<p>ಸುದಾನವಿಧದಲ್ಲಿ ಯವಾರವೊಂದನ್ನು ಮುಗಿಸಿಕೊಂಡು ಆಚೆ ಬಂದಾಗ ನಡುರಾತ್ರಿ. ‘ಲೇ ಬಡ್ಡೆತ್ತುದೆ ಬಾರ್ಲಾ ಇಲ್ಲಿ’ ಅಂತ ಯಾರೋ ಕರೆದರು. ತಿರುಗಿ ನೋಡಿದರೆ ಕೆಂಗಲ್ ಹನುಮಂತಯ್ಯನವರು ಮುಂದೆ ನಿಂತವರೆ. ‘ಸಾ ಅಡ್ಡ ಬಿದ್ದೆ. ಯಂಗಿದಿರಾ ತಂದೆ?’ ಅಂದೆ.</p>.<p>‘ನಾನು ಆರಾಮಾಗಿದೀನಿ ಕಣೋ. ಏನ್ಲಾ ಯವಾರ ನಿಂದು. ಕಾಮನ್ಸೆನ್ಸದ ನಿನಗೆ. ಕ್ಷಮಿಸಬಾರದ ತಪ್ಪು ಅದು. ನೀನು ಮನುಷ್ಯ ಜಾತಿ ಅಲ್ಲ’ ಅಂದ್ರು.</p>.<p>‘ಸಾ ಸುಮ್ಮನಿರಿ. ಕಾಮನ್ ಸೆನ್ಸು, ಕ್ಷಮೆ, ಜಾತಿ ಅನ್ನಬ್ಯಾಡಿ. ಅಪಾರ್ಥ, ಡಬಲ್ ಮೀನಿಂಗ್ ಆಯ್ತದೆ. ಈಗ ಯವಾರಕ್ಕೆ ಸುದಾನವಿಧವೇ ಸೇಫು ಸಾ’ ಅಂದೆ.</p>.<p>‘ನಮ್ಮ ರಾಜಕಾರಣಿಗಳೆಲ್ಲಾ ಹೆಂಗವರೆ?’ ಅಂದ್ರು ಕೆಂಗಲ್.</p>.<p>‘ಸಾ ಈಗ ಕರ್ನಾಟಕದ ರಾಜಕಾರಣಿಗಳಿಗೆ ಭಾರಿ ಬೆಲೆ ಅದೆ! ಹಿಂಗಿಂಗೆ ಈತರಕೀತರಾ... ನೀವೇನಂತೀರಾ?’ ಅಂದೆ. ಕೆಂಗಲ್ಲು ಜೋರಾಗಿ ಕ್ಯಾಕರಿಸಿದರು.</p>.<p>‘ಹ್ಞೂಂ ಕಣಪ್ಪಾ ನಿಮ್ಮಂತಾ ಮಾನಗೆಟ್ಟೋರಿಗೆ ಅಭಿನಂದನೆ ಸಲ್ಲಿಸಬೇಕು’ ಅಂದ್ರು. ‘ಸಾ ಅಭಿನಂದನೆ ಅನ್ನಬ್ಯಾಡಿ ನೀತಿ ಸಂಹಿತೆ ಅಡ್ಡ ಬತ್ತದೆ’ ಅಂದೆ.</p>.<p>‘ಲೋಕಸಭೆಗೆ ಮಂಡೇದಲ್ಲಿ ಕ್ಯಾಂಡಿಡೇಟು ಯಾರ್ಲಾ?’ ಅಂದ್ರು. ‘ಸಾ ಮೈತ್ರಿಗೆ ವಿರುದ್ಧ ಮಾತಾಡಂಗಿಲ್ಲ. ಮರಾಮತ್ ಇಲಾಖೆ ಮಂತ್ರಿಗಳು ಶಾಪ ಕೊಡ್ತರೆ’ ಅಂತಂದೆ.</p>.<p>‘ನೋಡ್ಲಾ ಸುದಾನವಿಧ ಕಟ್ದೋರು ಕೈದಿಗಳು ಕಣೋ. ನಿಷ್ಠೆಯಿಂದ ಶ್ರಮದಾನ ಮಾಡಿ ಪಾಪ ಕಳಕಂಡು ನೆಮ್ಮದಿಯಾಗಿ ಸತ್ತೋದ್ರು’ ಅಂತ ವ್ಯಥೆಪಟ್ಟರು ಕೆಂಗಲ್. ನಾನು ತಲೆಕೆರಕಂಡು ಸುಮ್ಮನಾದೆ.</p>.<p>‘ಓಹೋ ಗೊತ್ತಾಯ್ತು ಬುಡ್ಲಾ. ಸುದಾನವಿಧ ಕಟ್ಟಿದ ಮೇಲೆ ಕೈದಿಗಳ ಪಾಪಗಳೆಲ್ಲಾ ಬುಟ್ಟೋಗಿ ಮರಕ್ಕೆ ನ್ಯಾತಾಕಿಕೊಂಡಿದ್ದೊ. ಈಗ ಅವೆಲ್ಲಾ ವಾಪಾಸ್ ಬಂದು ಸುದಾನವಿಧದೊಳಕ್ಕೆ ಬಂದೋರನ್ನೆಲ್ಲಾ ಅಮಿಕ್ಕಂತಾವೆ!’ ಅಂದ್ರು.</p>.<p>ನನಗೆ ಪರಮ ಸತ್ಯದ ದರ್ಶನವಾಗಿ, ಬೆನ್ನ ಮೇಲೆ ಯಾರೋ ಕೂತು ಗುಮ್ಮತಾ ಇದ್ದಂಗೆ ಅನ್ನಿಸಿತು. ಕೆಂಗಲ್ಲು ತಲೆ ಚಚ್ಚಿಕೊಂಡು ಹೋಯ್ತಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುದಾನವಿಧದಲ್ಲಿ ಯವಾರವೊಂದನ್ನು ಮುಗಿಸಿಕೊಂಡು ಆಚೆ ಬಂದಾಗ ನಡುರಾತ್ರಿ. ‘ಲೇ ಬಡ್ಡೆತ್ತುದೆ ಬಾರ್ಲಾ ಇಲ್ಲಿ’ ಅಂತ ಯಾರೋ ಕರೆದರು. ತಿರುಗಿ ನೋಡಿದರೆ ಕೆಂಗಲ್ ಹನುಮಂತಯ್ಯನವರು ಮುಂದೆ ನಿಂತವರೆ. ‘ಸಾ ಅಡ್ಡ ಬಿದ್ದೆ. ಯಂಗಿದಿರಾ ತಂದೆ?’ ಅಂದೆ.</p>.<p>‘ನಾನು ಆರಾಮಾಗಿದೀನಿ ಕಣೋ. ಏನ್ಲಾ ಯವಾರ ನಿಂದು. ಕಾಮನ್ಸೆನ್ಸದ ನಿನಗೆ. ಕ್ಷಮಿಸಬಾರದ ತಪ್ಪು ಅದು. ನೀನು ಮನುಷ್ಯ ಜಾತಿ ಅಲ್ಲ’ ಅಂದ್ರು.</p>.<p>‘ಸಾ ಸುಮ್ಮನಿರಿ. ಕಾಮನ್ ಸೆನ್ಸು, ಕ್ಷಮೆ, ಜಾತಿ ಅನ್ನಬ್ಯಾಡಿ. ಅಪಾರ್ಥ, ಡಬಲ್ ಮೀನಿಂಗ್ ಆಯ್ತದೆ. ಈಗ ಯವಾರಕ್ಕೆ ಸುದಾನವಿಧವೇ ಸೇಫು ಸಾ’ ಅಂದೆ.</p>.<p>‘ನಮ್ಮ ರಾಜಕಾರಣಿಗಳೆಲ್ಲಾ ಹೆಂಗವರೆ?’ ಅಂದ್ರು ಕೆಂಗಲ್.</p>.<p>‘ಸಾ ಈಗ ಕರ್ನಾಟಕದ ರಾಜಕಾರಣಿಗಳಿಗೆ ಭಾರಿ ಬೆಲೆ ಅದೆ! ಹಿಂಗಿಂಗೆ ಈತರಕೀತರಾ... ನೀವೇನಂತೀರಾ?’ ಅಂದೆ. ಕೆಂಗಲ್ಲು ಜೋರಾಗಿ ಕ್ಯಾಕರಿಸಿದರು.</p>.<p>‘ಹ್ಞೂಂ ಕಣಪ್ಪಾ ನಿಮ್ಮಂತಾ ಮಾನಗೆಟ್ಟೋರಿಗೆ ಅಭಿನಂದನೆ ಸಲ್ಲಿಸಬೇಕು’ ಅಂದ್ರು. ‘ಸಾ ಅಭಿನಂದನೆ ಅನ್ನಬ್ಯಾಡಿ ನೀತಿ ಸಂಹಿತೆ ಅಡ್ಡ ಬತ್ತದೆ’ ಅಂದೆ.</p>.<p>‘ಲೋಕಸಭೆಗೆ ಮಂಡೇದಲ್ಲಿ ಕ್ಯಾಂಡಿಡೇಟು ಯಾರ್ಲಾ?’ ಅಂದ್ರು. ‘ಸಾ ಮೈತ್ರಿಗೆ ವಿರುದ್ಧ ಮಾತಾಡಂಗಿಲ್ಲ. ಮರಾಮತ್ ಇಲಾಖೆ ಮಂತ್ರಿಗಳು ಶಾಪ ಕೊಡ್ತರೆ’ ಅಂತಂದೆ.</p>.<p>‘ನೋಡ್ಲಾ ಸುದಾನವಿಧ ಕಟ್ದೋರು ಕೈದಿಗಳು ಕಣೋ. ನಿಷ್ಠೆಯಿಂದ ಶ್ರಮದಾನ ಮಾಡಿ ಪಾಪ ಕಳಕಂಡು ನೆಮ್ಮದಿಯಾಗಿ ಸತ್ತೋದ್ರು’ ಅಂತ ವ್ಯಥೆಪಟ್ಟರು ಕೆಂಗಲ್. ನಾನು ತಲೆಕೆರಕಂಡು ಸುಮ್ಮನಾದೆ.</p>.<p>‘ಓಹೋ ಗೊತ್ತಾಯ್ತು ಬುಡ್ಲಾ. ಸುದಾನವಿಧ ಕಟ್ಟಿದ ಮೇಲೆ ಕೈದಿಗಳ ಪಾಪಗಳೆಲ್ಲಾ ಬುಟ್ಟೋಗಿ ಮರಕ್ಕೆ ನ್ಯಾತಾಕಿಕೊಂಡಿದ್ದೊ. ಈಗ ಅವೆಲ್ಲಾ ವಾಪಾಸ್ ಬಂದು ಸುದಾನವಿಧದೊಳಕ್ಕೆ ಬಂದೋರನ್ನೆಲ್ಲಾ ಅಮಿಕ್ಕಂತಾವೆ!’ ಅಂದ್ರು.</p>.<p>ನನಗೆ ಪರಮ ಸತ್ಯದ ದರ್ಶನವಾಗಿ, ಬೆನ್ನ ಮೇಲೆ ಯಾರೋ ಕೂತು ಗುಮ್ಮತಾ ಇದ್ದಂಗೆ ಅನ್ನಿಸಿತು. ಕೆಂಗಲ್ಲು ತಲೆ ಚಚ್ಚಿಕೊಂಡು ಹೋಯ್ತಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>