ನವದೆಹಲಿ, ಸೆ. 11– ಹಿರಿಯ ಐಎಎಸ್ ಅಧಿಕಾರಿ ಜೆ. ವಾಸುದೇವನ್ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳು ನಿದ್ದೆಗೆಟ್ಟು ಕುಳಿತಿರುವ ಈ ಸಂದರ್ಭದಲ್ಲಿ ‘ವಾಸುದೇವನ್ ಅವರಿಗೆ ಎಚ್ಚರಿಕೆ ನೀಡಿ ಕ್ಷಮಿಸುವಂತೆ’ ರಾಷ್ಟ್ರಪತಿಯವರಿಗೆ ಸಲಹೆ ಮಾಡುವ ವಿಷಯವನ್ನು ಕೇಂದ್ರ ಗೃಹ ಮತ್ತು ಕಾನೂನು ಸಚಿವಾಲಯ ಪರಿಶೀಲಿಸುತ್ತಿರುವುದಾಗಿ ಗೊತ್ತಾಗಿದೆ.