ಮೊನ್ನೆ ಮೊನ್ನೆ, ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿಯವರನ್ನ ಅದ್ಯಾರೋ ‘ಮುದುಕ’ ಅಂತ ಕರದಿದ್ದಕ ಮನಗೂಳಿ ಕಾಕಾಗ ಅನಗಾಡ ಸಿಟ್ಟು ಬಂದು ಕುಂತಕುಂತಲ್ಲೇ ಕಣ್ ಕಿಸ್ತು, ‘ನಾಕಿಪ್ಪತ್ತು ವಯಸ್ಸು ದಾಟಿದ ಮ್ಯಾಗೂ ಸುತ್ತ ಇಪ್ಪತ್ತು ಹಳ್ಳಿ ಸುಸ್ತಾಗದಂಗ ದಿನಾ ತಿರಗಾಡ್ತೀನಿ ಮಕ್ಕಳೇ... ಕಟ್ಟೀ ಮ್ಯಾಲ ಕುಂತು ಕಂಡಾಪಟಿ ದೇಶಾವರಿ ಮಾತಾಡೋ ನೀವು ಏನು ಕಡೀತೀರಿ ಹೇಳ್ರಿ. ಲಗ್ನ ಇಲ್ಲ ಮುಂಜಿ ಇಲ್ಲ ಈಗಲೇ ಎಲ್ಲಾ ಮುಗದಂಗ ಮುದುಡಿ ಕುಂತೀರಿ, ಮತ್ತ ಹೊಳ್ಳಿ ನನಗೇ ಮುದಕ ಅಂತೀರಿ...’ ಅಂದಿದ್ದೇ ತಡ, ಅಲ್ಲಿದ್ದವರೆಲ್ಲಾ ಹೌ ಹಾರದಂಗ ಆಗಿ, ‘ಆಯ್ತರೀ ಕಾಕಾ, ಇನ್ನೊಮ್ಮ ತಪ್ಪೀನೂ ಮುದಕ ಅನ್ನೂವಂಗಿಲ್ಲರೀ’ ಅಂದರು.