‘ನೀ ಬೈದಿದ್ದಕ್ಕೆ ಅಲ್ಲಲೇ... ಎಷ್ಟಕೊಂದು ರಾಜ್ಯದಾಗೆ ಚುನಾವಣೆ ಕಾವು ಏರೈತಿ, ಈ ಬಡ್ಡಿದರ ಕಡಿತ ಉಲ್ಟಾ ತಮ್ಮನ್ನೇ ಸುಡತೈತಿ ಅಂತ್ಹೇಳಿ ವಾಪಸು ತಂಗಂಡಾರ. ಹಂಗಾರೆ ನಿಮ್ಮ ಈಶೂಮಾಮ ವಾಪಸು ಕಳಿಸಿದ ಫೈಲಿಗೆ ಯೆಡ್ಯೂರಜ್ಜಾರು ಸಹಿ ಹಾಕಿ, ಅರವತ್ತೈದು ಕೋಟಿ ರೂಪಾಯಿ ಕಾಮಗಾರಿ ತಮ್ಮ ಸಂಬಂಧಿಗೆ ಮಂಜೂರು ಮಾಡ್ಯಾರಂತಲ್ಲ, ಅದನ್ನೂ ಕಣ್ತಪ್ಪಿನಿಂದ ಅಂತ್ಹೇಳಿ ವಾಪಸು ತಗಳಕ್ಕೆ ಅಜ್ಜಾರಿಗೆ ಹೇಳಲೇ’ ಎಂದೆ.