ಹೈದರಾಬಾದ್, ಸೆ. 7 (ಪಿಟಿಐ, ಯುಎನ್ಐ)– ಆಂಧ್ರಪ್ರದೇಶ ವಿಧಾನಸಭೆಯ ಕಲಾಪಗಳಿಗೆ ಅಡ್ಡಿ ಉಂಟು ಮಾಡಿದ ಆರೋಪದ ಮೇಲೆ, ಪದಚ್ಯುತ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ ಬೆಂಬಲಿಗರಾದ 28 ಶಾಸಕರನ್ನು ಸ್ವೀಕರ್ ವೈ. ರಾಮಕೃಷ್ಣುಡು ಅವರು ಅಮಾನತುಗೊಳಿಸಿದ ನಂತರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಇಂದು ವಿಶ್ವಾಸಮತ ಪಡೆದರು.