<p>‘ಏನ್ ಮಂಜಮ್ಮ, ಏನೈತೆ ತಿಂಡಿ?’ ಗುಡ್ಡೆ ಕೇಳಿದ.</p>.<p>‘ತಿಂಡಿ ಏನಿಲ್ಲ, ಓನ್ಲಿ ಚಾ...’ ಮಂಜಮ್ಮ ಮಸಿಬಟ್ಟೆ ಕೊಡವಿ ನಕ್ಕಳು.</p>.<p>‘ನಿಮ್ ಪಾರ್ಟೀಲಿ ಚಾ ಒಂದೇ ಗ್ಯಾರಂಟಿ. ನಮ್ ಕೈ ಪಾರ್ಟಿಗೆ ಬಾ, ಮೊಹಬ್ಬತ್ ಕಾ ದುಖಾನ್... ಅಂದ್ರೆ ಪ್ರೀತಿ ಅಂಗಡೀನೇ ಇಟ್ಟಿದೀವಿ’ ಎಂದ ಗುಡ್ಡೆ.</p>.<p>‘ಹೊಡೀರಿ ಕಪಾಳಕ್ಕೆ’ ಎಂದ ದುಬ್ಬೀರ, ‘ಲೇಯ್, ಪ್ರೀತಿ ಅಂಗಡಿ ಇಟ್ಟಿದೀವಿ ಅಂತೀರಿ, ನೀವೂ ಹೊಡಿ ಬಡಿ ಮಾತಾಡ್ತೀರಿ, ಎಲ್ಲೈತೋ ಪ್ರೀತಿ?’ ಎಂದ.</p>.<p>‘ಅಂದ್ರೆ ಹೂವಿನ ಪಾರ್ಟಿಲೇನು ಬರೀ ಹೂವಿನಂಥ ಮಾತೇ ಬರ್ತಿದಾವಾ? ಅವ್ರೂ ಬಾಯಿಗೆ ಬಂದಂಗ್ ಮಾತಾಡ್ತಿಲ್ವ?’ ಗುಡ್ಡೆಗೆ ಸಿಟ್ಟು ಬಂತು.</p>.<p>‘ನಮ್ಗೆ ದೇಶ ಮುಖ್ಯ, ಧರ್ಮ, ಸಂಸ್ಕೃತಿ ಇಟ್ಕಂಡು ರಾಜಕೀಯ ಮಾಡೋರು ನಾವು’ ಮಂಜಮ್ಮ ವಾದಿಸಿದಳು.</p>.<p>‘ಹೊಡೀರಿ ಕಪಾಳಕ್ಕೆ’ ಎಂದ ದುಬ್ಬೀರ, ‘ಬರೀ ಇ.ಡಿ, ಸಿಬಿಐ, ಇನ್ಕಂಟ್ಯಾಕ್ಸ್ ರಾಜಕೀಯ ನಿಮ್ದು, ಎಲ್ಲೈತೆ ನ್ಯಾಯ, ನೀತಿ, ಧರ್ಮ?’ ಎಂದ.</p>.<p>‘ಹಾ...ಇದಪ್ಪ ಮಾತು’ ಎಂದ ಗುಡ್ಡೆ. ಮಂಜಮ್ಮಗೂ ಸಿಟ್ಟು ಬಂತು ‘ನಿನ್ ಮೂತಿಗಿಷ್ಟು’ ಎಂದಳು. ‘ನಮ್ ಗ್ಯಾರಂಟಿಗಳನ್ನ ತಗಳ್ಳದೆ ನಿನ್ ತಾಕತ್ ತೋರ್ಸು’ ಎಂದ ಗುಡ್ಡೆ. ಮಾತಿಗೆ ಮಾತು, ಗದ್ದಲ ಶುರುವಾಯಿತು.<br>ಅಷ್ಟೆಲ್ಲ ಗದ್ದಲ ನಡೆದರೂ ತೆಪರೇಸಿ ಮಾತ್ರ ಪಿಟಿಕ್ಕನ್ನದೆ ಕೂತಿದ್ದ. ‘ಯಾಕೋ ತೆಪರ, ಏನೂ ಮಾತಾಡ್ತಿಲ್ಲ?’ ಕೇಳಿದ ಕೊಟ್ರ.</p>.<p>‘ನೋಡ್ರಪಾ, ನಂಗೆ ಈ ರಾಜಕೀಯ ಅಂದ್ರೆ ಆಗಲ್ಲ. ನಾನು ಯಾವ ಪಾರ್ಟಿಗೂ ಸೇರ್ದೋನಲ್ಲ. ನಾನೊಬ್ಬ ಸಾಮಾನ್ಯ ಮತದಾರ. ನನ್ ಪಾಡಿಗೆ ನನ್ನ ಬಿಟ್ಬಿಡಿ’ ಎಂದ ತೆಪರೇಸಿ.</p>.<p>‘ಹೊಡೀರಿ ಕಪಾಳಕ್ಕೆ’ ಎಂದ ದುಬ್ಬೀರ, ‘ಲೇಯ್, ಇದೆಲ್ಲ ನಿನ್ನಿಂದ್ಲೇ ಆಗ್ತಿರೋದು. ಮತದಾರ ಅಂತೆ. ಈ ಮತದಾರ ಅನ್ನೋನು ಒಬ್ಬ ನೆಟ್ಟಗಿದ್ದಿದ್ರೆ ರಾಜಕೀಯದೋರು ಎಲ್ರೂ ನೆಟ್ಟಗಿರೋರು’ ಎಂದ. ಎಲ್ಲರೂ ಗೊಳ್ಳಂತ ನಕ್ಕರು. ತೆಪರೇಸಿ ಪಿಟಿಕ್ಕನ್ನಲಿಲ್ಲ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>‘ಏನ್ ಮಂಜಮ್ಮ, ಏನೈತೆ ತಿಂಡಿ?’ ಗುಡ್ಡೆ ಕೇಳಿದ.</p>.<p>‘ತಿಂಡಿ ಏನಿಲ್ಲ, ಓನ್ಲಿ ಚಾ...’ ಮಂಜಮ್ಮ ಮಸಿಬಟ್ಟೆ ಕೊಡವಿ ನಕ್ಕಳು.</p>.<p>‘ನಿಮ್ ಪಾರ್ಟೀಲಿ ಚಾ ಒಂದೇ ಗ್ಯಾರಂಟಿ. ನಮ್ ಕೈ ಪಾರ್ಟಿಗೆ ಬಾ, ಮೊಹಬ್ಬತ್ ಕಾ ದುಖಾನ್... ಅಂದ್ರೆ ಪ್ರೀತಿ ಅಂಗಡೀನೇ ಇಟ್ಟಿದೀವಿ’ ಎಂದ ಗುಡ್ಡೆ.</p>.<p>‘ಹೊಡೀರಿ ಕಪಾಳಕ್ಕೆ’ ಎಂದ ದುಬ್ಬೀರ, ‘ಲೇಯ್, ಪ್ರೀತಿ ಅಂಗಡಿ ಇಟ್ಟಿದೀವಿ ಅಂತೀರಿ, ನೀವೂ ಹೊಡಿ ಬಡಿ ಮಾತಾಡ್ತೀರಿ, ಎಲ್ಲೈತೋ ಪ್ರೀತಿ?’ ಎಂದ.</p>.<p>‘ಅಂದ್ರೆ ಹೂವಿನ ಪಾರ್ಟಿಲೇನು ಬರೀ ಹೂವಿನಂಥ ಮಾತೇ ಬರ್ತಿದಾವಾ? ಅವ್ರೂ ಬಾಯಿಗೆ ಬಂದಂಗ್ ಮಾತಾಡ್ತಿಲ್ವ?’ ಗುಡ್ಡೆಗೆ ಸಿಟ್ಟು ಬಂತು.</p>.<p>‘ನಮ್ಗೆ ದೇಶ ಮುಖ್ಯ, ಧರ್ಮ, ಸಂಸ್ಕೃತಿ ಇಟ್ಕಂಡು ರಾಜಕೀಯ ಮಾಡೋರು ನಾವು’ ಮಂಜಮ್ಮ ವಾದಿಸಿದಳು.</p>.<p>‘ಹೊಡೀರಿ ಕಪಾಳಕ್ಕೆ’ ಎಂದ ದುಬ್ಬೀರ, ‘ಬರೀ ಇ.ಡಿ, ಸಿಬಿಐ, ಇನ್ಕಂಟ್ಯಾಕ್ಸ್ ರಾಜಕೀಯ ನಿಮ್ದು, ಎಲ್ಲೈತೆ ನ್ಯಾಯ, ನೀತಿ, ಧರ್ಮ?’ ಎಂದ.</p>.<p>‘ಹಾ...ಇದಪ್ಪ ಮಾತು’ ಎಂದ ಗುಡ್ಡೆ. ಮಂಜಮ್ಮಗೂ ಸಿಟ್ಟು ಬಂತು ‘ನಿನ್ ಮೂತಿಗಿಷ್ಟು’ ಎಂದಳು. ‘ನಮ್ ಗ್ಯಾರಂಟಿಗಳನ್ನ ತಗಳ್ಳದೆ ನಿನ್ ತಾಕತ್ ತೋರ್ಸು’ ಎಂದ ಗುಡ್ಡೆ. ಮಾತಿಗೆ ಮಾತು, ಗದ್ದಲ ಶುರುವಾಯಿತು.<br>ಅಷ್ಟೆಲ್ಲ ಗದ್ದಲ ನಡೆದರೂ ತೆಪರೇಸಿ ಮಾತ್ರ ಪಿಟಿಕ್ಕನ್ನದೆ ಕೂತಿದ್ದ. ‘ಯಾಕೋ ತೆಪರ, ಏನೂ ಮಾತಾಡ್ತಿಲ್ಲ?’ ಕೇಳಿದ ಕೊಟ್ರ.</p>.<p>‘ನೋಡ್ರಪಾ, ನಂಗೆ ಈ ರಾಜಕೀಯ ಅಂದ್ರೆ ಆಗಲ್ಲ. ನಾನು ಯಾವ ಪಾರ್ಟಿಗೂ ಸೇರ್ದೋನಲ್ಲ. ನಾನೊಬ್ಬ ಸಾಮಾನ್ಯ ಮತದಾರ. ನನ್ ಪಾಡಿಗೆ ನನ್ನ ಬಿಟ್ಬಿಡಿ’ ಎಂದ ತೆಪರೇಸಿ.</p>.<p>‘ಹೊಡೀರಿ ಕಪಾಳಕ್ಕೆ’ ಎಂದ ದುಬ್ಬೀರ, ‘ಲೇಯ್, ಇದೆಲ್ಲ ನಿನ್ನಿಂದ್ಲೇ ಆಗ್ತಿರೋದು. ಮತದಾರ ಅಂತೆ. ಈ ಮತದಾರ ಅನ್ನೋನು ಒಬ್ಬ ನೆಟ್ಟಗಿದ್ದಿದ್ರೆ ರಾಜಕೀಯದೋರು ಎಲ್ರೂ ನೆಟ್ಟಗಿರೋರು’ ಎಂದ. ಎಲ್ಲರೂ ಗೊಳ್ಳಂತ ನಕ್ಕರು. ತೆಪರೇಸಿ ಪಿಟಿಕ್ಕನ್ನಲಿಲ್ಲ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>