‘ಓ... ಇದು ನಮ್ಮ ಕಟೀಲ್ ಸಾಹೇಬ್ರ ಮಾತು. ಕಾಪಿ ಹೊಡೀಬೇಡ ಮಗನೆ, ಸ್ವಂತ ಮಾತಾಡು’ ದುಬ್ಬೀರ ನಕ್ಕ.
‘ನಮ್ಮ ರಾಜಕಾರಣಿಗಳಿಗೆ ಈ ಕಣ್ಣೀರು ಹಾಕೋದು ಒಂದು ಚಾಳಿ ಆಗೇತಪ. ಈಟೀಟುಕು ಅಳ್ತಾರೆ, ಯಾಕಂಗೆ?’
‘ಯಾಕೇಂದ್ರೆ? ಅದು ಅವರಿಷ್ಟ’ ಗುಡ್ಡೆ ಕಿಸಕ್ಕೆಂದ.
‘ಏಯ್, ಅವರಿಷ್ಟ ಅಂದ್ರೆ ಮನೇಲಿ ಕುತ್ಕಂಡು ಅಳಬೇಕು. ಟಿ.ವಿ.ಯೋರ ಮುಂದೆ ಯಾಕೆ ಅಳಬೇಕು? ಮೊದ್ಲೇ ಟಿ.ವಿ.ಯೋರು ಈ ರಾಜಕಾರಣಿ ಯಾಕೆ ಅತ್ತ, ಎಷ್ಟ್ ಅತ್ತ, ಯಾರನ್ನ ನೆನೆಸ್ಕಂಡು ಅತ್ತ, ಆ ರಹಸ್ಯ ನಾವು ಬಯಲು ಮಾಡ್ತೀವಿ ಅಂತ ಕುಯ್ತಾರೆ ಅದ್ಕೆ ಹೇಳಿದೆ’.
‘ಹೋಗ್ಲಿ ಬಿಡ್ರಲೆ, ಅವ್ರು ಒಂದ್ಸಲ ಅತ್ತು ಅಧಿಕಾರಕ್ಕೆ ಬರ್ತಾರೆ, ನಾವು ಒಂದ್ಸಲ ವೋಟ್ ಹಾಕಿ ಐದು ವರ್ಷ ಅಳ್ತೀವಿ. ಈಗ ನಮ್ಮ ತೆಪರೇಸಿ ಯಾಕೆ ಅತ್ತ ಅದನ್ನ ಕೇಳ್ರಿ’ ದುಬ್ಬೀರ ಟ್ರ್ಯಾಕಿಗೆ ಬಂದ.