವೇದನಾಶೀಲ ಸಾಹಿತಿಯಾದ ಡಾ. ಯು.ಆರ್. ಅನಂತಮೂರ್ತಿ ಅವರಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರೆಯುವುದರೊಂದಿಗೆ ಕನ್ನಡಿಗರಿಗೆ ಮತ್ತೊಂದು ಕೋಡು ಮೂಡಿದೆ’ ಎಂದು ಹಿರಿಯ ಕವಿ ಡಾ. ಪು.ತಿ. ನರಸಿಂಹಚಾರ್ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.</p>.<p>‘ಧೈರ್ಯಶಾಲಿಯಾದ ಅನಂತಮೂರ್ತಿಯವರ ಮನಸ್ಸು ಭಾರತೀಯ ಸಂಸ್ಕೃತಿ ವಿಚಾರದಲ್ಲಿ ವಿಮುಖವಾಗದೆ ಸುಮುಖವಾಗಿದೆ’ ಎಂದು ಹೇಳಿದರು.</p>.<p><strong>‘ನಿಷ್ಕರ್ಷ’ ಅತ್ಯುತ್ತಮ ಚಲನಚಿತ್ರ, ರಾಜ್ಕುಮಾರ್ ಅತ್ಯುತ್ತಮ ನಟ; ಲಕ್ಷ್ಮೀ ಶ್ರೇಷ್ಠ ನಟಿ</strong></p>.<p><strong>ಬೆಂಗಳೂರು, ಡಿ. 7–</strong> 1993–94ನೇ ಸಾಲಿನ ಕನ್ನಡ ಚಲನಚಿತ್ರ ರಾಜ್ಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು ಮೊದಲನೆ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ‘ನಿಷ್ಕರ್ಷ’ ಪಡೆದುಕೊಂಡಿದೆ.</p>.<p>‘ಒಡಹುಟ್ಟಿದವರು’ ಚಿತ್ರದಲ್ಲಿನ ರಾಮಣ್ಣನ ಪಾತ್ರಕ್ಕಾಗಿ ಡಾ. ರಾಜ್ಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ, ‘ಹೂವು ಹಣ್ಣು’ ಚಿತ್ರದ ರಮಾಬಾಯಿ ಪಾತ್ರಕ್ಕಾಗಿ ಲಕ್ಷ್ಮೀ (ಜೂಲಿ) ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅನಂತಮೂರ್ತಿಗೆ ಜ್ಞಾನಪೀಠ ಪ್ರಶಸ್ತಿ</strong></p>.<p><strong>ನವದೆಹಲಿ, ಡಿ. 7 (ಯುಎನ್ಐ)–</strong> ಕನ್ನಡದ ಖ್ಯಾತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಅವರಿಗೆ 1994ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇವರು ಜ್ಞಾನಪೀಠ ಪ್ರಶಸ್ತಿ ಪಡೆಯುತ್ತಿರುವ ಕನ್ನಡದ ಆರನೇ ಸಾಹಿತಿ.</p>.<p>ಸೃಜನಶೀಲ ಬರಹಕ್ಕಾಗಿ ನೀಡಲಾಗುವ ಈ ಪ್ರಶಸ್ತಿಯ ಜತೆ ಪ್ರಶಂಸಾ ಫಲಕ, ವಾಗ್ದೇವಿಯ ಕಂಚಿನ ಮೂರ್ತಿ ಹಾಗೂ 25 ಲಕ್ಷ ರೂಪಾಯಿ ನಗದು ನೀಡಲಾಗುವುದು.</p>.<p>‘ತುಂಬ ಹಿರಿಯರಿಗೆ ಸಿಕ್ಕಿದ ಗೌರವ ಇದು. ನನಗೆ ಬಹಳ ಸಂತೋಷವಾಗಿದೆ. ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಆದರೆ, ಓದುಗರಿಗೂ, ಬರಹಗಾರರಿಗೂ ಒಂದು ಸರಳವಾದ ಸಂಬಂಧ ಇರುತ್ತದೆ. ಇಂಥ ದೊಡ್ಡ ಗೌರವಗಳು ಆ ಸಂಬಂಧವನ್ನು ಕ್ಲಿಷ್ಟಗೊಳಿಸುವುದೇನೊ.....’ ಎಂದು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅನಂತಮೂರ್ತಿ ಪ್ರತಿಕ್ರಿಯಿಸಿದರು.</p>.<p><strong>‘ಕನ್ನಡಿಗರಿಗೆ ಮತ್ತೊಂದು ಕೋಡು’</strong></p>.<p><strong>ಬೆಂಗಳೂರು, ಡಿ. 7–</strong> ‘ಸೂಕ್ಷ್ಮ ಸಂವೇದನಾಶೀಲ ಸಾಹಿತಿಯಾದ ಡಾ. ಯು.ಆರ್. ಅನಂತಮೂರ್ತಿ ಅವರಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರೆಯುವುದರೊಂದಿಗೆ ಕನ್ನಡಿಗರಿಗೆ ಮತ್ತೊಂದು ಕೋಡು ಮೂಡಿದೆ’ ಎಂದು ಹಿರಿಯ ಕವಿ ಡಾ. ಪು.ತಿ. ನರಸಿಂಹಚಾರ್ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.</p>.<p>‘ಧೈರ್ಯಶಾಲಿಯಾದ ಅನಂತಮೂರ್ತಿಯವರ ಮನಸ್ಸು ಭಾರತೀಯ ಸಂಸ್ಕೃತಿ ವಿಚಾರದಲ್ಲಿ ವಿಮುಖವಾಗದೆ ಸುಮುಖವಾಗಿದೆ’ ಎಂದು ಹೇಳಿದರು.</p>.<p><strong>‘ನಿಷ್ಕರ್ಷ’ ಅತ್ಯುತ್ತಮ ಚಲನಚಿತ್ರ, ರಾಜ್ಕುಮಾರ್ ಅತ್ಯುತ್ತಮ ನಟ; ಲಕ್ಷ್ಮೀ ಶ್ರೇಷ್ಠ ನಟಿ</strong></p>.<p><strong>ಬೆಂಗಳೂರು, ಡಿ. 7–</strong> 1993–94ನೇ ಸಾಲಿನ ಕನ್ನಡ ಚಲನಚಿತ್ರ ರಾಜ್ಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು ಮೊದಲನೆ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ‘ನಿಷ್ಕರ್ಷ’ ಪಡೆದುಕೊಂಡಿದೆ.</p>.<p>‘ಒಡಹುಟ್ಟಿದವರು’ ಚಿತ್ರದಲ್ಲಿನ ರಾಮಣ್ಣನ ಪಾತ್ರಕ್ಕಾಗಿ ಡಾ. ರಾಜ್ಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ, ‘ಹೂವು ಹಣ್ಣು’ ಚಿತ್ರದ ರಮಾಬಾಯಿ ಪಾತ್ರಕ್ಕಾಗಿ ಲಕ್ಷ್ಮೀ (ಜೂಲಿ) ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>