‘ನನಗೆ ಪ್ರಮಾಣಿಕತೆ, ನಿಷ್ಠೆ ಮತ್ತು ಆತ್ಮಸಾಕ್ಷಿ ಎಲ್ಲಕ್ಕಿಂತ ಹೆಚ್ಚಿನದು’ ಎಂದು ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸುತ್ತ ಆಂಟನಿ ಭಾವುಕರಾಗಿ ನುಡಿದರು. ಇಂಥ ತೀವ್ರ ಸ್ವರೂಪದ ಕ್ರಮ ಕೈಗೊಳ್ಳುವ ಮುನ್ನ ತಾವು ಪ್ರಧಾನಿ ನರಸಿಂಹರಾವ್ ಜತೆ ಸಮಾಲೋಚಿಸಿಲ್ಲ ಎಂದ ಅವರು, ರಾಜೀನಾಮೆ ನಿರ್ಧಾರ ಅಚಲ ಎಂದು ಸ್ಪಷ್ಟಪಡಿಸಿದರು.