ಚಂಡೀಗಡ, ಆ. 31 (ಪಿಟಿಐ, ಯುಎನ್ಐ)– ಉಗ್ರಗಾಮಿಗಳ ಉಪಟಳದಿಂದ ತತ್ತರಿಸಿದ್ದ ಪಂಜಾಬ್ನಲ್ಲಿ ಮೂರು ವರ್ಷದ ಹಿಂದೆ ಅಧಿಕಾರ ಸೂತ್ರ ಹಿಡಿದು ಶಾಂತಿ ಸ್ಥಾಪನೆ ಕಾರ್ಯದಲ್ಲಿ ಯಶಸ್ವಿಯಾಗಿದ್ದ ಮುಖ್ಯಮಂತ್ರಿ ಬೇಅಂತ್ ಸಿಂಗ್ ಇಂದು ಸಂಜೆ ಇಲ್ಲಿನ ಸಚಿವಾಲಯದ ಎದುರು ಸಂಭವಿಸಿದ ಪ್ರಬಲ ಕಾರ್ ಬಾಂಬ್ ಸ್ಫೋಟದಲ್ಲಿ ಅಸುನೀಗಿದರು.