ಗಣತಂತ್ರದ ಜೀವಶಕ್ತಿ ಬಗ್ಗೆ ನಂಬಿಕೆಯುಳ್ಳವರ ಮಾತುಗಳನ್ನು ಸಮಾಜ ಕೇಳಿಸಿಕೊಳ್ಳುತ್ತಿಲ್ಲ. ಆದರೆ, ಗಣರಾಜ್ಯವನ್ನು ನಾಶಗೊಳಿಸುವ ಪ್ರಯತ್ನದಲ್ಲಿ ಇರುವವರು ಎಲ್ಲರನ್ನೂ ಮರುಳುಗೊಳಿಸುವ ಮೋಸದ ಭಾಷೆಯನ್ನು ಯಶಸ್ವಿಯಾಗಿ ಬಳಸುತ್ತಿರುತ್ತಾರೆ. ನಮ್ಮ ಚಿಂತನೆ, ಸಂವಹನ ಮತ್ತು ನಡವಳಿಕೆಯನ್ನು ಪ್ರಜ್ಞಾಪೂರ್ವಕವಾಗಿ ಬದಲಿಸಿಕೊಳ್ಳಬೇಕಾದ ಸಮಯ ಇದು.