<p><strong>ರಾಜ್ಯದಲ್ಲಿ ಶೀಘ್ರ ನೈರುತ್ಯ ರೈಲ್ವೆ ವಲಯ</strong></p>.<p><strong>ಬೆಂಗಳೂರು, ಜೂನ್ 19–</strong> ಕರ್ನಾಟಕವನ್ನು ದಕ್ಷಿಣ ರೈಲ್ವೆ ವಲಯದಿಂದ ಬೇರ್ಪಡಿಸಿ ರಾಜ್ಯಕ್ಕೇ ಪ್ರತ್ಯೇಕವಾದ ದಕ್ಷಿಣ– ಪಶ್ಚಿಮ ರೈಲ್ವೆ ವಲಯ ರಚಿಸಲು ತೀರ್ಮಾನಿಸಿದ್ದು, ಹೊಸ ರೈಲ್ವೆ ವಲಯ ಅತಿ ಶೀಘ್ರದಲ್ಲಿಯೇ ಅಸ್ತಿತ್ವಕ್ಕೆ ಬರಲಿದೆ ಎಂದು ರೈಲ್ವೆ ಸಚಿವ ಸಿ.ಕೆ.ಜಾಫರ್ ಷರೀಫ್ ಅವರು ಇಂದು<br />ಇಲ್ಲಿ ಪ್ರಕಟಿಸಿದರು.</p>.<p>ರಾಜ್ಯಕ್ಕೆ ಪ್ರತ್ಯೇಕ ರೈಲ್ವೆ ವಲಯ ರಚಿಸಬೇಕೆಂಬ ಬೇಡಿಕೆಯನ್ನು ತಾವು ಒಪ್ಪಿದ್ದು, ಉದ್ದೇಶಿತ ದಕ್ಷಿಣ– ಪಶ್ಚಿಮ ರೈಲ್ವೆ ವಲಯ ರಚನೆಗೆ ಬೇಕಾದ ಅಗತ್ಯ ಹಣಕಾಸಿನ ವ್ಯವಸ್ಥೆಯನ್ನು ಪ್ರಸ್ತುತ ಸಾಲಿನ ರೈಲ್ವೆ ಮುಂಗಡ ಪತ್ರದಲ್ಲೇ ಒದಗಿಸಿರುವುದಾಗಿ ಅವರು ಹೇಳಿದರು.</p>.<p><strong>ಹಿಂದುಳಿದ ವರ್ಗದವರಿಗೆ ಶಾಶ್ವತ ಆಯೋಗ</strong></p>.<p><strong>ಬೆಂಗಳೂರು, ಜೂನ್ 19– </strong>ಹಿಂದುಳಿದ ವರ್ಗದವರ ಶಾಶ್ವತ ಆಯೋಗ ಸ್ಥಾಪಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.</p>.<p>ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಆಯೋಗಕ್ಕೆ ಸೂಕ್ತ ಆಯುಕ್ತರನ್ನು ನೇಮಿಸುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲಾಗಿದೆ.</p>.<p>ಹಿಂದಿನ ಸರ್ಕಾರವು ಆಯೋಗವನ್ನು ರಚಿಸಿತ್ತಾದರೂ ಅದು ಕೆಲಸ ಆರಂಭಿಸಿಯೇ ಇಲ್ಲ ಎಂದು ಸಂಪುಟ ಸಭೆಯ ನಂತರ ವಾರ್ತಾ ಸಚಿವ ಎಂ.ಸಿ.ನಾಣಯ್ಯ ಅವರು ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ಯದಲ್ಲಿ ಶೀಘ್ರ ನೈರುತ್ಯ ರೈಲ್ವೆ ವಲಯ</strong></p>.<p><strong>ಬೆಂಗಳೂರು, ಜೂನ್ 19–</strong> ಕರ್ನಾಟಕವನ್ನು ದಕ್ಷಿಣ ರೈಲ್ವೆ ವಲಯದಿಂದ ಬೇರ್ಪಡಿಸಿ ರಾಜ್ಯಕ್ಕೇ ಪ್ರತ್ಯೇಕವಾದ ದಕ್ಷಿಣ– ಪಶ್ಚಿಮ ರೈಲ್ವೆ ವಲಯ ರಚಿಸಲು ತೀರ್ಮಾನಿಸಿದ್ದು, ಹೊಸ ರೈಲ್ವೆ ವಲಯ ಅತಿ ಶೀಘ್ರದಲ್ಲಿಯೇ ಅಸ್ತಿತ್ವಕ್ಕೆ ಬರಲಿದೆ ಎಂದು ರೈಲ್ವೆ ಸಚಿವ ಸಿ.ಕೆ.ಜಾಫರ್ ಷರೀಫ್ ಅವರು ಇಂದು<br />ಇಲ್ಲಿ ಪ್ರಕಟಿಸಿದರು.</p>.<p>ರಾಜ್ಯಕ್ಕೆ ಪ್ರತ್ಯೇಕ ರೈಲ್ವೆ ವಲಯ ರಚಿಸಬೇಕೆಂಬ ಬೇಡಿಕೆಯನ್ನು ತಾವು ಒಪ್ಪಿದ್ದು, ಉದ್ದೇಶಿತ ದಕ್ಷಿಣ– ಪಶ್ಚಿಮ ರೈಲ್ವೆ ವಲಯ ರಚನೆಗೆ ಬೇಕಾದ ಅಗತ್ಯ ಹಣಕಾಸಿನ ವ್ಯವಸ್ಥೆಯನ್ನು ಪ್ರಸ್ತುತ ಸಾಲಿನ ರೈಲ್ವೆ ಮುಂಗಡ ಪತ್ರದಲ್ಲೇ ಒದಗಿಸಿರುವುದಾಗಿ ಅವರು ಹೇಳಿದರು.</p>.<p><strong>ಹಿಂದುಳಿದ ವರ್ಗದವರಿಗೆ ಶಾಶ್ವತ ಆಯೋಗ</strong></p>.<p><strong>ಬೆಂಗಳೂರು, ಜೂನ್ 19– </strong>ಹಿಂದುಳಿದ ವರ್ಗದವರ ಶಾಶ್ವತ ಆಯೋಗ ಸ್ಥಾಪಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.</p>.<p>ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಆಯೋಗಕ್ಕೆ ಸೂಕ್ತ ಆಯುಕ್ತರನ್ನು ನೇಮಿಸುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲಾಗಿದೆ.</p>.<p>ಹಿಂದಿನ ಸರ್ಕಾರವು ಆಯೋಗವನ್ನು ರಚಿಸಿತ್ತಾದರೂ ಅದು ಕೆಲಸ ಆರಂಭಿಸಿಯೇ ಇಲ್ಲ ಎಂದು ಸಂಪುಟ ಸಭೆಯ ನಂತರ ವಾರ್ತಾ ಸಚಿವ ಎಂ.ಸಿ.ನಾಣಯ್ಯ ಅವರು ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>