<p><strong>ವಾಸುದೇವನ್ಗೆ ‘ಎಚ್ಚರಿಕೆ, ಕ್ಷಮೆ’ ಸಂಭವ</strong></p>.<p><strong>ನವದೆಹಲಿ, ಸೆ. 11–</strong> ಹಿರಿಯ ಐಎಎಸ್ ಅಧಿಕಾರಿ ಜೆ. ವಾಸುದೇವನ್ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳು ನಿದ್ದೆಗೆಟ್ಟು ಕುಳಿತಿರುವ ಈ ಸಂದರ್ಭದಲ್ಲಿ ‘ವಾಸುದೇವನ್ ಅವರಿಗೆ ಎಚ್ಚರಿಕೆ ನೀಡಿ ಕ್ಷಮಿಸುವಂತೆ’ ರಾಷ್ಟ್ರಪತಿಯವರಿಗೆ ಸಲಹೆ ಮಾಡುವ ವಿಷಯವನ್ನು ಕೇಂದ್ರ ಗೃಹ ಮತ್ತು ಕಾನೂನು ಸಚಿವಾಲಯ ಪರಿಶೀಲಿಸುತ್ತಿರುವುದಾಗಿ ಗೊತ್ತಾಗಿದೆ.</p>.<p>ನ್ಯಾಯಾಲಯ ನಿಂದನೆಗಾಗಿ ವಾಸುದೇವನ್ ಅವರಿಗೆ ಸುಪ್ರೀಂ ಕೋರ್ಟ್ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ವಾಸುದೇವನ್ ಅವರಿಗೆ ಕ್ಷಮಾದಾನ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರು ಈಗಾಗಲೇ ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮಾ ಅವರ ಮೊರೆ ಹೋಗಿದ್ದಾರೆ.</p>.<p><strong>ಪ್ರಧಾನಿ ನರಸಿಂಹರಾವ್ ಹತ್ಯೆಗೆ ಎಲ್ಟಿಟಿಇ ಸಂಚು ಬಯಲು</strong></p>.<p><strong>ಕೊಲಂಬೊ, ಸೆ. 11 (ಎಪಿ)–</strong> ಪ್ರತ್ಯೇಕತಾವಾದಿ ತಮಿಳು ಉಗ್ರಗಾಮಿಗಳು (ಎಲ್ಟಿಟಿಇ) ಭಾರತದ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರನ್ನು ಹತ್ಯೆ ಮಾಡಲು ರೂಪಿಸಿದ್ದ ಸಂಚನ್ನು ಶ್ರೀಲಂಕಾದ ಪೊಲೀಸರು ಬಯಲಿಗೆಳೆದಿದ್ದಾರೆ.</p>.<p>ಶ್ರೀಲಂಕಾದ ಅಧ್ಯಕ್ಷೆ ಚಂದ್ರಿಕಾ ಕುಮಾರ ತುಂಗ ಅವರ ಹತ್ಯೆಗೆ ಸಂಚು ಮಾಡಿದ್ದನೆನ್ನಲಾದ ಶಂಕಿತ ತಮಿಳು ಉಗ್ರಗಾಮಿಯೊಬ್ಬನನ್ನು ಲಂಕಾ ಪೊಲೀಸರು ಪ್ರಶ್ನಿಸುವ ಸಂರ್ಭದಲ್ಲಿ ಈ ಗುಟ್ಟು ಬಯಲಾಯಿತು ಎಂದು ಡಿಜಿಪಿ ಎಚ್.ಎಂ.ಜಿ.ಬಿ. ಕೋಟಕಾಡೆನಿಯ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಸುದೇವನ್ಗೆ ‘ಎಚ್ಚರಿಕೆ, ಕ್ಷಮೆ’ ಸಂಭವ</strong></p>.<p><strong>ನವದೆಹಲಿ, ಸೆ. 11–</strong> ಹಿರಿಯ ಐಎಎಸ್ ಅಧಿಕಾರಿ ಜೆ. ವಾಸುದೇವನ್ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳು ನಿದ್ದೆಗೆಟ್ಟು ಕುಳಿತಿರುವ ಈ ಸಂದರ್ಭದಲ್ಲಿ ‘ವಾಸುದೇವನ್ ಅವರಿಗೆ ಎಚ್ಚರಿಕೆ ನೀಡಿ ಕ್ಷಮಿಸುವಂತೆ’ ರಾಷ್ಟ್ರಪತಿಯವರಿಗೆ ಸಲಹೆ ಮಾಡುವ ವಿಷಯವನ್ನು ಕೇಂದ್ರ ಗೃಹ ಮತ್ತು ಕಾನೂನು ಸಚಿವಾಲಯ ಪರಿಶೀಲಿಸುತ್ತಿರುವುದಾಗಿ ಗೊತ್ತಾಗಿದೆ.</p>.<p>ನ್ಯಾಯಾಲಯ ನಿಂದನೆಗಾಗಿ ವಾಸುದೇವನ್ ಅವರಿಗೆ ಸುಪ್ರೀಂ ಕೋರ್ಟ್ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ವಾಸುದೇವನ್ ಅವರಿಗೆ ಕ್ಷಮಾದಾನ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರು ಈಗಾಗಲೇ ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮಾ ಅವರ ಮೊರೆ ಹೋಗಿದ್ದಾರೆ.</p>.<p><strong>ಪ್ರಧಾನಿ ನರಸಿಂಹರಾವ್ ಹತ್ಯೆಗೆ ಎಲ್ಟಿಟಿಇ ಸಂಚು ಬಯಲು</strong></p>.<p><strong>ಕೊಲಂಬೊ, ಸೆ. 11 (ಎಪಿ)–</strong> ಪ್ರತ್ಯೇಕತಾವಾದಿ ತಮಿಳು ಉಗ್ರಗಾಮಿಗಳು (ಎಲ್ಟಿಟಿಇ) ಭಾರತದ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರನ್ನು ಹತ್ಯೆ ಮಾಡಲು ರೂಪಿಸಿದ್ದ ಸಂಚನ್ನು ಶ್ರೀಲಂಕಾದ ಪೊಲೀಸರು ಬಯಲಿಗೆಳೆದಿದ್ದಾರೆ.</p>.<p>ಶ್ರೀಲಂಕಾದ ಅಧ್ಯಕ್ಷೆ ಚಂದ್ರಿಕಾ ಕುಮಾರ ತುಂಗ ಅವರ ಹತ್ಯೆಗೆ ಸಂಚು ಮಾಡಿದ್ದನೆನ್ನಲಾದ ಶಂಕಿತ ತಮಿಳು ಉಗ್ರಗಾಮಿಯೊಬ್ಬನನ್ನು ಲಂಕಾ ಪೊಲೀಸರು ಪ್ರಶ್ನಿಸುವ ಸಂರ್ಭದಲ್ಲಿ ಈ ಗುಟ್ಟು ಬಯಲಾಯಿತು ಎಂದು ಡಿಜಿಪಿ ಎಚ್.ಎಂ.ಜಿ.ಬಿ. ಕೋಟಕಾಡೆನಿಯ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>