‘ಸರಿ ದೇಭರೇ, ಕೊನೆಯದಾಗಿ ಜನಕ್ಕೆ ಏನು ಸಂದೇಶ ಕೊಡ್ತೀರಿ?’ ಅಂತ ರೂಪೇಶ್ ಕೇಳಿದಾಗ ದೇಭರು ಅಂದ್ರು ‘ಅಭಿವೃದ್ಧಿನೇ ನಮ್ಮ ಗುರಿ! ಜನ ಕಾರಿಲ್ಲದಿದ್ರೂ ಕಾಲಲ್ಲಿ ನಡಕಂಡೋಗಲಿ ಅಂತ ಎಲಿವೇಟೆಡ್ ಕಾರಿಡಾರ್, ವೈಟ್ ಟಾಪಿಂಗ್ ಮಾಡಿಸಿದ್ದೀನಿ. ಭಾಗ್ಯಗಳ್ನ ಕೊಟ್ಟಿದೀನಿ, ವರ್ಷಕ್ಕೆ ದುಡ್ಡು ಕೊಡ್ತೀನಿ ಅಂತ ಹೇಳಿದೀನಿ! ಸಾಲ ಮನ್ನಾ ಅಂತ ಹೇಳಿದೀನಿ. ಇದನ್ನೆಲ್ಲಾ ನಂಬೋದು ನಿಮ್ಮ ಧರ್ಮ’ ಅಂತ ಮೇಲೆದ್ರು ದೇಭ.