<p><strong>ಅಂತಿಮ ಹಂತದ ಮತದಾನ ಶೇ 65; ಬಹುತೇಕ ಶಾಂತ</strong></p>.<p><strong>ಬೆಂಗಳೂರು, ಡಿ. 1–</strong> ಕೆಲವು ಹಿಂಸಾತ್ಮಕ ಘಟನೆಗಳೊಂದಿಗೆ ರಾಜ್ಯದ ಹತ್ತು ಜಿಲ್ಲೆಗಳ 109 ಕ್ಷೇತ್ರಗಳಲ್ಲಿ ಎರಡನೇ ಹಾಗೂ ಅಂತಿಮ ಸುತ್ತಿನ ವಿಧಾನಸಭಾ ಚುನಾವಣೆ ಕೊನೆಗೊಂಡು ಶೇಕಡ 65ರಷ್ಟು ಮತದಾನ ನಡೆದಿದೆ. ಕಲ್ಬುರ್ಗಿ ಜಿಲ್ಲೆ ಸೇಡಂನಲ್ಲಿ ವ್ಯಕ್ತಿ<br />ಯೊಬ್ಬರನ್ನು ದುಷ್ಕರ್ಮಿಗಳ ಗುಂಪೊಂದು ಅಮಾನುಷವಾಗಿ ಕಲ್ಲುಗಳಿಂದ ಜಜ್ಜಿ ಕೊಂದಿದೆ. ಔರಾದ್ ಅಭ್ಯರ್ಥಿಯೊಬ್ಬರ ಪುತ್ರ ಸ್ವಯಂ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.</p>.<p>ಮತಗಟ್ಟೆ ಏಜೆಂಟ್ ಒಬ್ಬರ ಸಾವು, ಲಘು ಲಾಠಿ ಪ್ರಹಾರ ಹಾಗೂ ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಉಳಿದೆಡೆ ಶಾಂತಿಯುತ ಮತದಾನವಾಗಿದೆ.</p>.<p><strong>ಮೇಧಾ ಪಾಟ್ಕರ್ಗೆ ಕೆ.ಎಸ್. ಹೆಗಡೆ ಪ್ರತಿಷ್ಠಾನದ ಪ್ರಶಸ್ತಿ</strong></p>.<p><strong>ಮಂಗಳೂರು, ಡಿ. 1– </strong>ಹೆಸರಾಂತ ಪರಿಸರವಾದಿ ಹಾಗೂ ನರ್ಮದಾ ಬಚಾವೋ ಅಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರಿಗೆ ನ್ಯಾಯಮೂರ್ತಿ ದಿವಂಗತ ಕೆ.ಎಸ್. ಹೆಗಡೆ ಪ್ರತಿಷ್ಠಾನದ 1994ರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ವಿಚಾರವನ್ನು ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಎನ್.ವಿನಯ್ ಹೆಗಡೆ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಂತಿಮ ಹಂತದ ಮತದಾನ ಶೇ 65; ಬಹುತೇಕ ಶಾಂತ</strong></p>.<p><strong>ಬೆಂಗಳೂರು, ಡಿ. 1–</strong> ಕೆಲವು ಹಿಂಸಾತ್ಮಕ ಘಟನೆಗಳೊಂದಿಗೆ ರಾಜ್ಯದ ಹತ್ತು ಜಿಲ್ಲೆಗಳ 109 ಕ್ಷೇತ್ರಗಳಲ್ಲಿ ಎರಡನೇ ಹಾಗೂ ಅಂತಿಮ ಸುತ್ತಿನ ವಿಧಾನಸಭಾ ಚುನಾವಣೆ ಕೊನೆಗೊಂಡು ಶೇಕಡ 65ರಷ್ಟು ಮತದಾನ ನಡೆದಿದೆ. ಕಲ್ಬುರ್ಗಿ ಜಿಲ್ಲೆ ಸೇಡಂನಲ್ಲಿ ವ್ಯಕ್ತಿ<br />ಯೊಬ್ಬರನ್ನು ದುಷ್ಕರ್ಮಿಗಳ ಗುಂಪೊಂದು ಅಮಾನುಷವಾಗಿ ಕಲ್ಲುಗಳಿಂದ ಜಜ್ಜಿ ಕೊಂದಿದೆ. ಔರಾದ್ ಅಭ್ಯರ್ಥಿಯೊಬ್ಬರ ಪುತ್ರ ಸ್ವಯಂ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.</p>.<p>ಮತಗಟ್ಟೆ ಏಜೆಂಟ್ ಒಬ್ಬರ ಸಾವು, ಲಘು ಲಾಠಿ ಪ್ರಹಾರ ಹಾಗೂ ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಉಳಿದೆಡೆ ಶಾಂತಿಯುತ ಮತದಾನವಾಗಿದೆ.</p>.<p><strong>ಮೇಧಾ ಪಾಟ್ಕರ್ಗೆ ಕೆ.ಎಸ್. ಹೆಗಡೆ ಪ್ರತಿಷ್ಠಾನದ ಪ್ರಶಸ್ತಿ</strong></p>.<p><strong>ಮಂಗಳೂರು, ಡಿ. 1– </strong>ಹೆಸರಾಂತ ಪರಿಸರವಾದಿ ಹಾಗೂ ನರ್ಮದಾ ಬಚಾವೋ ಅಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರಿಗೆ ನ್ಯಾಯಮೂರ್ತಿ ದಿವಂಗತ ಕೆ.ಎಸ್. ಹೆಗಡೆ ಪ್ರತಿಷ್ಠಾನದ 1994ರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ವಿಚಾರವನ್ನು ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಎನ್.ವಿನಯ್ ಹೆಗಡೆ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>